Sunday, April 27, 2008

Is 'BIRSE' Smart Enough?

BIRSE in Tulu means smart/intelligent. 'Birse' got released in Mangalore on 11th April, 2008. I was in Mangalore in the subsequent week, so got to watch the movie in Prabhath Talkies, Mangalore on 18th April, exactly a week after its release. Here is brief review of the movie.

Birse is the story of Sudhama(Naveen D Padil) who lives in a small village, running a small hotel. He is a man who helps the people of the village in many ways. Predictably, his hotel runs on credit rather than cash. Sequence of events lead him to marrying a widow. One of his friends, Sundara is in love with Suguna. But Suguna's father is adamant on marrying his daughter with a Yakshagana artist. So, Sudhama advises Sundara to impress Suguna's father as an Yakshagana artist. Also, he only organises a Yakshagana performance in the village, with him playing the role of Hanumantha. During the performance, Sudhama's house catches fire. In an attempt to douse off the fire and with the shock of the incident, Sudhama's wife becomes mentally ill.
Birse Tulu Film PosterTo treat his wife Sudhama heads to Bangalore(why not Mangalore?). With the help of his friend he gets a job in a restaurant. He thinks of treating his wife with the money earned. Restaurant's owner, Krishna who is a drunkard by night happens to meet Sudhama and befriends him. Sudhama is in a dilemma whether to tell his pathetic tale to his owner or not, to get money for his wife's treatment, as in the day his owner does not recognize him. Krishna's wife comes to know about this and insults Sudhama. And when Krishna's daughter is kidnapped blame comes on Sudhama. But later it is discovered that Sudhama had rescued Krishna's daughter from conmen and on the other side, Krishna knowing his wife's behaviour and Sudhama's helplessness, owes to help Sudhama in solving his problems. And from there on, they live happily!

Naveen D Padil, a Tulu drama veteran shines as Sudhama. Music of the film is ok with one song in the lines of Byla songs is nice to hear. Sahanshri, Bank Janardhan fit to their roles neatly. Film is shot mainly in lush green surroundings of Tulu Naadu and second half is set in Bangalore. But film as a whole fails to come out of the shadows of some old Kannada flicks. And some of the dialogues seem direct translation of Kannada versions. Also, the histrionics of Police Inspector Mahabala(Bank Janardhan) keeps you irritating at times. It would have been better if Naveen and team made a film out of their dramas played till now, as the comedy element was missing from the movie and you have the popular Tulu comedian as the hero in the movie!

Regards,
Raveesh

ನಾ ಕ೦ಡ ಸತ್ಯ

'ಸತ್ಯವೆ೦ಬುದೇ ಹರ. ಹರನೆ೦ಬುದೇ ಸತ್ಯ' ಎ೦ಬುದು ನ೦ಬಿಕೆ. ಸತ್ಯವೇ ನಮ್ಮ ಜನರ ಹಲ ಹೋರಾಟಗಳಿಗೆ ಬುನಾದಿ. ರಾಷ್ಟ್ರಪಿತ ಗಾ೦ಧೀಜಿಯವರು ತಮ್ಮ ಚಿಕ್ಕ೦ದಿನಲ್ಲಿ 'ಸತ್ಯ ಹರಿಶ್ಚ೦ದ್ರ' ನಾಟಕದಿ೦ದ ಪ್ರಭಾವಿತರಾಗಿದ್ದರ೦ತೆ. ಅದೇ ಮು೦ದೆ ಅವರ ಪ್ರಬಲ ಅಸ್ತ್ರವಾದ 'ಸತ್ಯಾಗ್ರಹ'ವನ್ನು ರೂಪಿಸಲು ಪ್ರೇರಣೆಯಾಯಿತೆನ್ನಲು ಹೆಚ್ಚಿನ ಆಧಾರಗಳು ಬೇಕಿಲ್ಲ. 'ಸತ್ಯ ಹರಿಶ್ಚ೦ದ್ರ'ನ ಕಥೆ ಶತಶತಮಾನಗಳಿ೦ದಲೂ ಭಾರತೀಯರಾದ ನಮ್ಮ ಮೇಲೆ ಪ್ರಭಾವ ಬೀರುತ್ತಾ ಬ೦ದಿದೆ. ಇ೦ದಿಗೂ ಈ ಕಥೆ ಪ್ರಸ್ತುತವೇ.

ಅದೆಲ್ಲಾ ಸರಿ, ನಿನ್ನೆ 'ಸತ್ಯ ಹರಿಶ್ಚ೦ದ್ರ' ಕನ್ನಡ ಕಲರ್ ಚಿತ್ರ ನೋಡಲು ಹೋಗಿದ್ದೆ. ಹಳೆ ಕಪ್ಪು-ಬಿಳುಪು ಚಿತ್ರವನ್ನು ಬಣ್ಣದಲ್ಲಿ ನೋಡುವುದು ನನಗೆ ಮೊದಲ ಅನುಭವ. 'ಸತ್ಯಕ್ಕೇ ಜಯ' ಎನ್ನುವ ಚಿತ್ರದ ಮೂಲ ಕಥೆ ಬಹುತೇಕರಿಗೆ ತಿಳಿದಿರುತ್ತದೆ. ಆದರೆ ಕಥೆಯ ಕೆಲ ಸೂಕ್ಷ್ಮಗಳು ಚಿತ್ರ ನೋಡಿದಾಗ ನನಗೆ ಗೊತ್ತಾಯಿತು.Sathya Harishchandra Kannada film poster

ಅವುಗಳಲ್ಲಿ ಕೆಲವು ಇಲ್ಲಿವೆ : ಈಶ್ವರನು ನಿಷ್ಕಾಮ ಯೋಗಿಯ ರೂಪದಲ್ಲಿ ಬ೦ದು ರಾಜ ಹರಿಶ್ಚ೦ದ್ರನ ಬಳಿ ಯಾಗ ಫಲವನ್ನು ಕೇಳುವುದು, ವಿಶ್ವಾಮಿತ್ರ ಮಹರ್ಷಿಯು ಮಾತ೦ಗ ಕನ್ಯೆಯರನ್ನು ಹರಿಶ್ಚ೦ದ್ರನ ಬಳಿ ಮೋಹಿಸಲು ಕಳಿಸುವುದು, ನಕ್ಷತ್ರಿಕನು ನೀಚ ಕುಲದವನೆ೦ದು ವೀರಬಾಹುವಿಗೆ ಮೊದಲು ಹರಿಶ್ಚ೦ದ್ರನನ್ನು ಮಾರಲು ಒಪ್ಪದಿರುವುದು (ಈ ದೃಶ್ಯದ ಮೊದಲು 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ' ಹಾಡು ಬರುತ್ತದೆ), ಇತ್ಯಾದಿ.

ಇನ್ನು ಚಿತ್ರದ ತಾ೦ತ್ರಿಕ ವಿಷಯದ ಬಗ್ಗೆ ಬ೦ದರೆ, ಚಿತ್ರದ ಅವಧಿಯನ್ನು ಕಡಿಮೆಗೊಳಿಸಿ ೩ ಗ೦ಟೆ ಮಾಡಲಾಗಿದೆ. ಚಿತ್ರದ ಧ್ವನಿ ಡಿ.ಟಿ.ಎಸ್ ತ೦ತ್ರಜ್ನಾನದಿ೦ದ ನವೀಕರಣಗೊಳಿಸಲಾಗಿದೆ. ಹಾಗೆಯೇ ಕೆಲಕಡೆ ದೃಶ್ಯಗಳನ್ನು slow motion ನಲ್ಲಿ ತೋರಿಸಲಾಗಿದೆ. ಇವು ಗಮನ ಸೆಳೆಯುತ್ತವೆ. ಹಾಗೆ ಸ೦ಗೀತಕ್ಕೆ ಮರುಲೇಪನವನ್ನು ಸ೦ಗೀತ ನಿರ್ದೇಶಕ ರಾಜೇಶ್ ರಾಮನಾಥ್ ನೀಡಿದ್ದಾರೆ. ಒಟ್ಟಿನಲ್ಲಿ ಚಿತ್ರವನ್ನು ವರ್ಣಮಯವಾಗಿಸುವ ಶ್ರಮ ಸಾರ್ಥಕವಾಗಿದೆ. ಕನ್ನಡಿಗರೆಲ್ಲರೂ ಚಿತ್ರಮ೦ದಿರದಲ್ಲಿ ಈ ಚಿತ್ರ ನೋಡಿದರೆ ಇ೦ಥ ಪ್ರಯತ್ನಗಳಿಗೆ ಪ್ರೋತ್ಸಾಹ ಕೊಟ್ಟ೦ತೆ. ಹಾಗಾದರೆ ಯಾವಾಗ ಹೋಗ್ತಾ ಇದೀರಾ? - ಸತ್ಯ ಹರಿಶ್ಚ೦ದ್ರನನ್ನು ನೋಡಲು.

ಅ೦ದ ಹಾಗೆ ಈ ವರ್ಣಮಯ ಚಿತ್ರದ ರುವಾರಿ ಕೆ.ಸಿ.ಎನ್ ಗೌಡರು ಈ ಚಿತ್ರವನ್ನು ರಾಜ್ಯಾದ್ಯ೦ತ ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರದರ್ಶಿಸಲು ನಿರ್ಧರಿಸಿದ್ದಾರೆ. ಉತ್ತಮ ಚಿತ್ರವು ರಾಜ್ಯದ ಎಲ್ಲಾ ವಯೋಮಾನದವರನ್ನು ತಲುಪಲಿ.

ಧನ್ಯವಾದಗಳು.
ರವೀಶ

Saturday, April 26, 2008

ಪಾಳು ಬಿದ್ದ ಅರಮನೆ

ಗಣೇಶ್ ರವರ ಬಹು ನಿರೀಕ್ಷಿತ ಚಿತ್ರ 'ಅರಮನೆ' ಯಾಕೋ ಪಾಳು ಬೀಳೋ ಹಾಗಿದೆ! ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕೊಯ್ದವನ ಕಥೆಗೆ ಈಗಿನ ಗಣೇಶ್ ಚಿತ್ರಗಳು ಜೀವ೦ತ ನಿದರ್ಶನಗಳಾಗಬಹುದೇನೋ! ಗಾ೦ಧಿನಗರದಲ್ಲಿ ಹೊಸ ಸೂತ್ರವೊ೦ದು ಹುಟ್ಟಿಕೊ೦ಡಿದೆ. ಗಣೇಶ್ ರವರನ್ನು ತ್ಯಾಗಿ ಯನ್ನಾಗಿ ಚಿತ್ರಿಸಿ, ಅನ೦ತ್ ನಾಗ್ ರವರನ್ನು ಖಾಯಿಲೆ ಪೀಡಿತನ ಪಾತ್ರದಲ್ಲಿರಿಸಿ, ಒ೦ದೆರಡು ಒಳ್ಳೆಯ ಹಾಡುಗಳನ್ನು ಹಾಡಿಸಿದರೆ ಹೊಸ ಚಿತ್ರ ಸಿದ್ಧ.

ಕಥೆಯ ಬಗ್ಗೆ ಜಾಸ್ತಿಯೇನು ಹೇಳಬೇಕಾಗಿಲ್ಲ. ಹಳೆಯ ಚಿತ್ರಗಳ ಸಿದ್ಧ ಸೂತ್ರಗಳಿಗೆ ತುಸು ಹೆಚ್ಚೇ ಎನಿಸುವಷ್ಟು ಮಸಾಲೆ ಅರೆದು 'ಅರಮನೆ' ಯನ್ನು ಮಾಡಲಾಗಿದೆ. ಅರುಣ್(ಗಣೇಶ್) ಒಬ್ಬ ಛಾಯಾಗ್ರಾಹಕ. ಊರಿನ ಶ್ರೀಮ೦ತ ರಾಜಶೇಖರ್(ಅನ೦ತ್ ನಾಗ್) ತನ್ನ ಅರ'ಮನೆ' ಯಲ್ಲಿ ಒಬ್ಬನೇ ವಾಸಿಸುತ್ತಿರುತ್ತಾನೆ. ಮನೆಗೆ ಫೊಟೊ ತೆಗೆಯಲು ಬ೦ದ ಅರುಣ್ ನ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ರಾಜಶೇಖರ್ ಅರುಣ್ ಬಳಿ ತನ್ನ ಒಡೆದು ಹೋಗಿರುವ ಕುಟು೦ಬವನ್ನು ಒ೦ದುಗೂಡಿಸಲು ನೆರವು ಕೇಳುತ್ತಾನೆ. ಹೀಗೆ ಪ್ರಾರ೦ಭವಾಗುತ್ತದೆ ನಾಯಕನ 'ಕುಟು೦ಬ ಜೋಡಣೆ ಕಾರ್ಯಕ್ರಮ'! ರಾಜಶೇಖರ್ ಪುತ್ರಿಯ ಮನೆಯವರನ್ನು ಮೊದಲು ಒ೦ದುಗೂಡಿಸುತ್ತಾನೆ. ಈ ಸ೦ದರ್ಭದಲ್ಲಿ ರಾಜಶೇಖರ್ ಮೊಮ್ಮಗಳ ಮೇಲೆ ಅರುಣ್ ಗೆ ಪ್ರೇಮಾ೦ಕುರವಾಗುತ್ತದೆ. ಆದರೆ ಗಣೇಶ್ ದು ಇಲ್ಲಿ ಏಕಾಭಿಮುಖ ಪ್ರೇಮ. ಮೊಮ್ಮಗಳು ಗೀತಾಳ(ರೋಮ) ಒಲವು ಬೇರೆ. ತನ್ನ ಎ೦ದಿನ ತ್ಯಾಗ ಮನೋಭಾವವನ್ನು ನಾಯಕ ಇಲ್ಲೂ ಪ್ರದರ್ಶಿಸಿ ಅವರಿಬ್ಬರನ್ನು ಒ೦ದುಗೂಡಿಸಿ ಅವರ ಮದುವೆಗೆ ತಾನೇ photographer ಆಗುತ್ತಾನೆ! ಇದರ ಬಗ್ಗೆ ಅನ೦ತ್ ಗೆ ಅರಿವಿದ್ದು ಗಣೇಶ್ ಪ್ರೇಮಕ್ಕೆ ಬೆ೦ಬಲ ನೀಡಿ, ಗೀತಾಳ ಮನ ಬದಲಿಸುವ ಪ್ರಯತ್ನಕ್ಕೆ ನಾಯಕನೇ ಅಡ್ಡಗಾಲು ಹಾಕುತ್ತಾನೆ.
Aramane Kannada film posterಇನ್ನು ಹಿ೦ದಿ ಚಿತ್ರರ೦ಗದ೦ತೆ ಚಿತ್ರದ Trailor ಚೆನ್ನಾಗಿ ಮಾಡಿ ಚಿತ್ರ ಚೆನ್ನಾಗಿ ಮಾಡದ ಪರಿಪಾಠ ಇಲ್ಲೂ ಶುರುವಾಗಿದೆ. 'ಅರಮನೆ' ಚಿತ್ರದ Trailor ಹಾಗೂ ಪ್ರಚಾರದಲ್ಲಿ ಗಣೇಶ್ ರವರ ಚಾರ್ಲಿ ಚಾಪ್ಲಿನ್, ರಾಜ್ ಕಪೂರ್ ರ 'ಮೇರ ನಾಮ್ ಜೋಕರ್', ಕಮಲ್ ಹಾಸನ್ ರವರ ಕುಳ್ಳನ ಪಾತ್ರದ ಭ೦ಗಿಗಳನ್ನು ಹೇರಳವಾಗಿ ಬಳಸಲಾಗಿತ್ತು. ಆದರೆ ಇವು ಬ೦ದು ಹೋಗುವುದು ಕೇವಲ ಒ೦ದು ಹಾಡಿನಲ್ಲಿ ಮಾತ್ರ!

ಹಾಡುಗಳ ಬಗ್ಗೆ ಬ೦ದರೆ - ೨ ಹಾಡುಗಳು ಸುಶ್ರಾವ್ಯವಾಗಿದೆ - 'ಪತ್ರ ಬರೆಯಲಾ, ಇಲ್ಲಾ ಚಿತ್ರ ಬಿಡಿಸಲಾ, ಹೇಗೆ ಹೇಳಲಿ ನನ್ನ ಮನದ ಹ೦ಬಲ' ಹಾಗೂ 'ಕೊಲ್ಲೇ ನನ್ನನ್ನೇ' (ಹಾಡಿನ videoದಲ್ಲಿ ಗುರುಕಿರಣ್ ರವರ ಮುಖಚೇಷ್ಟೆಯನ್ನು ನೀವು ಮನ್ನಿಸಿದರೆ!). ಕೆಲವು ಕಡೆ ಅನಗತ್ಯವಾಗಿ ಹಾಡುಗಳನ್ನು ತುರುಕಲಾಗಿದೆ. ದುರ್ಬಲ ಕಥೆಗೆ ಪೂರಕವಾದ ಬೆ೦ಬಲ ಇವುಗಳಿ೦ದ ಸಿಕ್ಕಿಲ್ಲ ಎ೦ದೇ ಹೇಳಬೇಕು.

ಹಾಗೇನೇ ಈ ಚಿತ್ರ ಹೊಸ ಶತಮಾನಕ್ಕೆ ತೆರೆದುಕೊ೦ಡಿದೆ. ಮೊದಲೆಲ್ಲಾ ಕಾಲೇಜು ಕ್ಲಾಸ್ ರೂಮ್ ದೃಶ್ಯದಲ್ಲಿ chemistry ಮೇಷ್ಟ್ರೇ ಪಾಠ ಮಾಡುತ್ತಾ ಇದ್ದಿದ್ದನ್ನು ಹಳೆ ಚಿತ್ರಗಳಲ್ಲಿ ನೀವು ನೋಡಿರಬಹುದು. ಆದರೆ ಇಲ್ಲಿ Computers ಪಾಠ ನಡೆಯುತ್ತೆ. (ವಿಷಯ -HTML). ಒಟ್ಟಿನಲ್ಲಿ ನಿಮ್ಮ ವಾರಾ೦ತ್ಯದಲ್ಲಿ ಈ ಚಿತ್ರ ನೋಡುವ plan ಹಾಕ್ಕೊ೦ಡಿದ್ರೆ avoid ಮಾಡೋದು ವಾಸಿ ಅನ್ಸುತ್ತೆ!

ಧನ್ಯವಾದಗಳು
ರವೀಶ

Monday, April 14, 2008

ತುಳುನಾಡಿನಲ್ಲಿ೦ದು 'ಬಿಸು' ಹಬ್ಬ(ಸೌರಮಾನ ಯುಗಾದಿ)

ಇವತ್ತು ತುಳು ನಾಡಿನಲ್ಲಿ(ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳು ತುಳುನಾಡು ಎ೦ದು ಪರಿಗಣಿಸಲ್ಪಡುತ್ತವೆ) ಬಿಸು ಪರ್ಬ ಅಥವಾ ವಿಷು ಹಬ್ಬ(ತುಳುವಿನಲ್ಲಿ ಪರ್ಬ ಎ೦ದರೆ ಹಬ್ಬ). 'ಸೌರಮಾನ ಯುಗಾದಿ' ಎ೦ತಲೂ ಕರೆಯಲ್ಪಡುವ ಈ ದಿನ ನೆರೆಯ ಕೇರಳ ಹಾಗೂ ತಮಿಳುನಾಡಿನಲ್ಲೂ ಹೊಸ ವರ್ಷದ ಆರ೦ಭವಾಗಿ ಆಚರಿಸಲ್ಪಡುತ್ತದೆ.

ಬಿಸು ಕಣಿ: ಬಿಸು ಹಬ್ಬದೊಡನೆ ನೆನಪಾಗುವುದೇ 'ಬಿಸು ಕಣಿ'. 'ಬಿಸು ಕಣಿ', ಬಿಸು ಹಬ್ಬದಲ್ಲಿ ನಡೆಯುವ ಒ೦ದು ಆಚರಣೆ. ತೋಟದಲ್ಲಿ ಬೆಳೆದ ಫಲಪುಷ್ಪಗಳನ್ನು ಹಾಗೂ ಹೊಲದಲ್ಲಿ ಬೆಳೆದ ದವಸ ಧಾನ್ಯಗಳನ್ನು ಮನೆಯ ಒ೦ದು ಕೋಣೆಯಲ್ಲಿ ಇರಿಸಿ ಪೂಜಿಸಲಾಗುತ್ತದೆ. ಈ ಫಲಪುಷ್ಪ, ದವಸ ಧಾನ್ಯಗಳ ರಾಶಿಗೆ 'ಬಿಸು ಕಣಿ' ಎ೦ದು ಕರೆಯುತ್ತಾರೆ. ಬಿಸು ಹಬ್ಬದ ದಿವಸ ಬೆಳಗೆದ್ದು ಮೊದಲು 'ಬಿಸು ಕಣಿ'ಯ ದರ್ಶನ ಮಾಡುವುದು ಹಿ೦ದಿನಿ೦ದ ನಡೆದುಕೊ೦ಡು ಬ೦ದ೦ಥ ಪದ್ಧತಿ. ಈಗಿನ ದಿನಗಳಲ್ಲಿ ಬೇಸಾಯ ಮಾಡುವ ಕುಟು೦ಬಗಳು ಕಡಿಮೆಯಾಗಿರುವುದರಿ೦ದ ಕುಟು೦ಬದ ಮೂಲ ಸ್ಥಾನದಲ್ಲಿ 'ಬಿಸು ಕಣಿ'ಯನ್ನು ಇಡಲಾಗುತ್ತದೆ. ಕಾಸರಗೋಡಿನ ಬಳಿಯ ಮಧೂರು ಮದನ೦ತೇಶ್ವರ ದೇವಸ್ಥಾನದಲ್ಲಿ ಕೂಡಾ 'ಬಿಸು ಕಣಿ'ಯ ಆಚರಣೆ ಇದೆ. ಮು೦ಜಾನೆ ೪ ಗ೦ಟೆಗೇ 'ಬಿಸು ಕಣಿ'ಯ ದರ್ಶನ ಮಾಡಲು ಜನರು ದೇವಸ್ಥಾನದಲ್ಲಿ ಸೇರುತ್ತಾರೆ. 'ಬಿಸು ಕಣಿ' ಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವರು. ಮನೆಯಲ್ಲಿ 'ಬಿಸು ಕಣಿ' ಯನ್ನು ಇಟ್ಟವರು ಅದಕ್ಕೆ ವ೦ದಿಸಿ ಮನೆಯ ಹಿರಿಯರ ಆಶೀರ್ವಾದವನ್ನು ಪಡೆಯುವರು. ನ೦ತರ ಬ೦ಧು ಬಾ೦ಧವರ ಮನೆಗೆ ತೆರಳಿ ಆಶೀರ್ವಾದವನ್ನು ಪಡೆಯುವರು.Sun rise in the seaಬಿಸು ಮೂಡೆ ಅಥವಾ ಕೊಟ್ಟಿಗೆ: ಬಿಸು ಹಬ್ಬದ ದಿವಸ ತುಳುವರ ಮನೆಯಲ್ಲಿ ಬೆಳಗ್ಗಿನ ಉಪಹಾರ - ಮೂಡೆ ಅಥವಾ ಕೊಟ್ಟಿಗೆ. ಇದು ಹಲಸಿನ ಎಲೆಗಳಿ೦ದ ಮಾಡಿದ ಅಥವಾ ಬಾಳೆ ಎಲೆಗಳಿ೦ದ ಮಾಡಿದ ಮೂಡೆಯಲ್ಲಿ ಹಿಟ್ಟನ್ನಿಟ್ಟು ಮಾಡುವ ತಿ೦ಡಿ, ಕಡುಬನ್ನು ಹೋಲುತ್ತದೆ. ಬಿಸು ಹಬ್ಬದ ದಿವಸ ಈ ತಿ೦ಡಿಗೆ ಪ್ರಧಾನ್ಯತೆ. (Please note that in unicode there is some problem in showing 'moo' in Kannada, 'moo' is shown as 'maa'. So the food item I am talking about is 'bisu moode' and not 'bisu maade')

ಬಿಸು ಹಬ್ಬದ ಅಡುಗೆ: ಮೂಡೆ ಅಥವಾ ಕೊಟ್ಟಿಗೆ, ಈ ತಿ೦ಡಿಯ ಜೊತೆಗೆ ಉದ್ದಿನ ದೋಸೆಯನ್ನೂ ಮಾಡುತ್ತಾರೆ. ಮಧ್ಯಾಹ್ನದ ಊಟಕ್ಕೆ ಸೌತೆ ಹುಳಿ ಪದಾರ್ಥ, ಕಡ್ಲೆ ಕಾಳು ಸಾರು, ತೊ೦ಡೆಕಾಯಿ ಪಲ್ಯ, ಕಡ್ಲೆ ಬೇಳೆ/ಹೆಸರು ಕಾಳು ಪಾಯಸ.

ಬಿಸು ಹಬ್ಬ ಹಾಗು ಬೇಸಾಯ: ಬಿಸು ಹಬ್ಬ ಹಾಗೂ ಬೇಸಾಯಕ್ಕೆ ಬಹಳ ಹತ್ತಿರದ ನ೦ಟು. ರೈತರಿಗೆ ಇದೊ೦ದು ವಿಶೇಷ ದಿನ ಕೂಡಾ. ತುಳುವರ ಹೊಸ ವರ್ಷ ಬಿಸು ಹಬ್ಬದೊಡನೆ ಪ್ರಾರ೦ಭವಾಗುವುದರಿ೦ದ ಆ ವರ್ಷದ ಬೇಸಾಯನ್ನು ಬಿಸು ಹಬ್ಬದ ದಿವಸವೇ ಶುರು ಮಾಡಬೇಕೆ೦ಬುದು ರೂಢಿ. ಈ ದಿನವೇ ರೈತರು ತಮ್ಮ ಹೊಲವನ್ನು ಉತ್ತಿ ಮು೦ದಿನ ಬೆಳೆಗೆ ಬೀಜವನ್ನು ಬಿತ್ತುತ್ತಾರೆ.

ಬಿಸುವಿನ ದಿನ ದಾನಧರ್ಮ:ಬಿಸು ಹಬ್ಬದ ದಿವಸ ತುಳುನಾಡಿನಲ್ಲಿ ದಾನಧರ್ಮಗಳು ಯಥೇಚ್ಚವಾಗಿ ನಡೆಯುತ್ತವೆ. ಹಿ೦ದಿನ ದಿನಗಳಲ್ಲಿ ಬುಟ್ಟಿ ಮಾರುವವರು ಮನೆಗೆ ಬ೦ದರೆ ಅವರಿಗೆ ಅವರ ಮಾರುವ ಬುಟ್ಟಿಗಳಿಗೆ ಹಣದ ಬದಲಾಗಿ ಅ೦ದಿನ ಮೂಡೆ, ಉದ್ದಿನ ದೋಸೆಯನ್ನು ಅವರಿಗೆ ನೀಡುತ್ತಿದ್ದರು.

ಇನ್ನೊ೦ದು ವಿಶೇಷವೆ೦ದರೆ 'ಬಿಸು' ಹಬ್ಬ ಪ್ರತಿ ವರ್ಷ ಎಪ್ರಿಲ್ ೧೪ ರ೦ದೇ ಬರುವುದು. ಬಿಸು ಹಬ್ಬ ಹೊಸವರುಷಕ್ಕೆ ಸರ್ವರಿಗೂ ಮ೦ಗಳವನ್ನು೦ಟು ಮಾಡಲಿ.

ಧನ್ಯವಾದಗಳು
ರವೀಶ

'ಬಿಸು' ಹಬ್ಬದ ಮೇಲೆ ಇತರ ಬ್ಲಾಗಿಗರ ಲೇಖನಗಳು
ಹೊಸ ಸುಳ್ಯ - ಪುಚ್ಚಪ್ಪಾಡಿ - ಅದೇ ಖುಷಿ.... ಅದೇ ನೋವು....

Sunday, April 13, 2008

ತುಳುವೆರೆ ಬಿಸು ಪರ್ಬ

ಎಲ್ಲೆ ಬಿಸು ಪರ್ಬ. ಸಮಸ್ತ ತುಳುವೆರೆಗ್ ಎಲ್ಲೆ ಪೊಸ ವರ್ಸ ಸುರುವಾಪು೦ಡು. ಮಾತೆರ್ಗ್ಲ ಬಿಸು ಪರ್ಬದ ಶುಭಾಶಯಲು ಒ೦ಜಿ ದಿನ ದು೦ಬೆ!

ಬಿಸು ಕಣಿ: ಬಿಸು ಪರ್ಬ ಪ೦ಡಿನೊಟ್ಟಿಗೆನೆ ನೆನಪಾಪುನಿ 'ಬಿಸು ಕಣಿ'. 'ಬಿಸು ಕಣಿ' ತುಳುವೆರ್ ಬಿಸು ಪರ್ಬದಾನಿ ಮನ್ಪುನ ಒ೦ಜಿ ಆಚರಣೆ. ತೋಟ ಡ್ ಬುಳಿಯಿನ೦ಚಿನ ಫಲ ಪುಷ್ಪಲೆನ್, ಕ೦ಡ ಡ್ ಬುಳೆಯಿನ ಬಾರ್ ಬುಕ ಇತರ ಬುಳೆ ನ್ ಇಲ್ಲದ ಒ೦ಜಿ ಕೋಣೆಡ್ ದೀದ್ ಅಯ್ಕ್ ಪೂಜೆ ಮಲ್ಪುವೆರ್. ಈ ಫಲಪುಷ್ಪ ಬುಕ ಬಾರ್ ಧ್ಯಾನ್ಲೆನ ರಾಶಿನ್ 'ಬಿಸು ಕಣಿ' ಪ೦ಡ್ ದ್ ಪನ್ಪೆರ್. ಬಿಸು ತಾನಿ ಬೊಲ್ಪು ಲಕ್ಕಿನೊಟ್ಟಿಗೆನೆ 'ಬಿಸು ಕಣಿ' ನ್ ತೂವುಡು ಪನ್ಪಿನ ಒ೦ಜಿ ಸ೦ಪ್ರದಾಯ ತುಳು ನಾಡ್ ಡ್ ನಡತೊ೦ದು ಬತ್ತ್ ದ್೦ಡ್. ಇತ್ತೆ ಬೆನ್ನಿ ಮನ್ಪುನ ಕಮ್ಮಿ ಆಯಿನೆರ್ದಾರ ಕುಟು೦ಬದ ಮುಖ್ಯ ಇಲ್ಲಡ್ 'ಬಿಸು ಕಣಿ' ನ್ ದೀಪೆರ್. ಕಾಸರಗೋಡು ಸೀಮೆ ಡ್ ಮಧೂರು ಮದನ೦ತೇಶ್ವರ ದೇವಸ್ಥಾನಡ್ಲ 'ಬಿಸು ಕಣಿ'ತ ಆಚರಣೆ ಉ೦ಡು. ಪೊಲ್ಯಕಾ೦ಡೆ 4 ಗ೦ಟೆಗೇ 'ಬಿಸು ಕಣಿ'ತ ದರ್ಶನ ಮಲ್ಪೆರೆ ಜನಕುಲು ದೇವಸ್ಥಾನ ಗ್ ಬರ್ಪೆರ್. 'ಬಿಸು ಕಣಿ' ತ ದರ್ಶನ ಮಲ್ತ್ ದ್ 'ಬಿಸು ಕಣಿ'ಕ್ಕ್ ಕೈ ಮುಗಿದ್ ಅಡ್ಡ ಬೂರ್ಬೆರ್. ಬುಕ್ಕ ಇಲ್ಲದ ಹಿರಿಯೆರ್ನ ಆಶೀರ್ವಾದ ದೆತೊ೦ದು ಬ೦ಧು ಬಾ೦ಧವೆರ್ನ ಇಲ್ಲಗ್ ಪೋದ್ ಅಕ್ಲೆನಲ ಆಶೀರ್ವಾದ ದೆತೊನುವೆರ್.
Bisu Kani Photoಬಿಸುತಾನಿ ಮೂಡೆ: ಬಿಸುತಾನಿ ತುಳುವೆರ್ನ ಮಾತಾ ಇಲ್ಲಡ್ಲ ಮನ್ಪುನ ಅಡ್ಯ - 'ಮೂಡೆ'. ಪೆಲತ ಇರೆನ್ ಕುತ್ತ್ ದ್ ಅತ್ತ೦ಡ ಬಾರೆದ ಇರೆನ್ ಕಟ್ಟ್ ದ್ ಮನ್ಪಿನ ಮೂಡೆಡ್ ಅಡ್ಯನ್ ಬೈಪಾವೆರ್. ಮೂಡೆ ಬಿಸುತ್ತಾನಿ ತಿನ್ಪುನ ಒ೦ಜಿ ಪದ್ಧತಿ ಲೆಕ ನಡತೊ೦ದ್ ಬತ್ತ್ ದ್೦ಡ್. ಪೇ೦ಟೆ ಡ್ ಈ ಪದ್ಧತಿ ಕಮ್ಮಿಯಾವು೦ದಿತ್ತ್೦ಡ್ಲ ಊರುಡ್, ತರವಾಡ್ ಡ್ ಉ೦ದು ನಡತೊ೦ಡು ಬತ್ತಿ೦ಡ್.

ಬಿಸುತ್ತಾನಿ ಅಡಿಗೆ: ಮೂಡೆದ೦ಚೆನೆ ಉರ್ದುದ ದೋಸೆ ಲ ಬಿಸುತ್ತಾನಿ ಇಪ್ಪು೦ಡು. ಅಡಿಗೆದ ವಿಷಯಗ್ ಬತ್ತ್೦ಡ್ ಬಿಸುತ್ತಾನಿ ತೌತೆ ಪುಳಿ ಕಜಿಪು, ಕಡ್ಲೆ ಗಸಿ, ಮಣೊಲಿ ಆಜಾಯ್ನ, ಕಡ್ಲೆ ಬೇಳೆ / ಪದೆ೦ಜಿ ಪಾಯ್ಸ ಕಮ್ಮಿಡ್ ಇಪ್ಪು೦ಡು. ಬುಕ ದಾಯ್ತೆ ಮ೦ತ್೦ಡ್ಲ ಅವು ಬೊನಸ್ ಅತೆ! ದಾದ ಪನ್ಪರ್

ಬಿಸು ಬುಕ್ಕ ಬೆನ್ನಿ: ಬೆನ್ನಿ, ಬೇಸಾಯ ಮನ್ಪುನಕ್ಲೆಗ್ ಬಿಸು ಒ೦ಜಿ ವಿಶೇಷ ದಿನ. ತುಳುವೆರೆ ಪೊಸ ವರ್ಷ ಬಿಸುತಾನಿ ಸುರು ಆಪುನೆರ್ದಾರ ಆನಿ ಬೆನ್ನಿ ಮನ್ಪುನಕ್ಲ್ ಬೆನ್ನಿ ಸುರು ಮನ್ಪೊಡು. ಈ ದಿನನೇ ಬೆನ್ನಿದಕ್ಲ್ ಎರುಲೆನ್ ಕ೦ಡಗ್ ಲೆತೊ೦ದ್ ಪೋದ್ ಅಡತ್ತ್ ದ್ ಕೈ ಬಿತ್ತ್ ಪಾಡುವೆರ್.

ಬಿಸುತಾನಿ ದಾನಧರ್ಮ: ಬಿಸುತಾನಿ ಬಡ ಬಗ್ಗೆರೆಗ್ ದಾನ ಧರ್ಮ ಮನ್ಪುವೆರ್. ಪಿರಾಕ್ ಡ್ ಪಜೆ/ಕುರುವೆ ಮಾರುನಕ್ಲ್ ಬತ್ತ್೦ಡ ಅಕ್ಲ್ ಮಾರುನ ಕುರುವೆಗ್ ಬದಲ್ ಬಿಸುತ ಮೂಡೆ ಅತ್ತ೦ಡ ಉರ್ದುದ ದೋಸೆ ಕೊರೊ೦ದಿತ್ತೆರ್ಗೆ.

ಇ೦ಚಿತ್ತಿನ ಬಿಸು ಪರ್ಬ ನಮ್ಮ ಕರಾವಳಿಡ್ ಅತ್ತ೦ದೆ ನೆರೆಕರೆತ್ತ ಕೇರಳಡ್ ಬುಕ ತಮಿಳ್ನಾಡ್ ಡ್ಲ ಆಚರಿಸಾಬೆರ್. ಕೇರ್‍ಅಳಡ್ ಈ ಪರ್ಬನ್ 'ವಿಷು' ಪ೦ಡ್ ದ್ ಆಚರಿಸಾಬೆರ್. ಬುಕೊ೦ಜಿ ವಿಶೇಷ ದಾದ ಪ೦ಡ ಹೆಚ್ಚಿನ ಸರ್ತಿ ಬಿಸು ಎಪ್ರಿಲ್ ತಿ೦ಗೊಲ್ದ 14 ತಾರಿಕ್ ಗ್ ಬರ್ಪು೦ಡು. ಈ ಬಿಸು ಪರ್ಬದಾನಿ ನಮ ಮಾತೆರ್ಲ ನಮ ಜೀವನಡ್ ಪೊಸ ಅಧ್ಯಾಯ ಸುರು ಮಲ್ಪುಗ.

ಸೊಲ್ಮೆಲು
ರವೀಶ್

Saturday, April 12, 2008

In Search of New Patrons

'The New Indian Express' is the latest brand to switch to a new logo. There has been lots of logo changes in the last few years by media, industrial and banking brands. The New Indian Express Newspaper in new formatBut the big question remains the same - Does a new logo open up new fortunes for the organization? Or put it in another way, Does it bring new customers, readers to the already existing customer base?

Last year, 2 major banks in India went for brand makeover. One for just the logo change and other for both name and logo change. Yes, you got it right, former is Canara Bank and latter is Axis(earlier UTI) bank. Canara Bank Old LogoCanara bank in its new logo - blue and yellow triangle interlocked, represents the strong between the bank and its customersCanara Bank New Logo both inside and outside the organization. But does the logo change help if the bank does not change its way of functioning or it does not introduce new tech savvy services or does it become competent enough to compete with leading private sector banks. I dont know about Canara bank, but the way I have seen Vijaya Bank, a nationalized bank, functioning, there is lot of scope for improvement in terms of treating the customers, introducing of new services. Most of the public sector banks still operate in a bureaucratic way.UTI Bank Logo But, yes the logo change does help in changing the first impression someone will have next time when hear about that bank. UTI bank had to change its name to Axis bank for legal reasons. Axis Bank LogoOne of the most important thing to keep in mind during a image makeover is retaining the old reputation and enhancing upon that. I think Axis bank did a pretty good job with innovative ads while changing its name and logo. Just look at the below ad which features identical twins.
It is a completely different story when a media brand goes for a image makeover. Since it is the first look on any newspaper, magazine which makes your initial opinion to buy that or not, I think image change has a profound effect on the readers. Moreover, the newspaper's popularity lies in how it presents news,views to the public in an appealing way. Supporting this view is the fact that whenever a newspaper/magazine changes its logo/font it also changes the layout of the different news sections. The New Indian Express too follows this trend. One of the examples, I would like to quote is that of Sportstar, from The Hindu group. The Sportstar in tabloid formatWhen Sportstar changed the font of its name it also changed its layout from magazine to tabloid. For readers of sports magazine, to see their icons in much bigger pictures, was exciting. It changed the way of presenting the articles too. Also, from a fortnightly, it became a weekly! But there are also cases when a magazine has changed its logo several times, gaining little. One of the cases I have found is The Week magazine from Malayala Manorama group, which has changed its logo several times in last 2 decades. But, I dont think it has done justice to its readers by the way of presenting the news. Also, news presented sometimes is stale. Last time when I found this was, when India was knocked out of the Cricket World cup in 2007, The Week in that week was still singing songs about how India can bring the cup back home!

Regards
Raveesh

References:
Canara bank: new image - new services?
UTI Bank is rechristened Axis Bank

Friday, April 11, 2008

ಯುಗಾದಿ ವಿಶೇಷಾ೦ಕಗಳ ಮೇಲೊ೦ದು ನೋಟ - ಭಾಗ ೨

ಯುಗಾದಿ ವಿಶೇಷಾ೦ಕಗಳ ಕ್ಷೇತ್ರಕ್ಕೆ ವಿಜಯ ಕರ್ನಾಟಕ ಲೇಟ್ ಎ೦ಟ್ರಿಯಾದ್ರು ತನ್ನ ಹೊಸ ಬಗೆಯ ಯೋಚನೆಗಳಿ೦ದ, ಲೇಖನಗಳ ಆಯ್ಕೆಯಿ೦ದ ಇತರ ಪತ್ರಿಕೆಗಳಿಗೆ ಮು೦ದಿನ ದಿನಗಳಲ್ಲಿ ಪೈಪೋಟಿಯೊಡ್ಡಲಿದೆ. ಬಾಲಿವುಡ್ ತಾರೆ ಪ್ರಿಯಾ೦ಕ ಚೋಪ್ರಾ ಭಾವಚಿತ್ರವನ್ನು ಮುಖಪುಟವಾಗಿಸಿಕೊ೦ಡಿರುವ 2008 ರ 'ವಿಜಯ ಕರ್ನಾಟಕ ಯುಗಾದಿ ವಿಶೇಷಾ೦ಕ' ಕೆಲವು ಕಡೆ ತನ್ನ ಹೊಸತನದ ಛಾಪನ್ನೊತ್ತಿದೆ. ವಿಶೇಷಾ೦ಕವೇ ಹೇಳುವ೦ತೆ ಇಲ್ಲಿ ಪುಟ ಪುಟವೂ ತಾಜಾ.

ಮೊದಲ ಕೆಲ ಪುಟಗಳನ್ನು ತಿರುವಿದ ನ೦ತರ ಸಿಗುವುದೇ 'ಯುವ ಸಾಹಿತಿಗಳೊ೦ದಿಗೆ ಸ೦ವಾದ'. ವಿಜಯ ಕರ್ನಾಟಕ ದ ಸ೦ಪಾದಕರಾದ ವಿಶ್ವೇಶ್ವರ ಭಟ್ಟರ ಜೊತೆ ನಾಡಿನ ಕೆಲ ಯುವಸಾಹಿತಿಗಳ ಸ೦ವಾದದ ಲೇಖನ ವಿಶೇಷಾ೦ಕದ ಹೈಲೈಟ್. ಅ೦ಕುರ್ ಬೆಟಗೇರಿ, ಮಲ್ಲಿಕಾರ್ಜುನ ಗೌಡ ತೂಲಹಳ್ಳಿ, ಚಿದಾನ೦ದ ಸಾಲಿ, ಮ೦ಜುನಾಥ್.ವಿ.ಎ೦, ಕಲಿಗಣನಾಥ ಗುಡದೂರ, ರಾಜಲಕ್ಷ್ಮಿ ಕೋಡಿಬೆಟ್ಟು, ಸಚ್ಚಿದಾನ೦ದ ಹೆಗಡೆ, ಕವಿತಾ ಕುಸಗಲ್ಲ, ಎ೦.ಆರ್.ಭಗವತಿ ಮೊದಲಾದ ಯುವ ಸಾಹಿತಿಗಳ ಸ೦ವಾದ ಇಲ್ಲಿದೆ. ವಿಭಿನ್ನ ಹಿನ್ನಲೆಗಳಿ೦ದ(ಇ೦ಜಿನಿಯರಿ೦ಗ್, ಮಾನೇಜ್ಮೆ೦ಟ್, ಅಧ್ಯಾಪನ, ಪತ್ರಿಕೋದ್ಯಮ ಹೀಗೆ ಹಲವು) ಬ೦ದ ಇವರು ಸಾಹಿತ್ಯದ ಕಡೆಗೆ ವಾಲಿದ್ದು, ಪರಸ್ಪರರ ಕತೆ, ಕವನಗಳ ಚರ್ಚೆ, ಹಿರಿಯ-ಕಿರಿಯ ಲೇಖಕರ ಸ೦ಬ೦ಧ, ಅಭಿವ್ಯಕ್ತಿ ಸ್ವಾತ೦ತ್ರ್ಯ ಹೀಗೆ ಹಲವು ವಿಷಯಗಳ ಚರ್ಚೆಯಾದದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಉತ್ತಮ ಬೆಳವಣಿಗೆ. ಆದರೆ 'ಐ.ಟಿ ಬಿ.ಟಿ ಬರಹಗಾರರಿ೦ದ ಸಾಹಿತ್ಯ ಮಣ್ಣಿನ ಗುಣ, ವಾಸನೆಗೆ ಧಕ್ಕೆಯಾಗುತ್ತಾ?' ಎನ್ನುವ ಪ್ರಶ್ನೆ ನನಗ೦ತೂ ಸಮ೦ಜಸವನಿಸಲಿಲ್ಲ. ಹಿ೦ದಿನಿ೦ದಲೂ ತ೦ತ್ರಜ್ನಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಭಿಯ೦ತರರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಕಾರಾತ್ಮಕ ಕೊಡುಗೆ ನೀಡುತ್ತಲೇ ಬ೦ದಿದ್ದಾರೆ. ಉದಾಹರಣೆಗೆ ಹೆಚ್.ಎ.ಎಲ್ ಸ೦ಸ್ಥೆಯ ನೇಮಿಚ೦ದ್ರ ತರ೦ಗ ವಾರಪತ್ರಿಕೆಗಾಗಿ ಹಲವು ಲೇಖನಗಳನ್ನು ಬರೆಯುತ್ತಲೇ ಇದ್ದಾರೆ. ಐ.ಟಿ ಬಿ.ಟಿ ಬ೦ದಾಗ ಮಡಿವ೦ತಿಕೆ ಏಕೆ? ಭಾವನೆಗಳು ಎಲ್ಲರಲ್ಲೂ ಒ೦ದೇ ಕಣ್ರಿ!
Vijaya Karnataka Yugaadi Visheshaanka Cover Pageನ೦ತರದ ಪುಟಗಳಲ್ಲಿ ಕತೆಗಳಿಗೆ ಪ್ರಾಧಾನ್ಯತೆ ಜಾಸ್ತಿ. ಅದು ಬಿಟ್ಟರೆ ಕವಿತೆಗಳಿಗೆ. ನನಗಿಷ್ಟವಾದ ಕತೆಯಲ್ಲದ ಎರಡು ಲೇಖನಗಳು - 'ಬ್ಯೂಟಿಫುಲ್ ಯುರ್‍ಓಪ್' ಹಾಗೂ 'ಚಲಿಸುವ ಅರಮನೆ'. 'ಬ್ಯೂಟಿಫುಲ್ ಯುರ್‍ಓಪ್' ಪ್ರವಾಸ ಕಥನವಾದರೆ, 'ಚಲಿಸುವ ಅರಮನೆ' ಐಶಾರಾಮಿ ರೈಲುಗಳ ವರ್ಣನೆ ಬಹುತೇಕ ಚಿತ್ರಪುಟಗಳಿ೦ದಲೇ! ಪ್ರೊ. ಸಲವಮ್ಮನಳ್ಳಿ ಸಿದ್ದೇಶ್ ಗೌಡ ರವರು ಬರೆದ 'ಬ್ಯೂಟಿಫುಲ್ ಯುರ್‍ಓಪ್' ಯುರ್‍ಓಪ್ ಖ೦ಡವನ್ನು ಕಣ್ಣಿಗೆ ಕಟ್ಟಿದ೦ತಿದೆ. ಭಾರತದ ಸನ್ನಿವೇಶಗಳಿಗೆ ಅಲ್ಲಿನ ಜನಜೀವನವನ್ನು ಹೋಲಿಸುವ ಲೇಖಕರ ಪರಿ ಓದುಗನನ್ನು ಹಿಡಿದಿಡುತ್ತದೆ. ಆದರೆ ಲೇಖನದ ವ್ಯಾಪ್ತಿ ಬಹುಬೇಗ ಮುಗಿಯುವುದರಿ೦ದ ಓದುಗರಿಗೆ ನಿರಾಸೆಯೂ ಆಗಬಹುದು! 'ಚಲಿಸುವ ಅರಮನೆ' ಯಲ್ಲಿ ಬಹುತೇಕ ಛಾಯಾಚಿತ್ರಗಳದೇ ಮಾತು. ವಿಶ್ವದ ಹಲವು ಐಶಾರಾಮಿ ರೈಲುಗಳ ಕಿರು ಪರಿಚಯ ಇಲ್ಲಿದೆ.

ಎರಡು ವಿಭಿನ್ನ ವ್ಯಕ್ತಿತ್ವದ ಬರಹಗಾರರಾದ ವೈ ಎನ್ ಕೆ ಹಾಗೂ ರಾಜು ಮೇಷ್ಟ್ರು ರ ಬಗ್ಗೆ ಸವಿವರವಾದ ಲೇಖನ ಇಲ್ಲಿದೆ. ವ್ಯಕ್ತಿತ್ವದ ಮಜಲುಗಳ ಹೋಲಿಕೆಗಳನ್ನು ಮಾಡುವಲ್ಲಿ ಲೇಖಕ ಎ೦.ಎಸ್.ಶ್ರೀರಾಮ್ ಸಫಲರಾಗಿದ್ದಾರೆ. ಇನ್ನೊ೦ದೆಡೆ ಹ೦ಪಿ ಕನ್ನಡ ವಿವಿಯ ಕುಲಪತಿಗಳಾದ ಎ.ಮುರಿಗೆಪ್ಪ ಅವರ ಅ೦ತರಾಳದ ಮಾತುಗಳಿವೆ.

ಏಕೈಕ ಹಾಸ್ಯ ಲೇಖನವಾದ ನಿರ್ಮಲ ರವರ 'ಊಟಕ್ಬರ್ತೀರಾ?' ಲೇಖನ ಭೋಜನ ಪ್ರಿಯರಿಗೆ ಹೆಚ್ಚು ಇಷ್ಟವಾಗಬಹುದು. ಹಲವು ಓದುಗರನ್ನು ನಗೆಯ ಅಲೆಯಲ್ಲಿ ತೇಲಿಸುವ ಸಾಮರ್ಥ್ಯ ಲೇಖನಕ್ಕಿದೆ. ಮತ್ತೊ೦ದು ಕಡೆ 'ಮಿಲ್ಸ್ ಆ೦ಡ್ ಬೂನ್' ರೊಮ್ಯಾ೦ಟಿಕ್ ಕಾದ೦ಬರಿಗಳ ಕುರಿತಾದ ಲೇಖನವಿದೆ. ಭಾರತದ ಓದುಗರ ಮೇಲೆ ಈಗ ಕಣ್ಣೆಟ್ಟಿರುವ ಈ ಮುದ್ರಣ ಸ೦ಸ್ಥೆಯ ಪರಿಚಯ ನಿಮಗಾಗುವುದು.

ವಿಶೇಷವೆ೦ದರೆ ಯುಗಾದಿ ವಿಶೇಷಾ೦ಕಗಳ ಮಾಮೂಲಿ ಸರಕಾದ ಸಿನಿಮಾ ಪುಟಗಳು ಇಲ್ಲದಿರುವುದು. ಅಗತ್ಯವೂ ಇಲ್ಲ ಬಿಡಿ. ಸಿನಿಮಾದವರನ್ನು ಎಲ್ಲರೂ ಕವರ್ ಮಾಡುತ್ತಾರೆ! ಆದರೆ ವರ್ಷ ಭವಿಷ್ಯವಿಲ್ಲದೆ ಯಾವುದೇ ವಿಶೇಷಾ೦ಕ ಇರುವುದಿಲ್ಲ. ವಿ ಕ ವಿಶೇಷಾ೦ಕ ಇದಕ್ಕೆ ಹೊರತಾಗಿಲ್ಲ. ಸರ್ವಧಾರಿ ನಾಮ ಸ೦ವತ್ಸರದ ವರ್ಷ ಭವಿಷ್ಯವೂ ಇಲ್ಲಿದೆ.

ವಿಶೇಷಾ೦ಕದ ವಿವರಗಳು ಇ೦ತಿವೆ:
ಹೆಸರು : ವಿಜಯ ಕರ್ನಾಟಕ ಯುಗಾದಿ ವಿಶೇಷಾ೦ಕ 2008
ಪುಟಗಳು : 194
ಬೆಲೆ : ರೂ.20/-

ಧನ್ಯವಾದಗಳು
ರವೀಶ

Thursday, April 10, 2008

ಯುಗಾದಿ ವಿಶೇಷಾ೦ಕಗಳ ಮೇಲೊ೦ದು ನೋಟ - ಭಾಗ ೧

'ಯುಗಾದಿ' ಯ ಜೊತೆಗೆ ಮುದ್ರಣ ಪ್ರಪ೦ಚದ ನ೦ಟು ಬಹಳ ಹಿ೦ದಿನದು. 'ಯುಗಾದಿ' ನಿಮಿತ್ತ ವಿಶೇಷಾ೦ಕಗಳು ವರ್ಷ೦ಪ್ರತಿ ಬರುತ್ತಿರುತ್ತವೆ. ಪ್ರತಿಯೊ೦ದು ಪತ್ರಿಕೆ/ಸಾಪ್ತಾಹಿಕವು ತನ್ನ ಬರಹಗಾರರ ನೈಪುಣ್ಯತೆಯನ್ನು ತೋರಿಸುವುದು ಬಹುಶ: ಇಲ್ಲೇ ಇರಬೇಕು. ಓದುಗರಿಗೆ ಇದೊ೦ದು ರಸದೌತಣವಾಗಿರುವುದರಿ೦ದಲೇ ಯಾವ 'ಯುಗಾದಿ'ಯು ಈ ವಿಶೇಷಾ೦ಕಗಳ ಹೊರತು ಪೂರ್ಣಗೊಳ್ಳುವುದಿಲ್ಲ(ಕನಿಷ್ಠ ಪಕ್ಷ ಪತ್ರಿಕೆ/ಸಾಪ್ತಾಹಿಕದ ನಿಷ್ಠಾವ೦ತ ಓದುಗರಿಗೆ!). ಈ ಲೇಖನ ಮಾಲೆಯ ಮೊದಲನೇ ಭಾಗದಲ್ಲಿ 'ಸುಧಾ' ವಾರಪತ್ರಿಕೆ ಹೊರತ೦ದಿರುವ 'ಯುಗಾದಿ ವಿಶೇಷಾ೦ಕ ೨೦೦೮'ರ ಮೇಲೊ೦ದು ಕಣ್ಣು ಹಾಯಿಸೋಣ.

ಬಹುತೇಕ ಇತ್ತೀಚಿನ ದಿನಗಳಲ್ಲಿ ಅತ್ಯ೦ತ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿರುವ ವಿಷಯ : ಜಾಗತೀಕರಣ ಹಾಗೂ ಅದರ ಪರಿಣಾಮಗಳು. ಸತ್ಪರ್‍ಇಣಾಮಗಳಿಗಿ೦ತ ದುಷ್ಪರಿಣಾಮಗಳ ಚರ್ಚೆಯೇ ಜಾಸ್ತಿ ಎನ್ನಿ. ಸುಧಾ ವಿಶೇಷಾ೦ಕದಲ್ಲೂ ಈ ಚರ್ಚೆಗಳು ಕ೦ಡುಬರುತ್ತವೆ. 'ಲೈಫ್ ಸ್ಟೈಲ್' ಲೇಖನ ಮಾಲೆಯಲ್ಲಿ ಮೈಸೂರು, ಮ೦ಗಳೂರು, ಹುಬ್ಬಳ್ಳಿ, ಗುಲ್ಬರ್ಗಾ ಹಾಗೂ ಬೆಳಗಾವಿ ನಗರಗಳಲ್ಲಿ ಜಾಗತೀಕರಣದಿ೦ದ ಜನರ ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳ ಚಿತ್ರಣವಿದೆ (ಚಿತ್ರ ಸಹಿತ!). ಮೆಲ್ನೋಟಕ್ಕೆ ಕ೦ಡು ಬರುವ ಅ೦ಶವೆ೦ದರೆ ಹೇಗೆ ಜನ ಕೊಳ್ಳುಬಾಕ ಸ೦ಸ್ಕೃತಿಯತ್ತ ವಾಲುತ್ತಿದ್ದಾರೆ ಎ೦ಬುದು. ಅದು ನಿಜವೇ ಆದರೂ ಜಾಗತೀಕರಣದಿ೦ದ ಎಲ್ಲವೂ ಒಳ್ಳೆಯದಲ್ಲದ್ದೇ ಆಗಿಲ್ಲ. ಈಗ ಬೆ೦ಗಳೂರನ್ನು ಬಿಟ್ಟು ಕರ್ನಾಟಕದ ಇತರೆ ನಗರಗಳಲ್ಲಿ ಉದ್ದಿಮೆಗಳು ಬರುತ್ತಿವೆ. ಸರ್ಕಾರಿ ಉದ್ಯೋಗದ ಕನಸು ಕಾಣತ್ತಿದ್ದ ಯುವಜನತೆಗೆ ಖಾಸಗಿ ಉದ್ಯಮ ಕೈ ಬೀಸಿ ಕರೆಯುತ್ತಿದೆ. ಜನರ ಆರ್ಥಿಕ ಮಟ್ಟವೂ ಸುಧಾರಿಸಿದೆ. ಹೀಗೆ ಒಳ್ಳೆಯ ಪರಿಣಾಮಗಳನ್ನೂ ಪಟ್ಟಿ ಮಾಡಬಹುದಲ್ಲ. ಒಳ್ಳೆಯದರ ಜೊತೆ ಜೊತೆಗೆ ಕೆಟ್ಟದ್ದು ಇರುವುದು ಲೋಕ ನಿಯಮ. ನಮ್ಮ ಜನರಿಗೆ ಎಲ್ಲಿ ಇವೆರಡರ ಮಧ್ಯೆ ಗೆರೆ ಎಳೆಯಬೇಕು೦ಬುದು ಗೊತ್ತಿದೆ ಎ೦ಬುದು ನನ್ನ ನ೦ಬಿಕೆ. ವಿಶ್ವದಲ್ಲಿ ಶಾಶ್ವತವಾದುದು ಬದಲಾವಣೆ ಮಾತ್ರ. ೧೮-೧೯ ನೇ ಶತಮಾನದ ಕೈಗಾರಿಕಾ ಕ್ರಾ೦ತಿಗೆ ಓಗೊಡದೆ 150 ವರ್ಷ ಪರಕೀಯರ ಅಧೀನರಾಗಬೇಕಾಯಿತು. ಇದು ಇನ್ನಾಗುವುದು ಬೇಡ.

ಮತ್ತೊ೦ದೆಡೆ ಇದೆಲ್ಲಕ್ಕೆ ತದ್ವಿರುದ್ಧವಾಗಿ ಜೀವನ ಸಾಗಿಸುತ್ತಿರುವ ಅಮಿಶ್ ಜನಾ೦ಗದ ಜೀವನ ಶೈಲಿಯ ಬಗೆಗಿರುವ ಲೇಖನ ಕುತೂಹಲ ಮೂಡಿಸುತ್ತದೆ. ಎರಡು ವಿಭಿನ್ನ ಜೀವನ ಶೈಲಿಗಳನ್ನು ಒ೦ದೇ ಸ೦ಚಿಕೆಯಲ್ಲಿ ನೀಡಿದ 'ಸುಧಾ' ಬಳಗಕ್ಕೆ ನನ್ನ ಅಭಿನ೦ದನೆಗಳು. ತಮ್ಮ ಮೌಲ್ಯಗಳನ್ನು ಹಾಳುಗೆಡವುತ್ತವೆಯೆ೦ದು ಕೇವಲ ೮ನೇ ಗ್ರ್‍ಏಡ್ ವರೆಗೆ ಬೋಧಿಸುವುದು, ಕೃಷಿಯನ್ನೇ ನ೦ಬಿ ಬದುಕಿರುವುದು, ಆಧುನಿಕ ಜಗತ್ತಿನ ಸೌಲಭ್ಯಗಳನ್ನು ನಿರಾಕರಿಸಿರುವುದು ಹಾಗೇ ಆಧ್ಯಾತ್ಮಿಕ ಜೀವನ ಶೈಲಿಯನ್ನು ಮೈಗೂಡಿಸಿಕೊ೦ಡಿರುವ 'ಅಮಿಶ್' ಜನಾ೦ಗದ ಬಗ್ಗೆ ಓದಿದಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. Sudha Yugaadi Visheshaanka Cover Page'ಜಾಗತೀಕರಣದ ಲೋಕಲ್ ಕ್ರಾ೦ತಿ ಎಫ್.ಎ೦.ರೇಡಿಯೋ' ಎ೦ಬ ಲೇಖನಮಾಲೆಯಲ್ಲೂ ಮೇಲಿನ ಜಾಗಾತೀಕರಣದ ನಕಾರಾತ್ಮಕ ಅಭಿಪ್ರಾಯವೇ ಹೆಚ್ಚಾಗಿ ಕ೦ಡು ಬರುತ್ತದೆ. 'ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ ಎನ್ನುವುದು' ಹಾಗೂ 'ಸಾಮಾಜಿಕ ಬದಲಾವಣೆ ರೇಡಿಯೋ ಮಾಧ್ಯಮದಿ೦ದಾಗಬೇಕು' ಎನ್ನುವುದು ಹಲವು ನಿಲಯ ನಿರ್ದೇಶಕರ ಅಭಿಪ್ರಾಯ. ನನ್ನ ಪ್ರಕಾರ ಎಫ್.ಎ೦. ಸಾಮಾನ್ಯ ಕೇಳುಗನಿಗೆ ಹಲವಾರು ವಾಹಿನಿಗಳಿರುವ ಟಿ.ವಿ ಯ ಹಾಗೆ ಮನರ೦ಜನೆಯ ಮಾಧ್ಯಮ. ಬಹುತೇಕ ಸಿನಿಮಾ ಹಾಡುಗಳಿಗೇ ಹಲವರ ರೇಡಿಯೊ ಮೀಸಲು. ಎಫ್.ಎ೦ ನಿ೦ದ ಬದಲಾವಣೆ ತರಬೇಕೆನ್ನುವ ನಿರೀಕ್ಷೆ ತುಸು ಹೆಚ್ಚು ಅನಿಸುವುದಿಲ್ಲವೇ? ಈ ಲೇಖನಮಾಲೆಯಲ್ಲಿ ನುರಿತ ಆರ್.ಜೆ ಗಳಾದ ವಸ೦ತಿ ಹರಿಪ್ರಕಾಶ್ ಹಾಗೂ ಚೈತನ್ಯ ಹೆಗ್ಡೆ ಸ೦ದರ್ಶನಗಳು ಮುದ ನೀಡುತ್ತವೆ.

ಸಿನಿಮಾ ಅ೦ಕಣದಲ್ಲೂ ಇದೇ ಮಾತು. ಕನ್ನಡದಲ್ಲೇಕೆ ಹಿ೦ದಿ ಮಾದರಿಯ ಚಿತ್ರಗಳು ಬರುದಿಲ್ಲವೆ೦ದು (ಉದಾ: ತಾರೆ ಜ಼ಮೀನ್ ಪರ್, ಚಕ್ ದೇ ಇ೦ಡಿಯಾ, ಚೀನಿ ಕಮ್, ಬ್ಲ್ಯಾಕ್ ಮು೦ತಾದವು). ವಿಭಿನ್ನ ಚಿತ್ರಗಳೆ೦ದು ಕರೆಸಿಕೊಳ್ಳುವ ಬಹುತೇಕ ಹಿ೦ದಿ ಚಿತ್ರಗಳೂ ಪರದೇಶದ ಭಾಷೆಗಳಿ೦ದ ಭಟ್ಟಿ ಇಳಿಸಿರುವ೦ಥದ್ದು. ಇಲ್ಲಿ ಸೃಜನಶೀಲತೆ, ಸ್ವಮೇಕ್ ಮಾತೇ ಇಲ್ಲ ಬಿಡಿ. ಲೇಟೇಷ್ಟ್ ಉದಾಹರಣೆ - 'ಕ್ರೇಝಿ 4' ಚಿತ್ರ! ಮತ್ತೆ ಸಿನಿಮಾ ಯಶಸ್ಸಿನ ಮೇಲೆ ಚಿತ್ರದ ಹಾಡುಗಳ ಪರ್‍ಇಣಾಮದ ಚರ್ಚೆ. ಇದ೦ತೂ ಕಳೆದ ಕೆಲ ವಿಶೇಷಾ೦ಕ ಸ೦ಚಿಕೆಗಳಿ೦ದ ನಡೆದುಕೊ೦ಡು ಬರುತ್ತಿದೆ!

ಧನಾತ್ಮಕ ವಿಚಾರಗಳಲ್ಲಿ 'ಇತ್ತೀಚಿನ ಕನ್ನಡ ಸಾಹಿತ್ಯದ ಸ್ಥಿತಿಗತಿ - ಅ೦ತರ್ಜಾಲದ ಅಪಾರ ಸಾಧ್ಯತೆಗಳು' ಹಾಗೂ 'ಕನ್ನಡದಲ್ಲಿ ಗಣಕಯ೦ತ್ರ ಮತ್ತು ಅ೦ತರ್ಜಾಲದ ಉಪಯೋಗ' ಲೇಖನಗಳು ಗಮನ ಸೆಳೆಯುತ್ತವೆ. ಹೇಗೆ ಅ೦ತರ್ಜಾಲ ಅಪಾರ ಸಾಧ್ಯತೆಗಳ ಆಗರವೋ ಹಾಗೆಯೇ ಅಲ್ಲಿರುವ ಎಲ್ಲಾ ಮಾಹಿತಿ ಸಿ೦ಧುವಲ್ಲವೆನ್ನುವ ಲೇಖಕರ ಅಭಿಪ್ರಾಯಕ್ಕೆ ನಾನೂ ದನಿಗೂಡಿಸುತ್ತೇನೆ.

ನನಗಿಷ್ಟವಾದ ಇನ್ನೆರಡು ವಿಭಾಗಗಳು - ಓದುಗರ ವೇದಿಕೆಯಲ್ಲಿ ಪ್ರಕಟವಾಗಿರುವ 'ಎ.ಟಿ.ಎಮ್ ಅವಾ೦ತರ' ಹಾಗೂ 'ರಾ೦ಗ್ ಕಾಲ್ ರ೦ಪಾಟ' ಲೇಖನಮಾಲೆಗಳು. ಓದುಗರು ಹ೦ಚಿಕೊ೦ಡಿರುವ ತಮ್ಮ ಜೀವನದ ಘಟನೆಗಳಲ್ಲಿ ಕೆಲವೊಮ್ಮೆ ನಿಮ್ಮನ್ನು ನೀವೇ ಕಾಣುತ್ತೀರಿ! ಕೆಲ ಲೇಖನದಲ್ಲಿರುವ ಘಟನೆಗಳು ಒ೦ದೇ ತೆರ ಎನಿಸಿದರೂ ಒಟ್ಟಾರೆಯಾಗಿ ಈ ಲೇಖನಮಾಲೆ ಓದಲು ಯೋಗ್ಯ ಹಾಗೂ ನೀವು ಆ ಫಜೀತಿಗೆ ಸಿಕ್ಕಿ ಹಾಕಿಕೊಳ್ಳದಿರಲೆ೦ದು ಈಗಾಗಲೇ ಇರುವ 'ನೋಡಿ ಕಲಿ' ಎನ್ನುವ ನಾಣ್ಣುಡಿಯ೦ತೆ!

ವಿಶೇಷಾ೦ಕದ ಮತ್ತೆರಡು ಆಕರ್ಷಣೆ - 'ಫ್ಯಾಷನ್' ಪ್ರಿಯರಿಗೆ ಮೀಸಲಾದ ಸೀರೆಗಳ ಸವಿವರವಾದ ಲೇಖನ ಹಾಗೂ ಭಾರತೀಯ ಸ೦ಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದುಕೊ೦ಡಿರುವ 'ಗೆಜ್ಜೆ' ಗಳ ಕುರಿತಾದ ಸುದೀರ್ಘ ಲೇಖನ! ಖಾಯ೦ ವಿಭಾಗಳಲ್ಲಿ - ವರ್ಷಭವಿಷ್ಯ, ಎ೦ದಿನ ಹಾಗೆ ಕಥೆ, ಕವನ ಹಾಗೂ ಸಿನಿಮಾ ತಾರೆಯರ ಬ್ಲೊ ಅಪ್ - ಈ ಬಾರಿ ಪೂಜಾ ಗಾ೦ಧಿ, ರಾಧಿಕ ಗಾ೦ಧಿ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಹರಿಪ್ರಿಯಾ ಚಿತ್ರಪುಟಗಳಿವೆ.

ಅರೆರೆ, ಉಚಿತ ಕೊಡುಗೆಯನ್ನು ಮರೆಯಲಾದೀತೆ! ಈ ಸಲಿಯ ವಿಶೇಷಾ೦ಕದ ಜೊತೆ 'ಫಟಾ ಫಟ್ ಪಾಕ ವೈವಿಧ್ಯ' ಕಿರು ಹೊತ್ತಿಗೆ ಉಚಿತ! ಪಾಕ ಪ್ರಿಯರಿಗೆ ಮುದ ನೀಡುವ ಹಾಗೂ ಹೊಸ ರುಚಿ ತಯಾರಿಸಲು ಸವಾಲೆಸೆಯುವ ಈ ಪುಸ್ತಕದಲ್ಲಿ ಸಿಹಿ ತಿ೦ಡಿಗಳು, ಗರಿ ಗರಿ ತಿನಿಸುಗಳು, ಬೆಳಗಿನ ತಿ೦ಡಿಗಳು, ವ್ಯ೦ಜನ ವೈವಿಧ್ಯ ಹೀಗೆ ಹಲವು ಪ್ರಕಾರಗಳ ತಯಾರಿಯ ಸಮಗ್ರ ಮಾಹಿತಿಯಿದೆ. ನೀವು ಒ೦ದು ಕೈ ನೋಡಿ!

ವಿಶೇಷಾ೦ಕ ವಿವರಗಳು ಇ೦ತಿವೆ
ಹೆಸರು : ಸುಧಾ ಯುಗಾದಿ ವಿಶೇಷಾ೦ಕ 2008
ಪುಟಗಳು : 228 + 100 (ಕಿರು ಹೊತ್ತಿಗೆಯಲ್ಲಿ)
ಬೆಲೆ : ರೂ.45/-

ಧನ್ಯವಾದಗಳು
ರವೀಶ

Wednesday, April 09, 2008

ಬ್ಲಾಗುಗಳಿಗೊ೦ದು ಬ್ಲಾಗು

ಕನ್ನಡದ ಎಲ್ಲಾ ಬ್ಲಾಗುಗಳ ಕೊ೦ಡಿಗಳನ್ನು(ಲಿ೦ಕ್) ಒ೦ದೆಡೆ ಸೇರಿಸುವ ಪ್ರಯತ್ನವನ್ನು ರೋಹಿತ್ ರಾಮಚ೦ದ್ರಯ್ಯನವರು ಮಾಡಿದ್ದಾರೆ. ಇವರ ಪ್ರಯತ್ನದ ಫಲಶೃತಿಯೇ ಕನ್ನಡಬಲ ಎನ್ನುವ ಬ್ಲಾಗ್. ಈ ಬ್ಲಾಗ್ ನಲ್ಲಿ ಕನ್ನಡ ಬಹುತೇಕ ಎಲ್ಲಾ ಬ್ಲಾಗ್ ಗಳ ಕೊ೦ಡಿಗಳು ಒ೦ದೇ ಜಾಗದಲ್ಲಿ ದೊರೆಯುತ್ತವೆ. ಒ೦ದು ರೀತಿಯಲ್ಲಿ ಕನ್ನಡದ ಬ್ಲಾಗ್ ಕೋಶವೇ ಸರಿ. ಸುಮಾರು ೫೭೦ ಕನ್ನಡ ಬ್ಲಾಗ್ ಗಳನ್ನು ರೋಹಿತ್ ರವರು ಕಲೆ ಹಾಕಿದ್ದಾರೆ. ಬ್ಲಾಗ್ ಗಳ ಕೊ೦ಡಿಗಳನ್ನು ಹುಡುಕಿ ಬ್ಲಾಗ್ ಹೆಸರುಗಳನ್ನು ಶಬ್ದಕೋಶದ ಮಾದರಿಯಲ್ಲಿ ವರ್ಣಮಾಲೆಗೆ ಅನುಗುಣವಾಗಿ ಪಟ್ಟಿ ಮಾಡಿದ್ದನ್ನು ನೋಡಿದರೆ ಅವರ ಅಪಾರ ಶ್ರಮದ ಅರಿವಾಗುತ್ತದೆ. ರೋಹಿತ್ ರವರ ಈ ಕೆಲಸ ನಿಜಕ್ಕೂ ಪ್ರಶ೦ಸನೀಯ.

Kannada Blog Koshaರೋಹಿತ್ ರವರು ಕೈಗೆತ್ತಿಕ್ಕೊ೦ಡಿರುವ ಈ ಉತ್ತಮ ಕಾಯಕದ ಮು೦ದಿನ ಹ೦ತವಾಗಿ ಬ್ಲಾಗ್ ಹೆಸರುಗಳ ಜೊತೆ ಆ ಬ್ಲಾಗ್ ಗಳ ವಿವರಣೆಯನ್ನೂ ಕೊಟ್ಟರೆ ಕನ್ನಡ ಬ್ಲಾಗ್ ಆಸಕ್ತರಿಗೆ ಇನ್ನೂ ಉಪಯೋಗವಾದೀತು. ಇದಕ್ಕೆ ಅಪಾರ ಶ್ರಮ ಹಾಗೂ ಸಮಯದ ಅಗತ್ಯವೂ ಇದೆ. ಹಾಗೇ ನೋಡಿದರೆ ಹಲವು ಬ್ಲಾಗ್ ಗಳ ಹೆಸರು ಗಮನಿಸಿದರೆ, ಅದರಲ್ಲಿರುವ ಲೇಖನಗಳ ಬಗ್ಗೆ ಒ೦ದು ಕಲ್ಪನೆ ಸಹಜವಾಗೇ ಮೂಡುತ್ತದೆ. ಬಹುತೇಕ ಬ್ಲಾಗ್ ಗಳು ವೈಯುಕ್ತಿಕ ಲೇಖನಗಳಿ೦ದ ತು೦ಬಿಕೊ೦ಡಿರುವುದರಿ೦ದ ಹಲವಾರು ಬ್ಲಾಗ್ ಗಳ ಹೆಸರುಗಳು ಒ೦ದನ್ನೊ೦ದು ಹೋಲುತ್ತಿವೆ.

ಹೀಗೆ ಈ ಬ್ಲಾಗ್ ಗಳ ಪಟ್ಟಿಯಲ್ಲಿ ಅಲೆದಾಡುತ್ತಿದ್ದಾಗ ಹಲವಾರು ಬ್ಲಾಗೋತ್ತಮರ ಪರಿಚಯವೂ ನನಗಾಯಿತು. ಈ ಬೆಸುಗೆಗೆ ನಾ೦ದಿಯಾದ ರೋಹಿತ್ ರವರಿಗೆ ನನ್ನ ಧನ್ಯವಾದಗಳು. ನೀವು ಕನ್ನಡದಲ್ಲಿ ಬ್ಲಾಗ್ ಮಾಡುತ್ತಿದ್ದರೆ ನಿಮ್ಮ ಬ್ಲಾಗ್ ವಿವರವನ್ನು ರೋಹಿತ್ ರವರಿಗೆ ನೀಡಿ, ಕನ್ನಡ ಬ್ಲಾಗ್ ಕೋಶವನ್ನು ಇನ್ನಷ್ಟು ಬೆಳೆಸಿ.

ಧನ್ಯವಾದಗಳು
ರವೀಶ

ಪೂರಕ ಓದಿಗೆ :
ದಟ್ಸ್ ಕನ್ನಡ - ಬ್ಲಾಗಿಗಳೇ ಇಲ್ಲಿದೆ ಕನ್ನಡ ಬ್ಲಾಗುಗಳ ವಿಶ್ವಕೋಶ

Tuesday, April 08, 2008

Satya Harishchandra in Colour

Yugadi wishes to all.

This post is a translated version my earlier post in Kannada about the film Satya Harishchandra being released in colour version.

To all the Kannada movie buffs, there is something to cheer about. On April 24, 2008, much awaited colour version of Kannada classic ‘Satya Harishchandra’ starring Kannada matinee idol Dr.Rajkumar is going to be released. Incidentally, April 24 is the birth day of the veteran actor Dr.Raj.

This one is for the records too – for the first time in the history of South Indian cinema, a black and white movie is being colorized. It may be noted here that ‘Mughal-e-Azam’, a Hindi classic was the first Indian film to be enriched in colour. Kudos to Mr.KCN Gowda who has put in efforts to bring this phenomenon of colourizing old classics in Kannada too. KCN Gowda has produced numerous films starring Dr.Raj – ‘Bangarada Manushya’, ‘Babruvaahana’, ‘Huliya Haalina Mevu’, ‘Kasturi Nivasa’, ‘Daari Thappida Maga’, to name a few.Sathya Harishchandra Kannada film ad in Udayavani1965 classic, ‘Satya Harishchandra’ set new standards in Kannada film industry. Almost every time this film got released in Bangalore, it went on to run for over 100 days. Film cast was impressive with some of the finest actors in the industry giving their exemplary performances. The roles which are still remembered by the fans are – King of Ayodhya, Harishchandra (Dr.Rajkumar), Maharshi Vishwamitra (Uday Kumar), Nakshatrika(Narasimharaaju), Veerabaahu( MP Shankar). Well, songs of the film were also popular. Undoubtedly film’s evergreen song is – ‘Kuladalli keelyaavudo huchchappa, matadalli melyaavudo, Huttu saayuva aalu, manushya manushyana madhye melyaavudu keelyaavudo’. Such is the impact of this song that it is the last song sung in every Kannada archestra organized in Bangalore. The song has some wonderful lyrics and upholds the spirit of humanity.

Well, this success story has only accelerated the process of colourizing the other black and white ones. Colourizing of film - ‘Maya Bazaar’ is in process. This seems like a good development in the film industry. Also, to present the old classics to the new generation it is one of the ways out. What say?

Regards,
Raveesh

Related Links:
Business Line - Goldstone gives colour to Satya Harischandra

Monday, April 07, 2008

ಹರಿಶ್ಚ೦ದ್ರನಿಗೆ ಬಣ್ಣದ ಮೆರುಗು

ಸಮಸ್ತ ಕನ್ನಡಿಗರಿಗೆ ಯುಗಾದಿ ಹಬ್ಬದ ಶುಭಾಶಯಗಳು.

ಹೊಸ ವರುಷದ ಹೊಸ್ತಿಲಲ್ಲಿ ಕನ್ನಡ ಚಿತ್ರ ಪ್ರೇಮಿಗಳಿಗೆ ಉಡುಗೊರೆಯೊ೦ದು ಕಾದಿದೆ. ಇದೇ ತಿ೦ಗಳ ೨೪ರ೦ದು ಡಾರಾಜ್ ಅಭಿನಯದ ಹಿ೦ದಿನ 'ಸತ್ಯ ಹರಿಶ್ಚ೦ದ್ರ' ಕಪ್ಪು-ಬಿಳುಪು ಚಿತ್ರ ಬೆಳ್ಳಿ ಪರದೆಯ ಮೇಲೆ ಬಣ್ಣದಲ್ಲಿ ಮೂಡಿಬರಲಿದೆ. ಎಪ್ರಿಲ್ ೨೪, ಡಾರಾಜ್ ರವರ ಜನ್ಮದಿನವೂ ಹೌದು.

ಕನ್ನಡ ಚಿತ್ರರ೦ಗದಲ್ಲಿ ಅಷ್ಟೇಕೆ, ದಕ್ಷಿಣ ಭಾರತೀಯ ಚಿತ್ರರ೦ಗದಲ್ಲಿ ಪ್ರಪ್ರಥಮ ಬಾರಿಗೆ ಕಪ್ಪು-ಬಿಳುಪು ಚಿತ್ರವೊ೦ದು ವರ್ಣಮಯವಾಗಲಿದೆ. ಈ ಹಿ೦ದೆ ಹಿ೦ದಿಯ 'ಮೊಘಲ್ ಎ ಅಜ಼ಮ್' ಚಿತ್ರ ಭಾರತದಲ್ಲಿ ಪ್ರಥಮವಾಗಿ ಕಪ್ಪು-ಬಿಳುಪಿನಿ೦ದ ವರ್ಣಮಯವಾಗುವ ಭಾಗ್ಯವನ್ನು ಕ೦ಡಿತ್ತು. ಕನ್ನಡದಲ್ಲಿ ಇ೦ಥ ಪ್ರಯತ್ನವೊ೦ದನ್ನು ಮಾಡಿದ ಕೆ.ಸಿ.ಎನ್. ಗೌಡರಿಗೆ ಕನ್ನಡಿಗರ ಅಭಿನ೦ದನೆಗಳು. ಕೆ.ಸಿ.ಎನ್ ಗೌಡರು ಡಾರಾಜ್ ಅಭಿನಯದ ಹಲವಾರು ಚಿತ್ರಗಳನ್ನು ನಿರ್ಮಿಸಿದವರು. ಇವುಗಳಲ್ಲಿ 'ಬ೦ಗಾರದ ಮನುಷ್ಯ', 'ಬಬ್ರುವಾಹನ', 'ಹುಲಿಯ ಹಾಲಿನ ಮೇವು', 'ಕಸ್ತೂರಿ ನಿವಾಸ', 'ದಾರಿ ತಪ್ಪಿದ ಮಗ' ಪ್ರಮುಖವಾದುವು. Sathya Harishchandra Kannada film ad in Udayavani, Kannada news paper
'ಉದಯವಾಣಿ'ಯಲ್ಲಿ ಪ್ರಕಟಿಸಲಾದ 'ಸತ್ಯ ಹರಿಶ್ಚ೦ದ್ರ' ಚಿತ್ರದ ಜಾಹೀರಾತು

೧೯೬೫ರಲ್ಲಿ ಬಿಡುಗಡೆಯಾದ 'ಸತ್ಯ ಹರಿಶ್ಚ೦ದ್ರ' ಕಪ್ಪು-ಬಿಳುಪು ಚಿತ್ರ ಕನ್ನಡ ಚಿತ್ರರ೦ಗ ಇತಿಹಾಸದಲ್ಲೊ೦ದು ಮೈಲಿಗಲ್ಲು. ಬಹುಶ: ಪ್ರತಿ ಸಲ ಬಿಡುಗಡೆಯಾದಗಲೂ ನೂರು ದಿನಗಳ ಪ್ರದರ್ಶನಗಳನ್ನು ಕ೦ಡ ಕನ್ನಡ ಚಿತ್ರವಿದು. ಚಿತ್ರದ ತಾರಾಗಣವೂ ಕನ್ನಡದ ಅತ್ಯುತ್ತಮ ಕಲಾವಿದರಿ೦ದ ತು೦ಬಿತ್ತು. ಆಯೋಧ್ಯೆಯ ರಾಜ ಹರಿಶ್ಚ೦ದ್ರನಾಗಿ ಡಾರಾಜ್ ಕುಮಾರ್, ಮಹರ್ಷಿ ವಿಶ್ವಾಮಿತ್ರನಾಗಿ ಉದಯ್ ಕುಮಾರ್, ನಕ್ಷತ್ರಿಕನಾಗಿ ನರಸಿ೦ಹರಾಜು, ವೀರಬಾಹುವಾಗಿ ಎಮ್.ಪಿ. ಶ೦ಕರ್ ನಟಿಸಿದ ಈ ಚಿತ್ರ ಕನ್ನಡ ಚಿತ್ರ ರಸಿಕರ ನೆನಪಿನಿ೦ದ ಇನ್ನೂ ಮಾಸಿಲ್ಲ. ಇಲ್ಲಿ ಇನ್ನೊ೦ದು ವಿಷಯ ಗಮನಿಸಬಹುದು: 'ಸತ್ಯ ಹರಿಶ್ಚ೦ದ್ರ' ಚಿತ್ರದ 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ, ಹುಟ್ಟು ಸಾಯುವ ಆಳು ಮನುಷ್ಯ ಮನುಷ್ಯನ ಮಧ್ಯೆ ಮೇಲ್ಯಾವುದು ಕೀಳ್ಯಾವುದೋ' ಹಾಡು ಹಾಡದೇ ಇ೦ದಿಗೂ ಬೆ೦ಗಳೂರಿನಲ್ಲಿ ನಡೆಯುವ ಯಾವುದೇ ಸ೦ಗೀತ ರಸಸ೦ಜೆ (ಆರ್ಕೆಸ್ಟ್ರಾ) ಕಾರ್ಯಕ್ರಮ ಕೊನೆಗೊಳ್ಳುವುದಿಲ್ಲ. ಹಾಡು ಕೂಡಾ ಅಷ್ಟೇ ಅರ್ಥಪೂರ್ಣವಾಗಿದೆ ಹಾಗೂ ಮಾನವತೆಯ ಮಹತ್ವವನ್ನು ಪ್ರತಿಧ್ವನಿಸುತ್ತಿದೆ.

ಈ ಬೆಳವಣಿಗೆ ಮು೦ದೆ ಹಲವಾರು ಕಪ್ಪು-ಬಿಳುಪು ಚಿತ್ರಗಳು ವರ್ಣಮಯವಾಗಲು ನಾ೦ದಿಯಾಗುವ೦ತಿದೆ. ಈಗಾಗಲೇ 'ಮಾಯಾ ಬಜಾರ್' ಚಿತ್ರ ಬಣ್ಣದ ಲೋಕಕ್ಕೆ ಕಾಲಿರಿಸಿದೆಯ೦ತೆ. ಕನ್ನಡ ಚಿತ್ರರ೦ಗಕ್ಕೆ ಇದೊ೦ದು ಉತ್ತಮ ಬೆಳವಣಿಗೆ. ಕನ್ನಡದ ಹಳೆಯ ಚಿತ್ರಗಳನ್ನು ಇ೦ದಿನ ಜನಾ೦ಗಕ್ಕೆ ಪರಿಚಯಿಸುವಲ್ಲಿ ಈ ಬೆಳವಣಿಗೆಗಳು ಪ್ರಮುಖ ಪಾತ್ರವಹಿಸಿಲಿದೆ ಎ೦ಬುದರಲಿ ಸ೦ಶಯವಿಲ್ಲ.

ರವೀಶ

Sunday, April 06, 2008

In our own backyard...

Visit to Malpe, a beach in Karnataka coastal region will never be the same anymore. Malpe is 4 kms away from temple town of Udupi and 60 kms away from Mangalore. Till now Malpe was known for being a port, beach town and of course for St.Mary’s Island, which is full of volcanic rocks of different shapes and is a boat ride away from Malpe. House Boat at Malpe near UdupiApril 2, 2008 is a very special day for coastal Karnataka in general and Malpe in particular. New chapter in Karnataka’s coastal tourism was written when Paradise Isles of Malpe in association with Dept. of Tourism, Karnataka launched the House boat cruise programme(called ‘Paradise Lagoon’) in Hoode backwaters(Kemmannu Hoode) near Malpe, for the first time in Karnataka, which most of us till now would have heard/ seen only in backwaters of Kerala or Goa. These house boats have been designed in the lines of the ones conceptualized by Jungle Lodges of India. Presently you can choose from either 2 rooms or one room facility in the house boats here. Also you will be provided with one cook and two oarsmen. Houseboat is devoid of any engine to avoid engine noise and it is lit by hurricane lantern rather than electricity. You will even find resemblance to the traditional house of Dakshina Kannada if you observe the interior design of the boat. Well, it would surely be a tourist’s delight to have a cruise in this house boat.On the day of inauguration of house boat service in malpeSpeaking at the launch of ‘Paradise Lagoon’ in Malpe, C. Somashekhara, Director, Department of Tourism, Karnataka, announced the sanction of Rs.6.4 crores by the Union Government for the development of beach tourism along the 320 km coastal belt of Karnataka. Also, he hinted at the development of 8 beach spots in this region. This should send right signals to the private firms to chip in to make tourism in this part of Karnataka a success story as in Kerala.House boat interiors at MalpePeople of undivided Dakshina Kannada district have always been known for their spirit of enterprise. Tourism is one potential area where the entrepreneurial capabilities of the people of coastal Karnataka (Dakshina Kannada and Udupi districts) have not been put into good use. Let us hope with the launch of house boat cruise here, we would see many more such developments in the future.

Regards,
Raveesh

Picture Source: www.mangalorean.com

References :
Mangalorean - Udupi: Karnataka coast gets first houseboat
Business Line - Karnataka gets Rs 6 cr for beach tourism development

Also Read,
Mangalore Beaches Series - Someshwara Beach
Mangalore Beaches Series - Kasaragod Beach

LinkWithin

Related Posts with Thumbnails