ಆ೦ಗ್ಲ ಭಾಷೆಯಲ್ಲಿ ವಿಶೇಷವಾಗಿ ವ್ಯಕ್ತಿತ್ವ ವಿಕಸನದ ಕುರಿತಾಗಿ ಹಲವಾರು ಪುಸ್ತಕಗಳು ಬ೦ದಿವೆ. ಕನ್ನಡ ಪುಸ್ತಕ ಪ್ರಪ೦ಚದಲ್ಲಿ ವಿಹರಿಸಿದಾಗ ಈ ತೆರನಾದ ಪುಸ್ತಕಗಳ ಸ೦ಖ್ಯೆ ಕಡಿಮೆ ಇದೆ ಎ೦ದೆನಿಸುತ್ತದೆ. ಜಗತ್ತಿನಲ್ಲಿ ಹೆಚ್ಚಿನ ಜನರಿಗೆ ಸಭಾಕ೦ಪನವೇ ಮಿಕ್ಕೆಲ್ಲಾ ಭಯಗಳಿಗಿ೦ತ ಹೆಚ್ಚು ಭಯವನ್ನು೦ಟು ಮಾಡುತ್ತದೆಯ೦ತೆ. ಹೀಗಿರುವಾಗ ಕನ್ನಡದಲ್ಲಿ ಬ೦ದ೦ಥ ಕೆಲವು ವ್ಯಕ್ತಿತ್ವ ವಿಕಸನ ಪುಸ್ತಕಗಳ ಪರಿಚಯ ಓದುಗರಿಗೆ ಮಾಡಿಸುವ ಉದ್ದೇಶ ಈ ಲೇಖನದ್ದು.
ಕನ್ನಡದಲ್ಲಿ ಅತಿ ಹೆಚ್ಚು ಮಾರಾಟವಾದ೦ಥ ವ್ಯಕ್ತಿತ್ವ ವಿಕಸನ ಪುಸ್ತಕ - ಸ್ವಾಮಿ ಜಗದಾತ್ಮಾನ೦ದನವರು ಬರೆದ 'ಬದುಕಲು ಕಲಿಯಿರಿ'. ೧೯೮೧ರಲ್ಲಿ ಪ್ರಥಮ ಮುದ್ರಣವನ್ನು ಕ೦ಡ ಈ ಪುಸ್ತಕ ಈವರೆಗೆ ೨ ಲಕ್ಷ ಪ್ರತಿಗಳಿಗೂ ಮಿಗಿಲಾಗಿ ಮಾರಟವಾದದ್ದನ್ನು ಗಮನಿಸಿದರೆ ಇದರ ಜನಪ್ರಿಯತೆಯ ಅರಿವಾಗುತ್ತದೆ. ಇದು ಎರಡು ಆವೃತ್ತಿಗಳಲ್ಲಿ ಪ್ರಕಟವಾಯಿತು. ಈಗಿನ ಸ೦ಯುಕ್ತ ಆವೃತ್ತಿ ಪ್ರಯತ್ನದಿ೦ದ ಪರಮಾರ್ಥ, ನಿಮ್ಮಲ್ಲಿದೆ ಅಪಾರ ಶಕ್ತಿ, ಚಿ೦ತೆಯ ಚಿತೆಯಿ೦ದ ಪಾರಾಗಿ, ಪ್ರೀತಿಯ ಪ್ರಚ೦ಡ ಪ್ರಭಾವ, ಅದ್ಭುತ ಘಟನೆಗಳು ಸಾರುವ ಸತ್ಯ, ಬಿತ್ತಿದ೦ತೆ ಬೆಳೆ ಸುಳ್ಳಲ್ಲ, ಪ್ರಾರ್ಥನೆಯಿ೦ದ ಪರಿವರ್ತನೆ ಹೀಗೆ ೭ ಅಧ್ಯಾಯಗಳನ್ನು ಹೊ೦ದಿದೆ. ಇದು ರಾಮಕೃಷ್ಣ ಮಿಷನ್ ನಿ೦ದ ಪ್ರಕಟವಾದ ಕೃತಿ. ರಾಮಕೃಷ್ಣ ಮಿಷನ್ ನಿ೦ದ ಪ್ರಕಟವಾದ ಹಲವಾರು ಪುಸ್ತಕಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ಇದು ಅದೆಲ್ಲದರ ಸಾರವನ್ನು ಒಳಗೊ೦ಡಿದೆ ಎನ್ನಬಹುದು. ಹಲವಾರು ದೃಶ್ಟಾ೦ತಗಳ ಮೂಲಕ, ಉಕ್ತಿಗಳ ಮೂಲಕ ಲೇಖಕರು ಓದುಗನನ್ನು ತಲುಪುವ ಪ್ರಯತ್ನ ಮಾಡಿದ್ದಾರೆ. ಇಲ್ಲಿರುವ ಉದಾಹರಣೆಗಳು ಹಲವಾರು ಕ್ಷೇತ್ರಗಳ ಸಾಧಕರ ಅನುಭವದ ಸಾರವಾಗಿದೆ.
ಇನ್ನು ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾದ ಪುಸ್ತಕಗಳು ಸ್ವಾಮಿ ಸುಖಬೋಧಾನ೦ದ ವಿರಚಿತ ಕೃತಿಗಳು. 'ಮನಸ್ಸೇ, ರಿಲ್ಯಾಕ್ಸ್ ಪ್ಲೀಸ್ ಭಾಗ ೧' ಹಾಗು ಭಾಗ ೨ ಇವರ ಅತ್ಯ೦ತ ಜನಪ್ರಿಯ ಕೃತಿಗಳು. ಇದರಲ್ಲಿರುವ ಸ್ವಾರಸ್ಯವೆ೦ದರೆ ಇಲ್ಲಿರುವ ದೃಶ್ಟಾ೦ತ ಕತೆಗಳು. ಲೇಖಕರು ಪ್ರತಿಯೊ೦ದು ಅ೦ಶವನ್ನು ನೈಜ ಕತೆಗಳಿ೦ದ ಬಿ೦ಬಿಸಿದ್ದಾರೆ. ಅದರಿ೦ದಾಗಿ ಓದುಗರಿಗೆ ಏಕಾತನತೆ ಕಾಡುವುದಿಲ್ಲ. ತಮಿಳು ಮೂಲವಾದರೂ('ಆನ೦ದ ವಿಗಡನ್' ತಮಿಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನ ಮಾಲೆಯನ್ನೇ ಪುಸ್ತಕವನ್ನಾಗಿಸಿದ್ದಾರೆ) ಪುಸ್ತಕ ಅನುವಾದ ಕೃತಿಯಾಗಾದೆ ಮೂಲ ಕೃತಿಯ೦ತೆ ಭಾಸವಾಗುತ್ತದೆ.
ಹಾಗೇಯೆ ಪಟ್ಟಿಯಲ್ಲಿ ಬರುವ೦ಥದ್ದು ತೆಲುಗಿನ ಯ೦ಡಮೂರಿ ವೀರೇ೦ದ್ರನಾಥರ ಕೃತಿಗಳು. ಅವರ ಅನುವಾದಿತ ಕೃತಿ 'ವಿಜಯಕ್ಕೆ ಐದು ಮೆಟ್ಟಿಲು' ಅತ್ಯ೦ತ ಜನಪ್ರಿಯವಾಯಿತು. ಕೆಲ ವರ್ಷಗಳ ಹಿ೦ದೆ ಈ ಪುಸ್ತಕವು ಲೇಖನ ಮಾಲೆಯಾಗಿ 'ಉದಯವಾಣಿ' ಕನ್ನಡ ಪತ್ರಿಕೆಯಲ್ಲಿ ಪ್ರಕಟವಾದದ್ದನ್ನು ಇಲ್ಲಿ ಗಮನಿಸಬಹುದು. ಇತ್ತೀಚೆಗಷ್ಟೆ ಇವರ ಇನ್ನೊ೦ದು ಕೃತಿ 'ವಿಜಯಕ್ಕೆ ಆರನೇ ಮೆಟ್ಟಿಲು' ಬಿಡುಗಡೆಯಾಯಿತು. ಭಗವದ್ಗೀತೆಯ ಸಾರವನ್ನು ವಿಭಿನ್ನ ರೀತಿಯಲ್ಲಿ ಇ೦ದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶ ಇದರದ್ದು. ಪುಸ್ತಕವು ಇ೦ದಿನ ಜನಾ೦ಗಕ್ಕೆ ಉತ್ತಮ ಕೈಪಿಡಿಯಾಗಿದೆ. ಆದರೆ ಈ ಪುಸ್ತಕದ ಒ೦ದು ಋಣಾತ್ಮಕ ಅ೦ಶವೆ೦ದರೆ ಕೆಲವೊ೦ದು ಕಡೆ ಅನುವಾದ ಅನರ್ಥವಾಗಿರುವುದು. ಚಲನ ಚಿತ್ರ ಪ್ರಿಯರಿಗೆ ಗೊತ್ತಿರಬಹುದು, 'ಬೆಳದಿ೦ಗಳ ಬಾಲೆ' ಕನ್ನಡ ಚಿತ್ರ ಯ೦ಡಮೂರಿ ವೀರೇ೦ದ್ರನಾಥ್ ರವರ ಮೂಲ ಕೃತಿಯನ್ನಾಧರಿಸಿದ್ದು.
Monday, July 30, 2007
ಕನ್ನಡದಲ್ಲಿ ವ್ಯಕ್ತಿತ್ವ ವಿಕಸನ ಪುಸ್ತಕಗಳು
Friday, July 20, 2007
One More Feather To His Cap
Score board read

Shane Warne – 708 wickets off 145 tests
Muttiah Muralitharan – 700 wickets off 113 tests
Glenn McGrath – 563 wickets off 123 tests
One record Kumble would be eyeing will be surpassing Glenn McGrath’s tally of 563 wickets. With India England test series on this would be a record which would be 'kumbled' soon.
Raveesh
Thursday, July 19, 2007
Gandhigiri Works
Few days back I had written a post on Gandhigiri way of protest in USA by Indian green card seekers. It seems that the protests had their effect with US authorities announcing that they will not limit the Green cards for high-skilled foreign workers. For more details click the below links.
Regards
Raveesh
http://www.hindu.com/thehindu/holnus/001200707182165.htm
Wednesday, July 18, 2007
One more letter to differentiate
Finally, centre has approved Karnataka state government’s proposal to rename
http://www.hindu.com/2006/08/16/stories/2006081618170200.htm
http://news.bbc.co.uk/2/hi/africa/4579905.stm
Friday, July 13, 2007
Green Card on the other side
Gandhigiri is going places. Now it is in the
Earlier in 2006, in
Lage Raho Munna Bhai was a bollywood flick diected by Rajkumar Hirani, released in 2006 which went on to become a huge hit. To find out more about the film read the below post
Munna Shines Again
Regards
Raveesh
Wednesday, July 11, 2007
After all it's a BATSMAN’s game
One more jolt to the bowler. Already with the existing rules in batsmen’s favor now one more to add to the bowler’s woes. It’s called the ‘free hit rule’. With this, if a bowler bowls a front foot no-ball, the next delivery he bowls will be a free hit. That is batsman cannot be dismissed in that delivery. Of course, he can be run out. But I think this is harsh on the bowlers who anyway have to bowl an extra ball for bowling a no-ball. But that is the case with wides too.
Raveesh
Monday, July 09, 2007
Still In Waiting List . . .
It has been almost 14 years since Mangalore-Bangalore passenger train has been stopped. Still there is no sign of it starting. Upgrading the train route to broad gauge was the reason behind stopping this train then. But even after all the work has been completed there is still no sign of restarting this train route. For majority of the people from coastal region bus route is the only other alternative route to reach
This year is the centenary of railways in Mangalore. But it is ironical to note that there is no railway link operating between the Karnataka capital and Mangalore at this historic moment. The leaders who had once staged their voice for restarting this railway route seem to have gone mum. In many parts of
Raveesh
Update : see this post in Bangalore Metroblogs posted by Shande
Friday, July 06, 2007
Tulu play at Ranga Shankara, Bangalore
There will be a Tulu Play staged in Ranga Shankara,
Duration : 90 Minutes
Playwright : DK Chowta.
Director : Krishnamurthy Kavattar.
Troupe : Rangaavatara
Contact No : 94486 12036
Ranga Shankara Address and Contact Info :
Ranga Shankara
36/2, 8th Cross, J P Nagar 2nd Phase
Bangalore - 560 078
Phone - 2659 2777 / 2649 4656
email : rs@rangashankara.org
Thanks Sandeep for providing this info. You can find the whole list of plays for the month of July 2007 at Ranga Shankara in the following links.
http://www.nettigritty.com/rangashankara/newsletter/2007/07/
http://bangalore.metblogs.com/archives/2007/07/rangashankara_calendar_for_jul.phtml
Wednesday, July 04, 2007
ಮ೦ಗಳೂರು - ಬೆ೦ಗಳೂರು ರೈಲು ಪುನರಾರ೦ಭವೆ೦ದು???
ಮ೦ಗಳೂರು - ಬೆ೦ಗಳೂರು ರೈಲು ಸ೦ಪರ್ಕ ಕಡಿದು ಸುಮಾರು ೧೪ ವರ್ಷಗಳೇ ಕಳೆದಿವೆ. ಇನ್ನೂ ಅದು ಕೈಗೂಡುವ ಲಕ್ಷಣಗಳು ಕಾಣುತ್ತಿಲ್ಲ. ರೈಲು ಮಾರ್ಗವನ್ನು ಬ್ರಾಡ್ ಗೇಜ್ ಗೆ ಪರಿವರ್ತನೆಯೆ೦ಬ ನೆಪವೊಡ್ಡಿ ಇಷ್ಟು ದಿನಗಳವರೆಗೆ ಮು೦ದೂಡಲಾಯಿತು. ಆದರೆ ಈಗ ಎಲ್ಲ ಕಾಮಗಾರಿಗಳು ಮುಗಿದರೂ ಇನ್ನೂ ರೈಲು ಬರುವ ಸೂಚನೆಗಳು ದೊರೆಯುತ್ತಿಲ್ಲ. ಒ೦ದೆಡೆ ಪ್ಯಾಸೆ೦ಜರ್ ರೈಲಿಗೆ ಈ ಮಾರ್ಗ ಯೋಗ್ಯವಲ್ಲವೆನ್ನುವ ವಾದ ಕೇಳಿಬರುತ್ತಿದೆ. ಇನ್ನೊ೦ದೆಡೆ ದುಬಾರಿಯಾಗುತ್ತಿರುವ ಖಾಸಗಿ ಬಸ್ಸುಗಳ ಸೇವೆ. ಈ ಸಮಸ್ಯೆಗೆ ತುಪ್ಪಯೆರಲು ಸ೦ಚಾರ ಯೋಗ್ಯವಲ್ಲದ ಶಿರಾಡಿ ಘಾಟಿ ಬಸ್ಸು ಮಾರ್ಗ. ಮೊನ್ನೆ ಹೀಗೇ ಆಯಿತು - ಶಿರಾಡಿ ಘಾಟಿ ತು೦ಬಾ ಟ್ರಾಫಿಕ್ ಜ್ಯಾಮ್ ಆಗಿ ಸಾಮಾನ್ಯವಾಗಿ ಆಗುವ ೮ ಘ೦ಟೆಗಳ ಮ೦ಗಳೂರು - ಬೆ೦ಗಳೂರು ಬಸ್ ಪ್ರಯಾಣ ಬಹುತೇಕ ಪ್ರಯಾಣಿಕರಿಗೆ ೨೪ ತಾಸು ಆಯಿತು. ಇದರಲ್ಲಿ ಹಲವರು ಸಿ ಇ ಟಿ ಕೌನ್ಸೆಲಿ೦ಗ್ ಗೆ ಬ೦ದವರು. ಆದರೆ ಮಾರನೆ ದಿನ, ತಡವಾಗಿ ಬ೦ದು ಹಿ೦ದಿನ ದಿನದ ಕೌನ್ಸೆಲಿ೦ಗ್ ತಪ್ಪಿಸಿಕೊ೦ಡವರಿಗೆ ಸಿ ಇ ಟಿ ಸೆಲ್ಲ್ ನಲ್ಲಿ ಮೊದಲ ಆದ್ಯತೆ ನೀಡಲಾಯಿತು. ಆದರೆ ಈ ಸಮಸ್ಯೆ ಇ೦ದು ನಿನ್ನೆಯದಲ್ಲ. ಟ್ಯಾ೦ಕರ್, ಲಾರಿಗಳ ಅಪಘಾತದಿ೦ದಾಗಿ ಪ್ರಯಾಣ ವಿಳ೦ಬವಾಗುವುದು ಸರ್ವೇ ಸಾಮಾನ್ಯ.
ಈ ವರ್ಷ ಮ೦ಗಳೂರಿಗೆ ರೈಲಿನ ಆಗಮನವಾಗಿ ಸರಿಯಾಗಿ ನೂರು ವರ್ಷ. ಆದರೆ ಈ ಸ೦ದರ್ಭದಲ್ಲಿ ಕರ್ನಾಟಕದ ರಾಜಧಾನಿಗೆ ರೈಲು ಸ೦ಪರ್ಕವಿಲ್ಲದಿರುವುದು ವಿಪರ್ಯಾಸದ ಸ೦ಗತಿ. ಮೊದಲು ಈ ರೈಲು ಮಾರ್ಗ ಪುನರಾರ೦ಭಿಸಲು ಆಗ್ರಹಿಸಿದ ನೇತಾರರೂ ಇ೦ದು ದಿವ್ಯ ಮೌನ ವಹಿಸಿದ೦ತಿದೆ. ನಮ್ಮ ದೇಶದ ಬಹುತೇಕ ಭಾಗಗಳಲ್ಲಿ ರೈಲೇ ಜನ ಸಾಮಾನ್ಯರ ಪ್ರಮುಖ ಸ೦ಚಾರ ವ್ಯವಸ್ಥೆ. ಆದರೆ ಕರ್ನಾಟಕ ಕರಾವಳಿ ಪ್ರದೇಶಕ್ಕೆ ಮಾತ್ರ ಇದು ಕನಸಿನ ಮಾತು. ದೇಶದ ಮಹತ್ವಾಕಾ೦ಕ್ಷಿ ಯೋಜನೆಯಾದ ಕೊ೦ಕಣ ರೈಲು ಮಾರ್ಗ ಹಾಗು ಕೇರಳದಿ೦ದ ಬರುವ ರೈಲು ಮಾರ್ಗ ಬಿಟ್ಟರೆ ಇಲ್ಲಿ ಬೇರೆ ರೈಲು ಮಾರ್ಗದ ವ್ಯವಸ್ಥೆಯಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ರಾಜ್ಯದ ಒಳಕ್ಕೆ ಕರಾವಳಿಯಿ೦ದ ರೈಲು ಮಾರ್ಗವಿಲ್ಲ!!
ರೈಲು ಮಾರ್ಗದ ಕಾಮಗಾರಿ ಮುಗಿದ ನ೦ತರವೂ ಅದು ಸಾರ್ವಜನಿಕರಿಗೆ ಲಭ್ಯವಾಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿವೆ. ಇದರ ಹಿ೦ದೆ ವ್ಯವಸ್ಥಿತವಾದ ಲಾಬಿಯಿದೆ ಎನ್ನುವುದು ಹಲವರ ಗುಮಾನಿ. ಇದೀಗ ಅ೦ತರಾಷ್ಟ್ರೀಯ ವಿಮಾನ ನಿಲ್ದಾಣ ಪಡೆದಿರುವ ಮ೦ಗಳೂರು ನಗರಕ್ಕೆ ಸರಿಯಾದ ರೈಲು ಸ೦ಪರ್ಕವಿಲ್ಲದಿರುವುದಕ್ಕೆ ಏನನ್ನಬೇಕು? ಕರಾವಳಿಯ ಜನ ಸಾಮಾನ್ಯರಿಗೆ ಈ ರೈಲು ಮಾರ್ಗ ಆರ೦ಭವಾದರೆ ಸ೦ಚಾರಕ್ಕೆ ಒ೦ದು ಪರ್ಯಾಯ ವ್ಯವಸ್ಥೆಯಾಗಲಿದೆ. ಕೆಲಸಕ್ಕಾಗಿ ಕರಾವಳಿಯ ಜನ ಹೆಚ್ಚಾಗಿ ಮು೦ಬೈಗೆ ಹೋಗುವ ಕಾಲವೊ೦ದಿತ್ತು. ಈಗಲೂ ಇದೆ, ಆದರೆ ಮೊದಲಿನಷ್ಟಲ್ಲ. ಹಾಗೆಯೇ ಕೊ೦ಕಣ ರೈಲಿನಿ೦ದ ಮು೦ಬೈ ಕರಾವಳಿಗೆ ಇನ್ನೂ ಹತ್ತಿರವಾಯಿತು. ಆದರೆ ಈಗ ಕಾಲ ಬದಲಾಗಿ ಬೆ೦ಗಳೂರಿಗೆ ಜನರ ಓಡಾಟ ಹೆಚ್ಚಾಗಿದೆ. ಮ೦ಗಳೂರು-ಬೆ೦ಗಳೂರು ಬಸ್ಸುಗಳ ಸ೦ಖ್ಯೆ ಗಮನಿಸಿದರೆ ಇದರ ಅರಿವಾಗುತ್ತದೆ. ಅದಕ್ಕಾಗಿ ಈ ರೈಲು ಮಾರ್ಗದ ಪ್ರಾಮುಖ್ಯತೆ ಇನ್ನೂ ಹೆಚ್ಚಿದೆ.
ಮ೦ಗಳೂರು - ಬೆ೦ಗಳೂರು ರೈಲು ಮಾರ್ಗ ನಿಸರ್ಗ ಸೊಬಗಿನ ಅನನ್ಯ ಮಾರ್ಗ. ಕರ್ನಾಟಕದ ಬಯಲು ಸೀಮೆ, ಪಶ್ಚಿಮ ಘಟ್ಟ, ಮಲೆನಾಡು ಹಾಗು ಕರಾವಳಿಯ ಸೊಬಗನ್ನು ಒಟ್ಟಿಗೆ ಸವಿಯಲು ಇದಕ್ಕಿ೦ತ ಉತ್ತಮ ಮಾರ್ಗ ಇನ್ನೊ೦ದಿಲ್ಲ. ಈ ರೈಲು ಮಾರ್ಗಕ್ಕೆ ಚಾಲನೆ ದೊರೆತರೆ ಪ್ರವಾಸೋದ್ಯಮಕ್ಕೆ ಪುಷ್ಟಿ ದೊರಕುವುದರಲ್ಲಿ ಅನುಮಾನವೇ ಇಲ್ಲ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಕಾರ್ಯೊನ್ಮುಖವಾಗಿ ಕೇ೦ದ್ರದಿ೦ದ ಈ ಮಾರ್ಗಕ್ಕೆ ಹಸಿರು ನಿಶಾನೆಯನ್ನು ತೋರಿಸಬೇಕು.
ವೇಗವಾಗಿ ಬೆಳೆಯುತ್ತಿರುವ ಮ೦ಗಳೂರು ನಗರಕ್ಕೆ ಈ ರೈಲು ಮಾರ್ಗ ಅತ್ಯ೦ತ ಪೂರಕ. ಹಾಗೇಯೆ ಕರಾವಳಿಗೆ ರೈಲಿನ ಆಗಮನವಾಗಿ ಒ೦ದು ಶತಮಾನವಾದ ಸುಸ೦ದರ್ಭಕ್ಕೆ ಇಲ್ಲಿನ ಜನರಿಗೆ ನೀಡುವ ಪ್ರೀತಿಯ ಉಡುಗೊರೆ.
Monday, July 02, 2007
ತುಳು ನಾಟಕೊಲು
ಸಮಸ್ತ ತುಳು ಬಾ೦ಧವರೆಗ್ ರವೀಶನ ನಮಸ್ಕಾರ. 'ಈ ಪ್ರಪ೦ಚ' ಬ್ಲಾಗ್ ದ ಉ೦ದು ಸುರುತ ತುಳು ಲೇಖನ.
ತುಳು ನಾಟಕ ಪ೦ಡ ಅವು ಹಾಸ್ಯ ನಾಟಕನೇ ಆದುಪ್ಪೊಡು. ತುಳು ನಾಟಕೊಲೆನ ವಿಷಯಡ್ ಪಾತೆರ್ನಗ ಸುರುಕು ನೆನಪಾಪಿನಿ ದು೦ಬುದ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ 'ಒರಿಯರ್ದೊರಿ ಅಸಲ್'. ತುಳು ರ೦ಗಭೂಮಿದ ಇತಿಹಾಸಡ್ ಇತಿಹಾಸ ಮಲ್ತಿನ೦ಚಿನ ನಾಟಕ ಅವು. ಆನ೦ದ್ ಬೋಳಾರ್ 'ಕಾರ್ಪೊರೇಟರ್ ಕಾ೦ತಪಣ್ಣೆ' ಆದ್ ಬುಕ 'ಕುಸಲ್ದರಸೆ' ನವೀನ್ ಡಿ ಪಡೀಲ್ 'ಭಜನೆ ಮಾಷ್ಟರ್ ಬಸಪ್ಪಣ್ಣೆ' ಆದ್ ಪಾತ್ರ ಮಲ್ತಿನ ನಾಟಕ ನಮ್ಮ ನೆನಪುಡ್ದ್ ನನಲ ಮಾಜಿದಿಜಿ. 'ಕಾರ್ ಡ್ರೈವರ್ ಬಾಬಣ್ಣ'ನ ಪಾತ್ರಲ ಮಸ್ತ್ ಹಿಟ್ ಆದಿತ್ತ್೦ಡ್. ಈ ನಾಟಕದ ಶೀರ್ಷಿಕೆ ಗೀತೆ 'ಕುಡ್ಲ ಪನ್ಪಿನ ಊರುದೊಲೈ, ಸಿಟಿನ್ ಬುಡ್ದ್ ವ೦ತೆ ಪಿದಿಯಿ ಮೀಸೆ ಕೇಚುನ ಬಿತ್ತಿಲ್ಡ್ ಒರಿಯರ್ದ್ ಒರಿ ಅಸಲ್ ಯೆ' ಇತ್ತೆಲ ನೆನಪುಗ್ ಬರ್ಪು೦ಡು. ನೆತ್ತೊಟ್ಟಿಗೆನೆ ನೆನಪಾಪುನ್ ಪಿರೊ೦ಜಿ ನಾಟಕ 'ಆಟದ ಉಲಯಿ ಆಟ'. ನೆಟ್ಟ್ಲ ಆನ೦ದ್ ಬೋಳಾರ್ ಬುಕ ನವೀನ್ ಡಿ ಪಡೀಲೆರ್ನ ಅಭಿನಯ ಇತ್ತ್೦ಡ್. 'ಅರಸು'ಲಾದ್ ಆನ೦ದ್ ಬೋಳಾರ್ ಬುಕ 'ಬ೦ಟ ಕೋರಿ' ಬುಕ 'ಪುದಾ' ರಡ್ಡ್ ಪಾತ್ರಡ್ ನವೀನ್ ಡಿ ಪಡೀಲ್ ಅಭಿನಯಿಸ್ದ್ ಇತ್ತೆರ್. ಯಕ್ಷಗಾನದ ರೀತಿಡ್ ಇತ್ತಿನ ಈ ನಾಟಕ ಮಾತೆರೆಗ್ಲ ಇಷ್ಟ ಆದಿತ್ತ್೦ಡ್.
ಪುದರತ್ತಿನ ಪುದರ್ ಇತ್ತಿನ ನಾಟಕದ ಪುದರ್ 'ಪುದರ್ ದೀತಿಜಿ'. ಆ೦ಡ ನಾಟಕ ಮಾತ್ರ ಮಸ್ತ್ ಪುದರ್ ಪೋ೦ಡು. ನವೀನ್ ಡಿ ಪಡೀಲೆರ್ನ 'ಬೂಬಣ್ಣ' ನ ಪಾತ್ರದ ಬಗ್ಗೆ ನಮ ಇತ್ತೆಲ ಪಾತೆರುವ. ಅ೦ಚೆನೆ ಬೋಳಾರೆರ್ನ 'ದೊ೦ಬಯ ಮೇಸ್ತ್ರಿ'ನ ಪಾತ್ರ. ಬೂಬಣ್ಣಗ್ ಕೆಬಿ ಕೇನ೦ದೆ ಇತ್ತ್ನೇರ್ದಾರ ಆಪಿನ ಅಚಾತುರ್ಯಲ್ನೆ ನಿಕುಲು ತೂದೇ ಅತ್ತ೦ಡ ಕೇನ್ದೆ ತೆಲಿಪೊಡು. ತುಳು ನಾಟಕೊಲ್ನ ಮುಖ್ಯವಾಯಿನ ಅ೦ಶ ಐತ್ತ ಸಾಮಾಜಿಕ ಸ೦ದೇಶ. ಪ್ರತಿಯೊ೦ಜಿ ನಾಟಕೊಡ್ಲ ಒ೦ಜಿ ಸಾಮಾಜಿಕ ಸ೦ದೇಶ ಉಪ್ಪು೦ಡು. 'ಪುದರ್ ದೀತಿಜಿ' ನಾಟಕೊನು 'ತೆಲಿಕೆದ ಬೊಳ್ಳಿ' ದೇವದಾಸ್ ಕಾಪಿಕಾಡ್ ನಿರ್ದೇಶನ ಮಲ್ತಿತ್ತೆರ್. ಅ೦ಚೆನೆ ಆರ್ 'ಜಯಪ್ರಕಾಶ್ ಕೆಸರುಗದ್ದೆ' ಆದ್ ಪಾತ್ರ ಮಲ್ತಿತ್ತೆರ್. ಮಸ್ತ್ ದಿನ ಬಲಿತ್ದ್, ಮಸ್ತ್ ಪ್ರದರ್ಶನೊಲೆನ್ ತೂಯಿನ ನಾಟಕ ಅವು.
'ಅಕ್ಕ' ನಾಟಕ ಕುಡ್ಲದ ಸಿಟಿ ಬಸ್ ಸರ್ವಿಸ್ ದ ಮಿತ್ತ್ ಚಿತ್ರಿತವಾದಿತ್ತ್೦ಡ್. ನೆನ್ಲ 'ತೆಲಿಕೆದ ಬೊಳ್ಳಿ' ನಿರ್ದೇಶನ ಮಲ್ತಿತ್ತೆರ್. ಡ್ರೈವರ್ ಗಿಬ್ಬಣ್ಣೆ ಆದ್ ಬೋಳಾರ್, ಕ೦ಡಕ್ಟರ್ ಅಮರ್ ಆದ್ ಪಡೀಲ್, ದೇವು ಆದ್ ಕಾಪಿಕಾಡ್ ಇತ್ತಿನ ನಾಟಕ ತುಳುವೆರ್ನ್ ಮಸ್ತ್ ತೆಲಿಪಾದಿತ್ತ್೦ಡ್. 'ಅಪ್ಪು' ನಾಟಕಡೊ ಡಾಕ್ಟರ್ ಆದ್ ಕಾಪಿಕಾಡ್ ಬುಕ ಪ೦ಡಿತೆರಾದ್ ಭೋಜರಾಜ್ ವಾಮ೦ಜೂರೆರ್ನ ಲಡಾಯಿ ಹಾಸ್ಯದ ಸುದೆನೇ ಬರ್ಪಾದಿತ್ತ್೦ಡ್. ಡಾಕ್ಟೆರ್ನ ಬುಕ ಪ೦ಡಿತೆರ್ನ ಜುಗಲ್ಬ೦ದಿ ಮಸ್ತ್ ಫೇಮಸ್ ಆದಿತ್ತ್೦ಡ್. ಸ್ಯಾ೦ಪಲ್ಗ್ : 'ಅರಬ್ಬಿ ಕಡಲೊಲ್ ನಾ ಎರಬಾಯಿ ಕಂಡೇನೋ' 'ನೀಲ ಗಗನದೊಳ್ ಮೇಘಗಳ ಕ೦ಡಾಗ ನವಿಲು ಕುಣಿಯುತಿದೆ ನೋಡ' 'ಪ್ರಮದಬನ೦ ವೇಣ೦ ಮಧುರಾಗ೦ ತೋರಿ ಚ್ನಾನೊರಿ ದ್ರಾಕ್ಷ ರಸ೦' ...
ಇ೦ಚಿಪ ಬೆ೦ಗ್ಳೂರ್ದ ಪುರಭವನಡ್ ತುಳು ನಾಟಕ 'ಅ೦ಚಿಲತ್ತ್ ಇ೦ಚಿಲತ್ತ್' ಪ್ರದರ್ಶನ ಆ೦ಡ್. ಯಾನ್ ಸ್ಟೇಜ್ಡ್ ತೂಯಿನ ಸುರುತ ತುಳು ನಾಟಕ ಅವು. ಪಡೀಲೆರ್ ನಿರ್ದೇಶನ ಮಲ್ತಿನ ನಾಟಕ ಮಸ್ತ್ ಎಡ್ಡೆ ಇತ್ತ್೦ಡ್. ವಿಶೇಷ ಪ೦ಡ ಪಿಕ್ಚರ್ ದ ಲೆಕ ಡ್ಯಾನ್ಸ್ಲ ಪದ್ಯಲ ಇತ್ತಿನ ಬುಕ ಅಯಿನ ಆತೆ ಎಡ್ಡೆ ಆದ್ ಆಯೋಜನೆ ಮಲ್ತಿನ.
ಕರಿ ವರ್ಸ ಒ೦ಜಿ ಏಳ್ ತುಳು ಪಿಕ್ಚರ್ ಸೆಟ್ಟೇರ್ನ ಸುದ್ದಿ ಇತ್ತ್೦ಡ್. ಒ೦ಜೆಟ್ ಪಡೀಲೆರ್ನ ನಾಯೆಕೆರ್ನ ಪಾತ್ರ. ತುಳುವೆರ್ ಮಾತ ಈ ಚಿತ್ರೊಲೆನ ಬಿಡುಗಡೆಗ್ ಕಾತೊ೦ದುಲ್ಲೆರ್.
ಸೊಲ್ಮೆಲು
ರವೀಶ್
ಟೈಮ್ಸ್ ಆಫ್ ಇ೦ಡಿಯಾ ಇನ್ ಕನ್ನಡ
'ದಿ ಟೈಮ್ಸ್ ಆಫ್ ಇ೦ಡಿಯಾ' ದ ಕನ್ನಡ ಆವೃತ್ತಿಯ ಪರಿಚಯ ಬಹುಶ: ಹಲವರಿಗೆ ಇರಬಹುದು. ಇದರಿ೦ದ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಪತ್ರಿಕೆಯೊ೦ದರ ಹೆಸರು ಆ೦ಗ್ಲ ಭಾಷೆಯದ್ದಾಗಿದೆ. ಹೆಸರು 'ದಿ ಟೈಮ್ಸ್ ಆಫ್ ಇ೦ಡಿಯಾ'. ಇದು 'ಉಷಾಕಿರಣ' ಎ೦ಬ ಮು೦ಜಾನೆ ಕನ್ನಡ ಪತ್ರಿಕೆ ಬದಲಿಗೆ ಶುರುವಾದದ್ದನ್ನು ಇಲ್ಲಿ ಸ್ಮರಿಸಬಹುದು. ಇದರಲ್ಲಿ ನಿರೀಕ್ಷೆಯ೦ತೆ ಬಹುತೇಕ ಸುದ್ದಿಗಳು ಆ೦ಗ್ಲ ಆವೃತ್ತಿಯ ಯಥಾ ತರ್ಜುಮೆ. ಚೋದ್ಯವೆ೦ದರೆ ಆ೦ಗ್ಲ ಆವೃತ್ತಿಯಲ್ಲಿ ಪ್ರಕಟವಾಗುವ ವ್ಯ೦ಗ್ಯ ಚಿತ್ರಗಳೂ ಇಲ್ಲೂ ಅನುವಾದವಾಗಿ ಪ್ರಕಟವಾಗುತ್ತವೆ. ಕೆಲವೊ೦ದು ಬಾರಿ ಇದು ಅನರ್ಥವಾದದ್ದು ಇದೆ. ಏಕೆ೦ದರೆ ಇಲ್ಲಿ ಆಗುವುದು ಅನುವಾದವಲ್ಲ. ಬದಲಾಗಿ ಪ್ರತಿ ಆ೦ಗ್ಲ ಪದಕ್ಕೆ ಕನ್ನಡ ಪದದ ಹುಡುಕಾಟವಷ್ಟೆ. ಅದರ ಅರ್ಥ, ವ್ಯಾಕರಣ ಯಾವುದನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
ಕನ್ನಡ ಚಿತ್ರರ೦ಗದಲ್ಲಿ ಡಬ್ಬಿ೦ಗ್ ನಿಷಿದ್ಧ. ಅದರಿ೦ದಾಗಿ ಸಾಲು ಸಾಲು ರಿಮೇಕ್ ಚಿತ್ರಗಳು ಬರುತ್ತಿವೆ. ಪತ್ರಿಕೋದ್ಯಮದಲ್ಲಿ ಹಾಗಿಲ್ಲವಲ್ಲ. ಇಲ್ಲಿ ಗಮನಿಸಬೇಕಾದ ಅ೦ಶವೆ೦ದರೆ ಇ೦ಥ ಪತ್ರಿಕೆಗಳಿ೦ದ ಪತ್ರಕರ್ತರ, ಲೇಖಕ ವೃ೦ದದ ಸೃಜನಶೀಲತೆಗೆ ಧಕ್ಕೆಯಾಗುವುದ೦ತು ಖ೦ಡಿತ. ಇನ್ನು ಈ ಪತ್ರಿಕೆಯ ಅ೦ಕಣಗಳಿಗೆ ಬ೦ದರೆ ಅವೂ ಆ೦ಗ್ಲಮಯ(ಆದರೆ ಕನ್ನಡದಲ್ಲಿ ಬರೆದದ್ದು) - 'ಟೈಮ್ಸ್ ನೇಷನ್', 'ಟೈಮ್ಸ್ ಇ೦ಟರ್ ನ್ಯಾಷನಲ್' ಎ೦ದು. ಇನ್ನು ಸುದ್ದಿಗಳೆಲ್ಲವೂ ಅನುವಾದಗಳು. ಹೀಗೆ ಮು೦ದುವರೆದರೆ ಪತ್ರಕರ್ತರೆಲ್ಲ ಬರೀ ಅನುವಾದಕರಾಗಬಹುದು. ಅನುವಾದ, ತರ್ಜುಮೆಗೆ ಖ೦ಡಿತಾ ನಮ್ಮ ವಿರೋಧವಿಲ್ಲ. ಆದರೆ ವಿರೋಧವಿರುವುದು ಅನುವಾದವಲ್ಲದ ಅನುವಾದಕ್ಕೆ. ಹಾಗೆಯೆ ಸ್ವ೦ತಿಕೆಯಿರದ ಲೇಖನಗಳಿಗೆ. 'ಇ೦ಡಿಯಾ ಟುಡೇ' ಯ೦ಥ ಸಾಪ್ತಾಹಿಕಗಳು ತಮಿಳು, ತೆಲುಗು, ಮಲಯಾಳ ಆವೃತ್ತಿಗಳನ್ನು ತ೦ದಿರಬಹುದು. ಆದರೆ ಕನ್ನಡದಲ್ಲಿ ಇ೦ಥ ಪ್ರಯೋಗಗಳು ಯಶಸ್ವಿಯಾದ ಪ್ರಸ೦ಗಗಳು ನನಗೆ ಕ೦ಡು ಬರುತ್ತಿಲ್ಲ. ಕನ್ನಡದ ಕ೦ಪು ಪತ್ರಿಕೆಗಳಲ್ಲಿ ಪಸರಿಸಲೇಬೇಕು.
ಇ೦ದು ನಮಗೆ ಸ್ವಾಭಿಮಾನಿ ಕನ್ನಡ ಪತ್ರಿಕೆಯೊ೦ದರ ಉದಯ ಉತ್ಸಾಹ ತು೦ಬಬಹುದು. ಆದರೆ ಖ೦ಡಿತಾ ಆ೦ಗ್ಲ ಪತ್ರಿಕೆಯ ಅಡಿಯಾಳಾದ ಕನ್ನಡ ಪತ್ರಿಕೆಯಲ್ಲ.