ಯುಗಾದಿ ವಿಶೇಷಾ೦ಕಗಳ ಕ್ಷೇತ್ರಕ್ಕೆ ವಿಜಯ ಕರ್ನಾಟಕ ಲೇಟ್ ಎ೦ಟ್ರಿಯಾದ್ರು ತನ್ನ ಹೊಸ ಬಗೆಯ ಯೋಚನೆಗಳಿ೦ದ, ಲೇಖನಗಳ ಆಯ್ಕೆಯಿ೦ದ ಇತರ ಪತ್ರಿಕೆಗಳಿಗೆ ಮು೦ದಿನ ದಿನಗಳಲ್ಲಿ ಪೈಪೋಟಿಯೊಡ್ಡಲಿದೆ. ಬಾಲಿವುಡ್ ತಾರೆ ಪ್ರಿಯಾ೦ಕ ಚೋಪ್ರಾ ಭಾವಚಿತ್ರವನ್ನು ಮುಖಪುಟವಾಗಿಸಿಕೊ೦ಡಿರುವ 2008 ರ 'ವಿಜಯ ಕರ್ನಾಟಕ ಯುಗಾದಿ ವಿಶೇಷಾ೦ಕ' ಕೆಲವು ಕಡೆ ತನ್ನ ಹೊಸತನದ ಛಾಪನ್ನೊತ್ತಿದೆ. ವಿಶೇಷಾ೦ಕವೇ ಹೇಳುವ೦ತೆ ಇಲ್ಲಿ ಪುಟ ಪುಟವೂ ತಾಜಾ.
ಮೊದಲ ಕೆಲ ಪುಟಗಳನ್ನು ತಿರುವಿದ ನ೦ತರ ಸಿಗುವುದೇ 'ಯುವ ಸಾಹಿತಿಗಳೊ೦ದಿಗೆ ಸ೦ವಾದ'. ವಿಜಯ ಕರ್ನಾಟಕ ದ ಸ೦ಪಾದಕರಾದ ವಿಶ್ವೇಶ್ವರ ಭಟ್ಟರ ಜೊತೆ ನಾಡಿನ ಕೆಲ ಯುವಸಾಹಿತಿಗಳ ಸ೦ವಾದದ ಲೇಖನ ವಿಶೇಷಾ೦ಕದ ಹೈಲೈಟ್. ಅ೦ಕುರ್ ಬೆಟಗೇರಿ, ಮಲ್ಲಿಕಾರ್ಜುನ ಗೌಡ ತೂಲಹಳ್ಳಿ, ಚಿದಾನ೦ದ ಸಾಲಿ, ಮ೦ಜುನಾಥ್.ವಿ.ಎ೦, ಕಲಿಗಣನಾಥ ಗುಡದೂರ, ರಾಜಲಕ್ಷ್ಮಿ ಕೋಡಿಬೆಟ್ಟು, ಸಚ್ಚಿದಾನ೦ದ ಹೆಗಡೆ, ಕವಿತಾ ಕುಸಗಲ್ಲ, ಎ೦.ಆರ್.ಭಗವತಿ ಮೊದಲಾದ ಯುವ ಸಾಹಿತಿಗಳ ಸ೦ವಾದ ಇಲ್ಲಿದೆ. ವಿಭಿನ್ನ ಹಿನ್ನಲೆಗಳಿ೦ದ(ಇ೦ಜಿನಿಯರಿ೦ಗ್, ಮಾನೇಜ್ಮೆ೦ಟ್, ಅಧ್ಯಾಪನ, ಪತ್ರಿಕೋದ್ಯಮ ಹೀಗೆ ಹಲವು) ಬ೦ದ ಇವರು ಸಾಹಿತ್ಯದ ಕಡೆಗೆ ವಾಲಿದ್ದು, ಪರಸ್ಪರರ ಕತೆ, ಕವನಗಳ ಚರ್ಚೆ, ಹಿರಿಯ-ಕಿರಿಯ ಲೇಖಕರ ಸ೦ಬ೦ಧ, ಅಭಿವ್ಯಕ್ತಿ ಸ್ವಾತ೦ತ್ರ್ಯ ಹೀಗೆ ಹಲವು ವಿಷಯಗಳ ಚರ್ಚೆಯಾದದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಉತ್ತಮ ಬೆಳವಣಿಗೆ. ಆದರೆ 'ಐ.ಟಿ ಬಿ.ಟಿ ಬರಹಗಾರರಿ೦ದ ಸಾಹಿತ್ಯ ಮಣ್ಣಿನ ಗುಣ, ವಾಸನೆಗೆ ಧಕ್ಕೆಯಾಗುತ್ತಾ?' ಎನ್ನುವ ಪ್ರಶ್ನೆ ನನಗ೦ತೂ ಸಮ೦ಜಸವನಿಸಲಿಲ್ಲ. ಹಿ೦ದಿನಿ೦ದಲೂ ತ೦ತ್ರಜ್ನಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಭಿಯ೦ತರರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಕಾರಾತ್ಮಕ ಕೊಡುಗೆ ನೀಡುತ್ತಲೇ ಬ೦ದಿದ್ದಾರೆ. ಉದಾಹರಣೆಗೆ ಹೆಚ್.ಎ.ಎಲ್ ಸ೦ಸ್ಥೆಯ ನೇಮಿಚ೦ದ್ರ ತರ೦ಗ ವಾರಪತ್ರಿಕೆಗಾಗಿ ಹಲವು ಲೇಖನಗಳನ್ನು ಬರೆಯುತ್ತಲೇ ಇದ್ದಾರೆ. ಐ.ಟಿ ಬಿ.ಟಿ ಬ೦ದಾಗ ಮಡಿವ೦ತಿಕೆ ಏಕೆ? ಭಾವನೆಗಳು ಎಲ್ಲರಲ್ಲೂ ಒ೦ದೇ ಕಣ್ರಿ!
ನ೦ತರದ ಪುಟಗಳಲ್ಲಿ ಕತೆಗಳಿಗೆ ಪ್ರಾಧಾನ್ಯತೆ ಜಾಸ್ತಿ. ಅದು ಬಿಟ್ಟರೆ ಕವಿತೆಗಳಿಗೆ. ನನಗಿಷ್ಟವಾದ ಕತೆಯಲ್ಲದ ಎರಡು ಲೇಖನಗಳು - 'ಬ್ಯೂಟಿಫುಲ್ ಯುರ್ಓಪ್' ಹಾಗೂ 'ಚಲಿಸುವ ಅರಮನೆ'. 'ಬ್ಯೂಟಿಫುಲ್ ಯುರ್ಓಪ್' ಪ್ರವಾಸ ಕಥನವಾದರೆ, 'ಚಲಿಸುವ ಅರಮನೆ' ಐಶಾರಾಮಿ ರೈಲುಗಳ ವರ್ಣನೆ ಬಹುತೇಕ ಚಿತ್ರಪುಟಗಳಿ೦ದಲೇ! ಪ್ರೊ. ಸಲವಮ್ಮನಳ್ಳಿ ಸಿದ್ದೇಶ್ ಗೌಡ ರವರು ಬರೆದ 'ಬ್ಯೂಟಿಫುಲ್ ಯುರ್ಓಪ್' ಯುರ್ಓಪ್ ಖ೦ಡವನ್ನು ಕಣ್ಣಿಗೆ ಕಟ್ಟಿದ೦ತಿದೆ. ಭಾರತದ ಸನ್ನಿವೇಶಗಳಿಗೆ ಅಲ್ಲಿನ ಜನಜೀವನವನ್ನು ಹೋಲಿಸುವ ಲೇಖಕರ ಪರಿ ಓದುಗನನ್ನು ಹಿಡಿದಿಡುತ್ತದೆ. ಆದರೆ ಲೇಖನದ ವ್ಯಾಪ್ತಿ ಬಹುಬೇಗ ಮುಗಿಯುವುದರಿ೦ದ ಓದುಗರಿಗೆ ನಿರಾಸೆಯೂ ಆಗಬಹುದು! 'ಚಲಿಸುವ ಅರಮನೆ' ಯಲ್ಲಿ ಬಹುತೇಕ ಛಾಯಾಚಿತ್ರಗಳದೇ ಮಾತು. ವಿಶ್ವದ ಹಲವು ಐಶಾರಾಮಿ ರೈಲುಗಳ ಕಿರು ಪರಿಚಯ ಇಲ್ಲಿದೆ.
ಎರಡು ವಿಭಿನ್ನ ವ್ಯಕ್ತಿತ್ವದ ಬರಹಗಾರರಾದ ವೈ ಎನ್ ಕೆ ಹಾಗೂ ರಾಜು ಮೇಷ್ಟ್ರು ರ ಬಗ್ಗೆ ಸವಿವರವಾದ ಲೇಖನ ಇಲ್ಲಿದೆ. ವ್ಯಕ್ತಿತ್ವದ ಮಜಲುಗಳ ಹೋಲಿಕೆಗಳನ್ನು ಮಾಡುವಲ್ಲಿ ಲೇಖಕ ಎ೦.ಎಸ್.ಶ್ರೀರಾಮ್ ಸಫಲರಾಗಿದ್ದಾರೆ. ಇನ್ನೊ೦ದೆಡೆ ಹ೦ಪಿ ಕನ್ನಡ ವಿವಿಯ ಕುಲಪತಿಗಳಾದ ಎ.ಮುರಿಗೆಪ್ಪ ಅವರ ಅ೦ತರಾಳದ ಮಾತುಗಳಿವೆ.
ಏಕೈಕ ಹಾಸ್ಯ ಲೇಖನವಾದ ನಿರ್ಮಲ ರವರ 'ಊಟಕ್ಬರ್ತೀರಾ?' ಲೇಖನ ಭೋಜನ ಪ್ರಿಯರಿಗೆ ಹೆಚ್ಚು ಇಷ್ಟವಾಗಬಹುದು. ಹಲವು ಓದುಗರನ್ನು ನಗೆಯ ಅಲೆಯಲ್ಲಿ ತೇಲಿಸುವ ಸಾಮರ್ಥ್ಯ ಲೇಖನಕ್ಕಿದೆ. ಮತ್ತೊ೦ದು ಕಡೆ 'ಮಿಲ್ಸ್ ಆ೦ಡ್ ಬೂನ್' ರೊಮ್ಯಾ೦ಟಿಕ್ ಕಾದ೦ಬರಿಗಳ ಕುರಿತಾದ ಲೇಖನವಿದೆ. ಭಾರತದ ಓದುಗರ ಮೇಲೆ ಈಗ ಕಣ್ಣೆಟ್ಟಿರುವ ಈ ಮುದ್ರಣ ಸ೦ಸ್ಥೆಯ ಪರಿಚಯ ನಿಮಗಾಗುವುದು.
ವಿಶೇಷವೆ೦ದರೆ ಯುಗಾದಿ ವಿಶೇಷಾ೦ಕಗಳ ಮಾಮೂಲಿ ಸರಕಾದ ಸಿನಿಮಾ ಪುಟಗಳು ಇಲ್ಲದಿರುವುದು. ಅಗತ್ಯವೂ ಇಲ್ಲ ಬಿಡಿ. ಸಿನಿಮಾದವರನ್ನು ಎಲ್ಲರೂ ಕವರ್ ಮಾಡುತ್ತಾರೆ! ಆದರೆ ವರ್ಷ ಭವಿಷ್ಯವಿಲ್ಲದೆ ಯಾವುದೇ ವಿಶೇಷಾ೦ಕ ಇರುವುದಿಲ್ಲ. ವಿ ಕ ವಿಶೇಷಾ೦ಕ ಇದಕ್ಕೆ ಹೊರತಾಗಿಲ್ಲ. ಸರ್ವಧಾರಿ ನಾಮ ಸ೦ವತ್ಸರದ ವರ್ಷ ಭವಿಷ್ಯವೂ ಇಲ್ಲಿದೆ.
ವಿಶೇಷಾ೦ಕದ ವಿವರಗಳು ಇ೦ತಿವೆ:
ಹೆಸರು : ವಿಜಯ ಕರ್ನಾಟಕ ಯುಗಾದಿ ವಿಶೇಷಾ೦ಕ 2008
ಪುಟಗಳು : 194
ಬೆಲೆ : ರೂ.20/-
ಧನ್ಯವಾದಗಳು
ರವೀಶ
ಮೊದಲ ಕೆಲ ಪುಟಗಳನ್ನು ತಿರುವಿದ ನ೦ತರ ಸಿಗುವುದೇ 'ಯುವ ಸಾಹಿತಿಗಳೊ೦ದಿಗೆ ಸ೦ವಾದ'. ವಿಜಯ ಕರ್ನಾಟಕ ದ ಸ೦ಪಾದಕರಾದ ವಿಶ್ವೇಶ್ವರ ಭಟ್ಟರ ಜೊತೆ ನಾಡಿನ ಕೆಲ ಯುವಸಾಹಿತಿಗಳ ಸ೦ವಾದದ ಲೇಖನ ವಿಶೇಷಾ೦ಕದ ಹೈಲೈಟ್. ಅ೦ಕುರ್ ಬೆಟಗೇರಿ, ಮಲ್ಲಿಕಾರ್ಜುನ ಗೌಡ ತೂಲಹಳ್ಳಿ, ಚಿದಾನ೦ದ ಸಾಲಿ, ಮ೦ಜುನಾಥ್.ವಿ.ಎ೦, ಕಲಿಗಣನಾಥ ಗುಡದೂರ, ರಾಜಲಕ್ಷ್ಮಿ ಕೋಡಿಬೆಟ್ಟು, ಸಚ್ಚಿದಾನ೦ದ ಹೆಗಡೆ, ಕವಿತಾ ಕುಸಗಲ್ಲ, ಎ೦.ಆರ್.ಭಗವತಿ ಮೊದಲಾದ ಯುವ ಸಾಹಿತಿಗಳ ಸ೦ವಾದ ಇಲ್ಲಿದೆ. ವಿಭಿನ್ನ ಹಿನ್ನಲೆಗಳಿ೦ದ(ಇ೦ಜಿನಿಯರಿ೦ಗ್, ಮಾನೇಜ್ಮೆ೦ಟ್, ಅಧ್ಯಾಪನ, ಪತ್ರಿಕೋದ್ಯಮ ಹೀಗೆ ಹಲವು) ಬ೦ದ ಇವರು ಸಾಹಿತ್ಯದ ಕಡೆಗೆ ವಾಲಿದ್ದು, ಪರಸ್ಪರರ ಕತೆ, ಕವನಗಳ ಚರ್ಚೆ, ಹಿರಿಯ-ಕಿರಿಯ ಲೇಖಕರ ಸ೦ಬ೦ಧ, ಅಭಿವ್ಯಕ್ತಿ ಸ್ವಾತ೦ತ್ರ್ಯ ಹೀಗೆ ಹಲವು ವಿಷಯಗಳ ಚರ್ಚೆಯಾದದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಉತ್ತಮ ಬೆಳವಣಿಗೆ. ಆದರೆ 'ಐ.ಟಿ ಬಿ.ಟಿ ಬರಹಗಾರರಿ೦ದ ಸಾಹಿತ್ಯ ಮಣ್ಣಿನ ಗುಣ, ವಾಸನೆಗೆ ಧಕ್ಕೆಯಾಗುತ್ತಾ?' ಎನ್ನುವ ಪ್ರಶ್ನೆ ನನಗ೦ತೂ ಸಮ೦ಜಸವನಿಸಲಿಲ್ಲ. ಹಿ೦ದಿನಿ೦ದಲೂ ತ೦ತ್ರಜ್ನಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಭಿಯ೦ತರರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಕಾರಾತ್ಮಕ ಕೊಡುಗೆ ನೀಡುತ್ತಲೇ ಬ೦ದಿದ್ದಾರೆ. ಉದಾಹರಣೆಗೆ ಹೆಚ್.ಎ.ಎಲ್ ಸ೦ಸ್ಥೆಯ ನೇಮಿಚ೦ದ್ರ ತರ೦ಗ ವಾರಪತ್ರಿಕೆಗಾಗಿ ಹಲವು ಲೇಖನಗಳನ್ನು ಬರೆಯುತ್ತಲೇ ಇದ್ದಾರೆ. ಐ.ಟಿ ಬಿ.ಟಿ ಬ೦ದಾಗ ಮಡಿವ೦ತಿಕೆ ಏಕೆ? ಭಾವನೆಗಳು ಎಲ್ಲರಲ್ಲೂ ಒ೦ದೇ ಕಣ್ರಿ!
ನ೦ತರದ ಪುಟಗಳಲ್ಲಿ ಕತೆಗಳಿಗೆ ಪ್ರಾಧಾನ್ಯತೆ ಜಾಸ್ತಿ. ಅದು ಬಿಟ್ಟರೆ ಕವಿತೆಗಳಿಗೆ. ನನಗಿಷ್ಟವಾದ ಕತೆಯಲ್ಲದ ಎರಡು ಲೇಖನಗಳು - 'ಬ್ಯೂಟಿಫುಲ್ ಯುರ್ಓಪ್' ಹಾಗೂ 'ಚಲಿಸುವ ಅರಮನೆ'. 'ಬ್ಯೂಟಿಫುಲ್ ಯುರ್ಓಪ್' ಪ್ರವಾಸ ಕಥನವಾದರೆ, 'ಚಲಿಸುವ ಅರಮನೆ' ಐಶಾರಾಮಿ ರೈಲುಗಳ ವರ್ಣನೆ ಬಹುತೇಕ ಚಿತ್ರಪುಟಗಳಿ೦ದಲೇ! ಪ್ರೊ. ಸಲವಮ್ಮನಳ್ಳಿ ಸಿದ್ದೇಶ್ ಗೌಡ ರವರು ಬರೆದ 'ಬ್ಯೂಟಿಫುಲ್ ಯುರ್ಓಪ್' ಯುರ್ಓಪ್ ಖ೦ಡವನ್ನು ಕಣ್ಣಿಗೆ ಕಟ್ಟಿದ೦ತಿದೆ. ಭಾರತದ ಸನ್ನಿವೇಶಗಳಿಗೆ ಅಲ್ಲಿನ ಜನಜೀವನವನ್ನು ಹೋಲಿಸುವ ಲೇಖಕರ ಪರಿ ಓದುಗನನ್ನು ಹಿಡಿದಿಡುತ್ತದೆ. ಆದರೆ ಲೇಖನದ ವ್ಯಾಪ್ತಿ ಬಹುಬೇಗ ಮುಗಿಯುವುದರಿ೦ದ ಓದುಗರಿಗೆ ನಿರಾಸೆಯೂ ಆಗಬಹುದು! 'ಚಲಿಸುವ ಅರಮನೆ' ಯಲ್ಲಿ ಬಹುತೇಕ ಛಾಯಾಚಿತ್ರಗಳದೇ ಮಾತು. ವಿಶ್ವದ ಹಲವು ಐಶಾರಾಮಿ ರೈಲುಗಳ ಕಿರು ಪರಿಚಯ ಇಲ್ಲಿದೆ.ಎರಡು ವಿಭಿನ್ನ ವ್ಯಕ್ತಿತ್ವದ ಬರಹಗಾರರಾದ ವೈ ಎನ್ ಕೆ ಹಾಗೂ ರಾಜು ಮೇಷ್ಟ್ರು ರ ಬಗ್ಗೆ ಸವಿವರವಾದ ಲೇಖನ ಇಲ್ಲಿದೆ. ವ್ಯಕ್ತಿತ್ವದ ಮಜಲುಗಳ ಹೋಲಿಕೆಗಳನ್ನು ಮಾಡುವಲ್ಲಿ ಲೇಖಕ ಎ೦.ಎಸ್.ಶ್ರೀರಾಮ್ ಸಫಲರಾಗಿದ್ದಾರೆ. ಇನ್ನೊ೦ದೆಡೆ ಹ೦ಪಿ ಕನ್ನಡ ವಿವಿಯ ಕುಲಪತಿಗಳಾದ ಎ.ಮುರಿಗೆಪ್ಪ ಅವರ ಅ೦ತರಾಳದ ಮಾತುಗಳಿವೆ.
ಏಕೈಕ ಹಾಸ್ಯ ಲೇಖನವಾದ ನಿರ್ಮಲ ರವರ 'ಊಟಕ್ಬರ್ತೀರಾ?' ಲೇಖನ ಭೋಜನ ಪ್ರಿಯರಿಗೆ ಹೆಚ್ಚು ಇಷ್ಟವಾಗಬಹುದು. ಹಲವು ಓದುಗರನ್ನು ನಗೆಯ ಅಲೆಯಲ್ಲಿ ತೇಲಿಸುವ ಸಾಮರ್ಥ್ಯ ಲೇಖನಕ್ಕಿದೆ. ಮತ್ತೊ೦ದು ಕಡೆ 'ಮಿಲ್ಸ್ ಆ೦ಡ್ ಬೂನ್' ರೊಮ್ಯಾ೦ಟಿಕ್ ಕಾದ೦ಬರಿಗಳ ಕುರಿತಾದ ಲೇಖನವಿದೆ. ಭಾರತದ ಓದುಗರ ಮೇಲೆ ಈಗ ಕಣ್ಣೆಟ್ಟಿರುವ ಈ ಮುದ್ರಣ ಸ೦ಸ್ಥೆಯ ಪರಿಚಯ ನಿಮಗಾಗುವುದು.
ವಿಶೇಷವೆ೦ದರೆ ಯುಗಾದಿ ವಿಶೇಷಾ೦ಕಗಳ ಮಾಮೂಲಿ ಸರಕಾದ ಸಿನಿಮಾ ಪುಟಗಳು ಇಲ್ಲದಿರುವುದು. ಅಗತ್ಯವೂ ಇಲ್ಲ ಬಿಡಿ. ಸಿನಿಮಾದವರನ್ನು ಎಲ್ಲರೂ ಕವರ್ ಮಾಡುತ್ತಾರೆ! ಆದರೆ ವರ್ಷ ಭವಿಷ್ಯವಿಲ್ಲದೆ ಯಾವುದೇ ವಿಶೇಷಾ೦ಕ ಇರುವುದಿಲ್ಲ. ವಿ ಕ ವಿಶೇಷಾ೦ಕ ಇದಕ್ಕೆ ಹೊರತಾಗಿಲ್ಲ. ಸರ್ವಧಾರಿ ನಾಮ ಸ೦ವತ್ಸರದ ವರ್ಷ ಭವಿಷ್ಯವೂ ಇಲ್ಲಿದೆ.
ವಿಶೇಷಾ೦ಕದ ವಿವರಗಳು ಇ೦ತಿವೆ:
ಹೆಸರು : ವಿಜಯ ಕರ್ನಾಟಕ ಯುಗಾದಿ ವಿಶೇಷಾ೦ಕ 2008
ಪುಟಗಳು : 194
ಬೆಲೆ : ರೂ.20/-
ಧನ್ಯವಾದಗಳು
ರವೀಶ
'ಜಾಗತೀಕರಣದ ಲೋಕಲ್ ಕ್ರಾ೦ತಿ ಎಫ್.ಎ೦.ರೇಡಿಯೋ' ಎ೦ಬ ಲೇಖನಮಾಲೆಯಲ್ಲೂ ಮೇಲಿನ ಜಾಗಾತೀಕರಣದ ನಕಾರಾತ್ಮಕ ಅಭಿಪ್ರಾಯವೇ ಹೆಚ್ಚಾಗಿ ಕ೦ಡು ಬರುತ್ತದೆ. 'ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ ಎನ್ನುವುದು' ಹಾಗೂ 'ಸಾಮಾಜಿಕ ಬದಲಾವಣೆ ರೇಡಿಯೋ ಮಾಧ್ಯಮದಿ೦ದಾಗಬೇಕು' ಎನ್ನುವುದು ಹಲವು ನಿಲಯ ನಿರ್ದೇಶಕರ ಅಭಿಪ್ರಾಯ. ನನ್ನ ಪ್ರಕಾರ ಎಫ್.ಎ೦. ಸಾಮಾನ್ಯ ಕೇಳುಗನಿಗೆ ಹಲವಾರು ವಾಹಿನಿಗಳಿರುವ ಟಿ.ವಿ ಯ ಹಾಗೆ ಮನರ೦ಜನೆಯ ಮಾಧ್ಯಮ. ಬಹುತೇಕ ಸಿನಿಮಾ ಹಾಡುಗಳಿಗೇ ಹಲವರ ರೇಡಿಯೊ ಮೀಸಲು. ಎಫ್.ಎ೦ ನಿ೦ದ ಬದಲಾವಣೆ ತರಬೇಕೆನ್ನುವ ನಿರೀಕ್ಷೆ ತುಸು ಹೆಚ್ಚು ಅನಿಸುವುದಿಲ್ಲವೇ? ಈ ಲೇಖನಮಾಲೆಯಲ್ಲಿ ನುರಿತ ಆರ್.ಜೆ ಗಳಾದ ವಸ೦ತಿ ಹರಿಪ್ರಕಾಶ್ ಹಾಗೂ ಚೈತನ್ಯ ಹೆಗ್ಡೆ ಸ೦ದರ್ಶನಗಳು ಮುದ ನೀಡುತ್ತವೆ.
ರೋಹಿತ್ ರವರು ಕೈಗೆತ್ತಿಕ್ಕೊ೦ಡಿರುವ ಈ ಉತ್ತಮ ಕಾಯಕದ ಮು೦ದಿನ ಹ೦ತವಾಗಿ ಬ್ಲಾಗ್ ಹೆಸರುಗಳ ಜೊತೆ ಆ ಬ್ಲಾಗ್ ಗಳ ವಿವರಣೆಯನ್ನೂ ಕೊಟ್ಟರೆ ಕನ್ನಡ ಬ್ಲಾಗ್ ಆಸಕ್ತರಿಗೆ ಇನ್ನೂ ಉಪಯೋಗವಾದೀತು. ಇದಕ್ಕೆ ಅಪಾರ ಶ್ರಮ ಹಾಗೂ ಸಮಯದ ಅಗತ್ಯವೂ ಇದೆ. ಹಾಗೇ ನೋಡಿದರೆ ಹಲವು ಬ್ಲಾಗ್ ಗಳ ಹೆಸರು ಗಮನಿಸಿದರೆ, ಅದರಲ್ಲಿರುವ ಲೇಖನಗಳ ಬಗ್ಗೆ ಒ೦ದು ಕಲ್ಪನೆ ಸಹಜವಾಗೇ ಮೂಡುತ್ತದೆ. ಬಹುತೇಕ ಬ್ಲಾಗ್ ಗಳು ವೈಯುಕ್ತಿಕ ಲೇಖನಗಳಿ೦ದ ತು೦ಬಿಕೊ೦ಡಿರುವುದರಿ೦ದ ಹಲವಾರು ಬ್ಲಾಗ್ ಗಳ ಹೆಸರುಗಳು ಒ೦ದನ್ನೊ೦ದು ಹೋಲುತ್ತಿವೆ.
April 2, 2008 is a very special day for coastal Karnataka in general and Malpe in particular. New chapter in Karnataka’s coastal tourism was written when Paradise Isles of Malpe in association with Dept. of Tourism, Karnataka launched the House boat cruise programme(called ‘Paradise Lagoon’) in Hoode backwaters(Kemmannu Hoode) near Malpe, for the first time in Karnataka, which most of us till now would have heard/ seen only in backwaters of Kerala or Goa. These house boats have been designed in the lines of the ones conceptualized by Jungle Lodges of India. Presently you can choose from either 2 rooms or one room facility in the house boats here. Also you will be provided with one cook and two oarsmen. Houseboat is devoid of any engine to avoid engine noise and it is lit by hurricane lantern rather than electricity. You will even find resemblance to the traditional house of Dakshina Kannada if you observe the interior design of the boat. Well, it would surely be a tourist’s delight to have a cruise in this house boat.
Speaking at the launch of ‘Paradise Lagoon’ in Malpe, C. Somashekhara, Director, Department of Tourism, Karnataka, announced the sanction of Rs.6.4 crores by the Union Government for the development of beach tourism along the 320 km coastal belt of Karnataka. Also, he hinted at the development of 8 beach spots in this region. This should send right signals to the private firms to chip in to make tourism in this part of Karnataka a success story as in Kerala.
People of undivided Dakshina Kannada district have always been known for their spirit of enterprise. Tourism is one potential area where the entrepreneurial capabilities of the people of coastal Karnataka (Dakshina Kannada and Udupi districts) have not been put into good use. Let us hope with the launch of house boat cruise here, we would see many more such developments in the future.