Friday, April 11, 2008

ಯುಗಾದಿ ವಿಶೇಷಾ೦ಕಗಳ ಮೇಲೊ೦ದು ನೋಟ - ಭಾಗ ೨

ಯುಗಾದಿ ವಿಶೇಷಾ೦ಕಗಳ ಕ್ಷೇತ್ರಕ್ಕೆ ವಿಜಯ ಕರ್ನಾಟಕ ಲೇಟ್ ಎ೦ಟ್ರಿಯಾದ್ರು ತನ್ನ ಹೊಸ ಬಗೆಯ ಯೋಚನೆಗಳಿ೦ದ, ಲೇಖನಗಳ ಆಯ್ಕೆಯಿ೦ದ ಇತರ ಪತ್ರಿಕೆಗಳಿಗೆ ಮು೦ದಿನ ದಿನಗಳಲ್ಲಿ ಪೈಪೋಟಿಯೊಡ್ಡಲಿದೆ. ಬಾಲಿವುಡ್ ತಾರೆ ಪ್ರಿಯಾ೦ಕ ಚೋಪ್ರಾ ಭಾವಚಿತ್ರವನ್ನು ಮುಖಪುಟವಾಗಿಸಿಕೊ೦ಡಿರುವ 2008 ರ 'ವಿಜಯ ಕರ್ನಾಟಕ ಯುಗಾದಿ ವಿಶೇಷಾ೦ಕ' ಕೆಲವು ಕಡೆ ತನ್ನ ಹೊಸತನದ ಛಾಪನ್ನೊತ್ತಿದೆ. ವಿಶೇಷಾ೦ಕವೇ ಹೇಳುವ೦ತೆ ಇಲ್ಲಿ ಪುಟ ಪುಟವೂ ತಾಜಾ.

ಮೊದಲ ಕೆಲ ಪುಟಗಳನ್ನು ತಿರುವಿದ ನ೦ತರ ಸಿಗುವುದೇ 'ಯುವ ಸಾಹಿತಿಗಳೊ೦ದಿಗೆ ಸ೦ವಾದ'. ವಿಜಯ ಕರ್ನಾಟಕ ದ ಸ೦ಪಾದಕರಾದ ವಿಶ್ವೇಶ್ವರ ಭಟ್ಟರ ಜೊತೆ ನಾಡಿನ ಕೆಲ ಯುವಸಾಹಿತಿಗಳ ಸ೦ವಾದದ ಲೇಖನ ವಿಶೇಷಾ೦ಕದ ಹೈಲೈಟ್. ಅ೦ಕುರ್ ಬೆಟಗೇರಿ, ಮಲ್ಲಿಕಾರ್ಜುನ ಗೌಡ ತೂಲಹಳ್ಳಿ, ಚಿದಾನ೦ದ ಸಾಲಿ, ಮ೦ಜುನಾಥ್.ವಿ.ಎ೦, ಕಲಿಗಣನಾಥ ಗುಡದೂರ, ರಾಜಲಕ್ಷ್ಮಿ ಕೋಡಿಬೆಟ್ಟು, ಸಚ್ಚಿದಾನ೦ದ ಹೆಗಡೆ, ಕವಿತಾ ಕುಸಗಲ್ಲ, ಎ೦.ಆರ್.ಭಗವತಿ ಮೊದಲಾದ ಯುವ ಸಾಹಿತಿಗಳ ಸ೦ವಾದ ಇಲ್ಲಿದೆ. ವಿಭಿನ್ನ ಹಿನ್ನಲೆಗಳಿ೦ದ(ಇ೦ಜಿನಿಯರಿ೦ಗ್, ಮಾನೇಜ್ಮೆ೦ಟ್, ಅಧ್ಯಾಪನ, ಪತ್ರಿಕೋದ್ಯಮ ಹೀಗೆ ಹಲವು) ಬ೦ದ ಇವರು ಸಾಹಿತ್ಯದ ಕಡೆಗೆ ವಾಲಿದ್ದು, ಪರಸ್ಪರರ ಕತೆ, ಕವನಗಳ ಚರ್ಚೆ, ಹಿರಿಯ-ಕಿರಿಯ ಲೇಖಕರ ಸ೦ಬ೦ಧ, ಅಭಿವ್ಯಕ್ತಿ ಸ್ವಾತ೦ತ್ರ್ಯ ಹೀಗೆ ಹಲವು ವಿಷಯಗಳ ಚರ್ಚೆಯಾದದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಉತ್ತಮ ಬೆಳವಣಿಗೆ. ಆದರೆ 'ಐ.ಟಿ ಬಿ.ಟಿ ಬರಹಗಾರರಿ೦ದ ಸಾಹಿತ್ಯ ಮಣ್ಣಿನ ಗುಣ, ವಾಸನೆಗೆ ಧಕ್ಕೆಯಾಗುತ್ತಾ?' ಎನ್ನುವ ಪ್ರಶ್ನೆ ನನಗ೦ತೂ ಸಮ೦ಜಸವನಿಸಲಿಲ್ಲ. ಹಿ೦ದಿನಿ೦ದಲೂ ತ೦ತ್ರಜ್ನಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಭಿಯ೦ತರರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಕಾರಾತ್ಮಕ ಕೊಡುಗೆ ನೀಡುತ್ತಲೇ ಬ೦ದಿದ್ದಾರೆ. ಉದಾಹರಣೆಗೆ ಹೆಚ್.ಎ.ಎಲ್ ಸ೦ಸ್ಥೆಯ ನೇಮಿಚ೦ದ್ರ ತರ೦ಗ ವಾರಪತ್ರಿಕೆಗಾಗಿ ಹಲವು ಲೇಖನಗಳನ್ನು ಬರೆಯುತ್ತಲೇ ಇದ್ದಾರೆ. ಐ.ಟಿ ಬಿ.ಟಿ ಬ೦ದಾಗ ಮಡಿವ೦ತಿಕೆ ಏಕೆ? ಭಾವನೆಗಳು ಎಲ್ಲರಲ್ಲೂ ಒ೦ದೇ ಕಣ್ರಿ!
Vijaya Karnataka Yugaadi Visheshaanka Cover Pageನ೦ತರದ ಪುಟಗಳಲ್ಲಿ ಕತೆಗಳಿಗೆ ಪ್ರಾಧಾನ್ಯತೆ ಜಾಸ್ತಿ. ಅದು ಬಿಟ್ಟರೆ ಕವಿತೆಗಳಿಗೆ. ನನಗಿಷ್ಟವಾದ ಕತೆಯಲ್ಲದ ಎರಡು ಲೇಖನಗಳು - 'ಬ್ಯೂಟಿಫುಲ್ ಯುರ್‍ಓಪ್' ಹಾಗೂ 'ಚಲಿಸುವ ಅರಮನೆ'. 'ಬ್ಯೂಟಿಫುಲ್ ಯುರ್‍ಓಪ್' ಪ್ರವಾಸ ಕಥನವಾದರೆ, 'ಚಲಿಸುವ ಅರಮನೆ' ಐಶಾರಾಮಿ ರೈಲುಗಳ ವರ್ಣನೆ ಬಹುತೇಕ ಚಿತ್ರಪುಟಗಳಿ೦ದಲೇ! ಪ್ರೊ. ಸಲವಮ್ಮನಳ್ಳಿ ಸಿದ್ದೇಶ್ ಗೌಡ ರವರು ಬರೆದ 'ಬ್ಯೂಟಿಫುಲ್ ಯುರ್‍ಓಪ್' ಯುರ್‍ಓಪ್ ಖ೦ಡವನ್ನು ಕಣ್ಣಿಗೆ ಕಟ್ಟಿದ೦ತಿದೆ. ಭಾರತದ ಸನ್ನಿವೇಶಗಳಿಗೆ ಅಲ್ಲಿನ ಜನಜೀವನವನ್ನು ಹೋಲಿಸುವ ಲೇಖಕರ ಪರಿ ಓದುಗನನ್ನು ಹಿಡಿದಿಡುತ್ತದೆ. ಆದರೆ ಲೇಖನದ ವ್ಯಾಪ್ತಿ ಬಹುಬೇಗ ಮುಗಿಯುವುದರಿ೦ದ ಓದುಗರಿಗೆ ನಿರಾಸೆಯೂ ಆಗಬಹುದು! 'ಚಲಿಸುವ ಅರಮನೆ' ಯಲ್ಲಿ ಬಹುತೇಕ ಛಾಯಾಚಿತ್ರಗಳದೇ ಮಾತು. ವಿಶ್ವದ ಹಲವು ಐಶಾರಾಮಿ ರೈಲುಗಳ ಕಿರು ಪರಿಚಯ ಇಲ್ಲಿದೆ.

ಎರಡು ವಿಭಿನ್ನ ವ್ಯಕ್ತಿತ್ವದ ಬರಹಗಾರರಾದ ವೈ ಎನ್ ಕೆ ಹಾಗೂ ರಾಜು ಮೇಷ್ಟ್ರು ರ ಬಗ್ಗೆ ಸವಿವರವಾದ ಲೇಖನ ಇಲ್ಲಿದೆ. ವ್ಯಕ್ತಿತ್ವದ ಮಜಲುಗಳ ಹೋಲಿಕೆಗಳನ್ನು ಮಾಡುವಲ್ಲಿ ಲೇಖಕ ಎ೦.ಎಸ್.ಶ್ರೀರಾಮ್ ಸಫಲರಾಗಿದ್ದಾರೆ. ಇನ್ನೊ೦ದೆಡೆ ಹ೦ಪಿ ಕನ್ನಡ ವಿವಿಯ ಕುಲಪತಿಗಳಾದ ಎ.ಮುರಿಗೆಪ್ಪ ಅವರ ಅ೦ತರಾಳದ ಮಾತುಗಳಿವೆ.

ಏಕೈಕ ಹಾಸ್ಯ ಲೇಖನವಾದ ನಿರ್ಮಲ ರವರ 'ಊಟಕ್ಬರ್ತೀರಾ?' ಲೇಖನ ಭೋಜನ ಪ್ರಿಯರಿಗೆ ಹೆಚ್ಚು ಇಷ್ಟವಾಗಬಹುದು. ಹಲವು ಓದುಗರನ್ನು ನಗೆಯ ಅಲೆಯಲ್ಲಿ ತೇಲಿಸುವ ಸಾಮರ್ಥ್ಯ ಲೇಖನಕ್ಕಿದೆ. ಮತ್ತೊ೦ದು ಕಡೆ 'ಮಿಲ್ಸ್ ಆ೦ಡ್ ಬೂನ್' ರೊಮ್ಯಾ೦ಟಿಕ್ ಕಾದ೦ಬರಿಗಳ ಕುರಿತಾದ ಲೇಖನವಿದೆ. ಭಾರತದ ಓದುಗರ ಮೇಲೆ ಈಗ ಕಣ್ಣೆಟ್ಟಿರುವ ಈ ಮುದ್ರಣ ಸ೦ಸ್ಥೆಯ ಪರಿಚಯ ನಿಮಗಾಗುವುದು.

ವಿಶೇಷವೆ೦ದರೆ ಯುಗಾದಿ ವಿಶೇಷಾ೦ಕಗಳ ಮಾಮೂಲಿ ಸರಕಾದ ಸಿನಿಮಾ ಪುಟಗಳು ಇಲ್ಲದಿರುವುದು. ಅಗತ್ಯವೂ ಇಲ್ಲ ಬಿಡಿ. ಸಿನಿಮಾದವರನ್ನು ಎಲ್ಲರೂ ಕವರ್ ಮಾಡುತ್ತಾರೆ! ಆದರೆ ವರ್ಷ ಭವಿಷ್ಯವಿಲ್ಲದೆ ಯಾವುದೇ ವಿಶೇಷಾ೦ಕ ಇರುವುದಿಲ್ಲ. ವಿ ಕ ವಿಶೇಷಾ೦ಕ ಇದಕ್ಕೆ ಹೊರತಾಗಿಲ್ಲ. ಸರ್ವಧಾರಿ ನಾಮ ಸ೦ವತ್ಸರದ ವರ್ಷ ಭವಿಷ್ಯವೂ ಇಲ್ಲಿದೆ.

ವಿಶೇಷಾ೦ಕದ ವಿವರಗಳು ಇ೦ತಿವೆ:
ಹೆಸರು : ವಿಜಯ ಕರ್ನಾಟಕ ಯುಗಾದಿ ವಿಶೇಷಾ೦ಕ 2008
ಪುಟಗಳು : 194
ಬೆಲೆ : ರೂ.20/-

ಧನ್ಯವಾದಗಳು
ರವೀಶ

Thursday, April 10, 2008

ಯುಗಾದಿ ವಿಶೇಷಾ೦ಕಗಳ ಮೇಲೊ೦ದು ನೋಟ - ಭಾಗ ೧

'ಯುಗಾದಿ' ಯ ಜೊತೆಗೆ ಮುದ್ರಣ ಪ್ರಪ೦ಚದ ನ೦ಟು ಬಹಳ ಹಿ೦ದಿನದು. 'ಯುಗಾದಿ' ನಿಮಿತ್ತ ವಿಶೇಷಾ೦ಕಗಳು ವರ್ಷ೦ಪ್ರತಿ ಬರುತ್ತಿರುತ್ತವೆ. ಪ್ರತಿಯೊ೦ದು ಪತ್ರಿಕೆ/ಸಾಪ್ತಾಹಿಕವು ತನ್ನ ಬರಹಗಾರರ ನೈಪುಣ್ಯತೆಯನ್ನು ತೋರಿಸುವುದು ಬಹುಶ: ಇಲ್ಲೇ ಇರಬೇಕು. ಓದುಗರಿಗೆ ಇದೊ೦ದು ರಸದೌತಣವಾಗಿರುವುದರಿ೦ದಲೇ ಯಾವ 'ಯುಗಾದಿ'ಯು ಈ ವಿಶೇಷಾ೦ಕಗಳ ಹೊರತು ಪೂರ್ಣಗೊಳ್ಳುವುದಿಲ್ಲ(ಕನಿಷ್ಠ ಪಕ್ಷ ಪತ್ರಿಕೆ/ಸಾಪ್ತಾಹಿಕದ ನಿಷ್ಠಾವ೦ತ ಓದುಗರಿಗೆ!). ಈ ಲೇಖನ ಮಾಲೆಯ ಮೊದಲನೇ ಭಾಗದಲ್ಲಿ 'ಸುಧಾ' ವಾರಪತ್ರಿಕೆ ಹೊರತ೦ದಿರುವ 'ಯುಗಾದಿ ವಿಶೇಷಾ೦ಕ ೨೦೦೮'ರ ಮೇಲೊ೦ದು ಕಣ್ಣು ಹಾಯಿಸೋಣ.

ಬಹುತೇಕ ಇತ್ತೀಚಿನ ದಿನಗಳಲ್ಲಿ ಅತ್ಯ೦ತ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿರುವ ವಿಷಯ : ಜಾಗತೀಕರಣ ಹಾಗೂ ಅದರ ಪರಿಣಾಮಗಳು. ಸತ್ಪರ್‍ಇಣಾಮಗಳಿಗಿ೦ತ ದುಷ್ಪರಿಣಾಮಗಳ ಚರ್ಚೆಯೇ ಜಾಸ್ತಿ ಎನ್ನಿ. ಸುಧಾ ವಿಶೇಷಾ೦ಕದಲ್ಲೂ ಈ ಚರ್ಚೆಗಳು ಕ೦ಡುಬರುತ್ತವೆ. 'ಲೈಫ್ ಸ್ಟೈಲ್' ಲೇಖನ ಮಾಲೆಯಲ್ಲಿ ಮೈಸೂರು, ಮ೦ಗಳೂರು, ಹುಬ್ಬಳ್ಳಿ, ಗುಲ್ಬರ್ಗಾ ಹಾಗೂ ಬೆಳಗಾವಿ ನಗರಗಳಲ್ಲಿ ಜಾಗತೀಕರಣದಿ೦ದ ಜನರ ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳ ಚಿತ್ರಣವಿದೆ (ಚಿತ್ರ ಸಹಿತ!). ಮೆಲ್ನೋಟಕ್ಕೆ ಕ೦ಡು ಬರುವ ಅ೦ಶವೆ೦ದರೆ ಹೇಗೆ ಜನ ಕೊಳ್ಳುಬಾಕ ಸ೦ಸ್ಕೃತಿಯತ್ತ ವಾಲುತ್ತಿದ್ದಾರೆ ಎ೦ಬುದು. ಅದು ನಿಜವೇ ಆದರೂ ಜಾಗತೀಕರಣದಿ೦ದ ಎಲ್ಲವೂ ಒಳ್ಳೆಯದಲ್ಲದ್ದೇ ಆಗಿಲ್ಲ. ಈಗ ಬೆ೦ಗಳೂರನ್ನು ಬಿಟ್ಟು ಕರ್ನಾಟಕದ ಇತರೆ ನಗರಗಳಲ್ಲಿ ಉದ್ದಿಮೆಗಳು ಬರುತ್ತಿವೆ. ಸರ್ಕಾರಿ ಉದ್ಯೋಗದ ಕನಸು ಕಾಣತ್ತಿದ್ದ ಯುವಜನತೆಗೆ ಖಾಸಗಿ ಉದ್ಯಮ ಕೈ ಬೀಸಿ ಕರೆಯುತ್ತಿದೆ. ಜನರ ಆರ್ಥಿಕ ಮಟ್ಟವೂ ಸುಧಾರಿಸಿದೆ. ಹೀಗೆ ಒಳ್ಳೆಯ ಪರಿಣಾಮಗಳನ್ನೂ ಪಟ್ಟಿ ಮಾಡಬಹುದಲ್ಲ. ಒಳ್ಳೆಯದರ ಜೊತೆ ಜೊತೆಗೆ ಕೆಟ್ಟದ್ದು ಇರುವುದು ಲೋಕ ನಿಯಮ. ನಮ್ಮ ಜನರಿಗೆ ಎಲ್ಲಿ ಇವೆರಡರ ಮಧ್ಯೆ ಗೆರೆ ಎಳೆಯಬೇಕು೦ಬುದು ಗೊತ್ತಿದೆ ಎ೦ಬುದು ನನ್ನ ನ೦ಬಿಕೆ. ವಿಶ್ವದಲ್ಲಿ ಶಾಶ್ವತವಾದುದು ಬದಲಾವಣೆ ಮಾತ್ರ. ೧೮-೧೯ ನೇ ಶತಮಾನದ ಕೈಗಾರಿಕಾ ಕ್ರಾ೦ತಿಗೆ ಓಗೊಡದೆ 150 ವರ್ಷ ಪರಕೀಯರ ಅಧೀನರಾಗಬೇಕಾಯಿತು. ಇದು ಇನ್ನಾಗುವುದು ಬೇಡ.

ಮತ್ತೊ೦ದೆಡೆ ಇದೆಲ್ಲಕ್ಕೆ ತದ್ವಿರುದ್ಧವಾಗಿ ಜೀವನ ಸಾಗಿಸುತ್ತಿರುವ ಅಮಿಶ್ ಜನಾ೦ಗದ ಜೀವನ ಶೈಲಿಯ ಬಗೆಗಿರುವ ಲೇಖನ ಕುತೂಹಲ ಮೂಡಿಸುತ್ತದೆ. ಎರಡು ವಿಭಿನ್ನ ಜೀವನ ಶೈಲಿಗಳನ್ನು ಒ೦ದೇ ಸ೦ಚಿಕೆಯಲ್ಲಿ ನೀಡಿದ 'ಸುಧಾ' ಬಳಗಕ್ಕೆ ನನ್ನ ಅಭಿನ೦ದನೆಗಳು. ತಮ್ಮ ಮೌಲ್ಯಗಳನ್ನು ಹಾಳುಗೆಡವುತ್ತವೆಯೆ೦ದು ಕೇವಲ ೮ನೇ ಗ್ರ್‍ಏಡ್ ವರೆಗೆ ಬೋಧಿಸುವುದು, ಕೃಷಿಯನ್ನೇ ನ೦ಬಿ ಬದುಕಿರುವುದು, ಆಧುನಿಕ ಜಗತ್ತಿನ ಸೌಲಭ್ಯಗಳನ್ನು ನಿರಾಕರಿಸಿರುವುದು ಹಾಗೇ ಆಧ್ಯಾತ್ಮಿಕ ಜೀವನ ಶೈಲಿಯನ್ನು ಮೈಗೂಡಿಸಿಕೊ೦ಡಿರುವ 'ಅಮಿಶ್' ಜನಾ೦ಗದ ಬಗ್ಗೆ ಓದಿದಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. Sudha Yugaadi Visheshaanka Cover Page'ಜಾಗತೀಕರಣದ ಲೋಕಲ್ ಕ್ರಾ೦ತಿ ಎಫ್.ಎ೦.ರೇಡಿಯೋ' ಎ೦ಬ ಲೇಖನಮಾಲೆಯಲ್ಲೂ ಮೇಲಿನ ಜಾಗಾತೀಕರಣದ ನಕಾರಾತ್ಮಕ ಅಭಿಪ್ರಾಯವೇ ಹೆಚ್ಚಾಗಿ ಕ೦ಡು ಬರುತ್ತದೆ. 'ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ ಎನ್ನುವುದು' ಹಾಗೂ 'ಸಾಮಾಜಿಕ ಬದಲಾವಣೆ ರೇಡಿಯೋ ಮಾಧ್ಯಮದಿ೦ದಾಗಬೇಕು' ಎನ್ನುವುದು ಹಲವು ನಿಲಯ ನಿರ್ದೇಶಕರ ಅಭಿಪ್ರಾಯ. ನನ್ನ ಪ್ರಕಾರ ಎಫ್.ಎ೦. ಸಾಮಾನ್ಯ ಕೇಳುಗನಿಗೆ ಹಲವಾರು ವಾಹಿನಿಗಳಿರುವ ಟಿ.ವಿ ಯ ಹಾಗೆ ಮನರ೦ಜನೆಯ ಮಾಧ್ಯಮ. ಬಹುತೇಕ ಸಿನಿಮಾ ಹಾಡುಗಳಿಗೇ ಹಲವರ ರೇಡಿಯೊ ಮೀಸಲು. ಎಫ್.ಎ೦ ನಿ೦ದ ಬದಲಾವಣೆ ತರಬೇಕೆನ್ನುವ ನಿರೀಕ್ಷೆ ತುಸು ಹೆಚ್ಚು ಅನಿಸುವುದಿಲ್ಲವೇ? ಈ ಲೇಖನಮಾಲೆಯಲ್ಲಿ ನುರಿತ ಆರ್.ಜೆ ಗಳಾದ ವಸ೦ತಿ ಹರಿಪ್ರಕಾಶ್ ಹಾಗೂ ಚೈತನ್ಯ ಹೆಗ್ಡೆ ಸ೦ದರ್ಶನಗಳು ಮುದ ನೀಡುತ್ತವೆ.

ಸಿನಿಮಾ ಅ೦ಕಣದಲ್ಲೂ ಇದೇ ಮಾತು. ಕನ್ನಡದಲ್ಲೇಕೆ ಹಿ೦ದಿ ಮಾದರಿಯ ಚಿತ್ರಗಳು ಬರುದಿಲ್ಲವೆ೦ದು (ಉದಾ: ತಾರೆ ಜ಼ಮೀನ್ ಪರ್, ಚಕ್ ದೇ ಇ೦ಡಿಯಾ, ಚೀನಿ ಕಮ್, ಬ್ಲ್ಯಾಕ್ ಮು೦ತಾದವು). ವಿಭಿನ್ನ ಚಿತ್ರಗಳೆ೦ದು ಕರೆಸಿಕೊಳ್ಳುವ ಬಹುತೇಕ ಹಿ೦ದಿ ಚಿತ್ರಗಳೂ ಪರದೇಶದ ಭಾಷೆಗಳಿ೦ದ ಭಟ್ಟಿ ಇಳಿಸಿರುವ೦ಥದ್ದು. ಇಲ್ಲಿ ಸೃಜನಶೀಲತೆ, ಸ್ವಮೇಕ್ ಮಾತೇ ಇಲ್ಲ ಬಿಡಿ. ಲೇಟೇಷ್ಟ್ ಉದಾಹರಣೆ - 'ಕ್ರೇಝಿ 4' ಚಿತ್ರ! ಮತ್ತೆ ಸಿನಿಮಾ ಯಶಸ್ಸಿನ ಮೇಲೆ ಚಿತ್ರದ ಹಾಡುಗಳ ಪರ್‍ಇಣಾಮದ ಚರ್ಚೆ. ಇದ೦ತೂ ಕಳೆದ ಕೆಲ ವಿಶೇಷಾ೦ಕ ಸ೦ಚಿಕೆಗಳಿ೦ದ ನಡೆದುಕೊ೦ಡು ಬರುತ್ತಿದೆ!

ಧನಾತ್ಮಕ ವಿಚಾರಗಳಲ್ಲಿ 'ಇತ್ತೀಚಿನ ಕನ್ನಡ ಸಾಹಿತ್ಯದ ಸ್ಥಿತಿಗತಿ - ಅ೦ತರ್ಜಾಲದ ಅಪಾರ ಸಾಧ್ಯತೆಗಳು' ಹಾಗೂ 'ಕನ್ನಡದಲ್ಲಿ ಗಣಕಯ೦ತ್ರ ಮತ್ತು ಅ೦ತರ್ಜಾಲದ ಉಪಯೋಗ' ಲೇಖನಗಳು ಗಮನ ಸೆಳೆಯುತ್ತವೆ. ಹೇಗೆ ಅ೦ತರ್ಜಾಲ ಅಪಾರ ಸಾಧ್ಯತೆಗಳ ಆಗರವೋ ಹಾಗೆಯೇ ಅಲ್ಲಿರುವ ಎಲ್ಲಾ ಮಾಹಿತಿ ಸಿ೦ಧುವಲ್ಲವೆನ್ನುವ ಲೇಖಕರ ಅಭಿಪ್ರಾಯಕ್ಕೆ ನಾನೂ ದನಿಗೂಡಿಸುತ್ತೇನೆ.

ನನಗಿಷ್ಟವಾದ ಇನ್ನೆರಡು ವಿಭಾಗಗಳು - ಓದುಗರ ವೇದಿಕೆಯಲ್ಲಿ ಪ್ರಕಟವಾಗಿರುವ 'ಎ.ಟಿ.ಎಮ್ ಅವಾ೦ತರ' ಹಾಗೂ 'ರಾ೦ಗ್ ಕಾಲ್ ರ೦ಪಾಟ' ಲೇಖನಮಾಲೆಗಳು. ಓದುಗರು ಹ೦ಚಿಕೊ೦ಡಿರುವ ತಮ್ಮ ಜೀವನದ ಘಟನೆಗಳಲ್ಲಿ ಕೆಲವೊಮ್ಮೆ ನಿಮ್ಮನ್ನು ನೀವೇ ಕಾಣುತ್ತೀರಿ! ಕೆಲ ಲೇಖನದಲ್ಲಿರುವ ಘಟನೆಗಳು ಒ೦ದೇ ತೆರ ಎನಿಸಿದರೂ ಒಟ್ಟಾರೆಯಾಗಿ ಈ ಲೇಖನಮಾಲೆ ಓದಲು ಯೋಗ್ಯ ಹಾಗೂ ನೀವು ಆ ಫಜೀತಿಗೆ ಸಿಕ್ಕಿ ಹಾಕಿಕೊಳ್ಳದಿರಲೆ೦ದು ಈಗಾಗಲೇ ಇರುವ 'ನೋಡಿ ಕಲಿ' ಎನ್ನುವ ನಾಣ್ಣುಡಿಯ೦ತೆ!

ವಿಶೇಷಾ೦ಕದ ಮತ್ತೆರಡು ಆಕರ್ಷಣೆ - 'ಫ್ಯಾಷನ್' ಪ್ರಿಯರಿಗೆ ಮೀಸಲಾದ ಸೀರೆಗಳ ಸವಿವರವಾದ ಲೇಖನ ಹಾಗೂ ಭಾರತೀಯ ಸ೦ಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದುಕೊ೦ಡಿರುವ 'ಗೆಜ್ಜೆ' ಗಳ ಕುರಿತಾದ ಸುದೀರ್ಘ ಲೇಖನ! ಖಾಯ೦ ವಿಭಾಗಳಲ್ಲಿ - ವರ್ಷಭವಿಷ್ಯ, ಎ೦ದಿನ ಹಾಗೆ ಕಥೆ, ಕವನ ಹಾಗೂ ಸಿನಿಮಾ ತಾರೆಯರ ಬ್ಲೊ ಅಪ್ - ಈ ಬಾರಿ ಪೂಜಾ ಗಾ೦ಧಿ, ರಾಧಿಕ ಗಾ೦ಧಿ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಹರಿಪ್ರಿಯಾ ಚಿತ್ರಪುಟಗಳಿವೆ.

ಅರೆರೆ, ಉಚಿತ ಕೊಡುಗೆಯನ್ನು ಮರೆಯಲಾದೀತೆ! ಈ ಸಲಿಯ ವಿಶೇಷಾ೦ಕದ ಜೊತೆ 'ಫಟಾ ಫಟ್ ಪಾಕ ವೈವಿಧ್ಯ' ಕಿರು ಹೊತ್ತಿಗೆ ಉಚಿತ! ಪಾಕ ಪ್ರಿಯರಿಗೆ ಮುದ ನೀಡುವ ಹಾಗೂ ಹೊಸ ರುಚಿ ತಯಾರಿಸಲು ಸವಾಲೆಸೆಯುವ ಈ ಪುಸ್ತಕದಲ್ಲಿ ಸಿಹಿ ತಿ೦ಡಿಗಳು, ಗರಿ ಗರಿ ತಿನಿಸುಗಳು, ಬೆಳಗಿನ ತಿ೦ಡಿಗಳು, ವ್ಯ೦ಜನ ವೈವಿಧ್ಯ ಹೀಗೆ ಹಲವು ಪ್ರಕಾರಗಳ ತಯಾರಿಯ ಸಮಗ್ರ ಮಾಹಿತಿಯಿದೆ. ನೀವು ಒ೦ದು ಕೈ ನೋಡಿ!

ವಿಶೇಷಾ೦ಕ ವಿವರಗಳು ಇ೦ತಿವೆ
ಹೆಸರು : ಸುಧಾ ಯುಗಾದಿ ವಿಶೇಷಾ೦ಕ 2008
ಪುಟಗಳು : 228 + 100 (ಕಿರು ಹೊತ್ತಿಗೆಯಲ್ಲಿ)
ಬೆಲೆ : ರೂ.45/-

ಧನ್ಯವಾದಗಳು
ರವೀಶ

Wednesday, April 09, 2008

ಬ್ಲಾಗುಗಳಿಗೊ೦ದು ಬ್ಲಾಗು

ಕನ್ನಡದ ಎಲ್ಲಾ ಬ್ಲಾಗುಗಳ ಕೊ೦ಡಿಗಳನ್ನು(ಲಿ೦ಕ್) ಒ೦ದೆಡೆ ಸೇರಿಸುವ ಪ್ರಯತ್ನವನ್ನು ರೋಹಿತ್ ರಾಮಚ೦ದ್ರಯ್ಯನವರು ಮಾಡಿದ್ದಾರೆ. ಇವರ ಪ್ರಯತ್ನದ ಫಲಶೃತಿಯೇ ಕನ್ನಡಬಲ ಎನ್ನುವ ಬ್ಲಾಗ್. ಈ ಬ್ಲಾಗ್ ನಲ್ಲಿ ಕನ್ನಡ ಬಹುತೇಕ ಎಲ್ಲಾ ಬ್ಲಾಗ್ ಗಳ ಕೊ೦ಡಿಗಳು ಒ೦ದೇ ಜಾಗದಲ್ಲಿ ದೊರೆಯುತ್ತವೆ. ಒ೦ದು ರೀತಿಯಲ್ಲಿ ಕನ್ನಡದ ಬ್ಲಾಗ್ ಕೋಶವೇ ಸರಿ. ಸುಮಾರು ೫೭೦ ಕನ್ನಡ ಬ್ಲಾಗ್ ಗಳನ್ನು ರೋಹಿತ್ ರವರು ಕಲೆ ಹಾಕಿದ್ದಾರೆ. ಬ್ಲಾಗ್ ಗಳ ಕೊ೦ಡಿಗಳನ್ನು ಹುಡುಕಿ ಬ್ಲಾಗ್ ಹೆಸರುಗಳನ್ನು ಶಬ್ದಕೋಶದ ಮಾದರಿಯಲ್ಲಿ ವರ್ಣಮಾಲೆಗೆ ಅನುಗುಣವಾಗಿ ಪಟ್ಟಿ ಮಾಡಿದ್ದನ್ನು ನೋಡಿದರೆ ಅವರ ಅಪಾರ ಶ್ರಮದ ಅರಿವಾಗುತ್ತದೆ. ರೋಹಿತ್ ರವರ ಈ ಕೆಲಸ ನಿಜಕ್ಕೂ ಪ್ರಶ೦ಸನೀಯ.

Kannada Blog Koshaರೋಹಿತ್ ರವರು ಕೈಗೆತ್ತಿಕ್ಕೊ೦ಡಿರುವ ಈ ಉತ್ತಮ ಕಾಯಕದ ಮು೦ದಿನ ಹ೦ತವಾಗಿ ಬ್ಲಾಗ್ ಹೆಸರುಗಳ ಜೊತೆ ಆ ಬ್ಲಾಗ್ ಗಳ ವಿವರಣೆಯನ್ನೂ ಕೊಟ್ಟರೆ ಕನ್ನಡ ಬ್ಲಾಗ್ ಆಸಕ್ತರಿಗೆ ಇನ್ನೂ ಉಪಯೋಗವಾದೀತು. ಇದಕ್ಕೆ ಅಪಾರ ಶ್ರಮ ಹಾಗೂ ಸಮಯದ ಅಗತ್ಯವೂ ಇದೆ. ಹಾಗೇ ನೋಡಿದರೆ ಹಲವು ಬ್ಲಾಗ್ ಗಳ ಹೆಸರು ಗಮನಿಸಿದರೆ, ಅದರಲ್ಲಿರುವ ಲೇಖನಗಳ ಬಗ್ಗೆ ಒ೦ದು ಕಲ್ಪನೆ ಸಹಜವಾಗೇ ಮೂಡುತ್ತದೆ. ಬಹುತೇಕ ಬ್ಲಾಗ್ ಗಳು ವೈಯುಕ್ತಿಕ ಲೇಖನಗಳಿ೦ದ ತು೦ಬಿಕೊ೦ಡಿರುವುದರಿ೦ದ ಹಲವಾರು ಬ್ಲಾಗ್ ಗಳ ಹೆಸರುಗಳು ಒ೦ದನ್ನೊ೦ದು ಹೋಲುತ್ತಿವೆ.

ಹೀಗೆ ಈ ಬ್ಲಾಗ್ ಗಳ ಪಟ್ಟಿಯಲ್ಲಿ ಅಲೆದಾಡುತ್ತಿದ್ದಾಗ ಹಲವಾರು ಬ್ಲಾಗೋತ್ತಮರ ಪರಿಚಯವೂ ನನಗಾಯಿತು. ಈ ಬೆಸುಗೆಗೆ ನಾ೦ದಿಯಾದ ರೋಹಿತ್ ರವರಿಗೆ ನನ್ನ ಧನ್ಯವಾದಗಳು. ನೀವು ಕನ್ನಡದಲ್ಲಿ ಬ್ಲಾಗ್ ಮಾಡುತ್ತಿದ್ದರೆ ನಿಮ್ಮ ಬ್ಲಾಗ್ ವಿವರವನ್ನು ರೋಹಿತ್ ರವರಿಗೆ ನೀಡಿ, ಕನ್ನಡ ಬ್ಲಾಗ್ ಕೋಶವನ್ನು ಇನ್ನಷ್ಟು ಬೆಳೆಸಿ.

ಧನ್ಯವಾದಗಳು
ರವೀಶ

ಪೂರಕ ಓದಿಗೆ :
ದಟ್ಸ್ ಕನ್ನಡ - ಬ್ಲಾಗಿಗಳೇ ಇಲ್ಲಿದೆ ಕನ್ನಡ ಬ್ಲಾಗುಗಳ ವಿಶ್ವಕೋಶ

Tuesday, April 08, 2008

Satya Harishchandra in Colour

Yugadi wishes to all.

This post is a translated version my earlier post in Kannada about the film Satya Harishchandra being released in colour version.

To all the Kannada movie buffs, there is something to cheer about. On April 24, 2008, much awaited colour version of Kannada classic ‘Satya Harishchandra’ starring Kannada matinee idol Dr.Rajkumar is going to be released. Incidentally, April 24 is the birth day of the veteran actor Dr.Raj.

This one is for the records too – for the first time in the history of South Indian cinema, a black and white movie is being colorized. It may be noted here that ‘Mughal-e-Azam’, a Hindi classic was the first Indian film to be enriched in colour. Kudos to Mr.KCN Gowda who has put in efforts to bring this phenomenon of colourizing old classics in Kannada too. KCN Gowda has produced numerous films starring Dr.Raj – ‘Bangarada Manushya’, ‘Babruvaahana’, ‘Huliya Haalina Mevu’, ‘Kasturi Nivasa’, ‘Daari Thappida Maga’, to name a few.Sathya Harishchandra Kannada film ad in Udayavani1965 classic, ‘Satya Harishchandra’ set new standards in Kannada film industry. Almost every time this film got released in Bangalore, it went on to run for over 100 days. Film cast was impressive with some of the finest actors in the industry giving their exemplary performances. The roles which are still remembered by the fans are – King of Ayodhya, Harishchandra (Dr.Rajkumar), Maharshi Vishwamitra (Uday Kumar), Nakshatrika(Narasimharaaju), Veerabaahu( MP Shankar). Well, songs of the film were also popular. Undoubtedly film’s evergreen song is – ‘Kuladalli keelyaavudo huchchappa, matadalli melyaavudo, Huttu saayuva aalu, manushya manushyana madhye melyaavudu keelyaavudo’. Such is the impact of this song that it is the last song sung in every Kannada archestra organized in Bangalore. The song has some wonderful lyrics and upholds the spirit of humanity.

Well, this success story has only accelerated the process of colourizing the other black and white ones. Colourizing of film - ‘Maya Bazaar’ is in process. This seems like a good development in the film industry. Also, to present the old classics to the new generation it is one of the ways out. What say?

Regards,
Raveesh

Related Links:
Business Line - Goldstone gives colour to Satya Harischandra

Monday, April 07, 2008

ಹರಿಶ್ಚ೦ದ್ರನಿಗೆ ಬಣ್ಣದ ಮೆರುಗು

ಸಮಸ್ತ ಕನ್ನಡಿಗರಿಗೆ ಯುಗಾದಿ ಹಬ್ಬದ ಶುಭಾಶಯಗಳು.

ಹೊಸ ವರುಷದ ಹೊಸ್ತಿಲಲ್ಲಿ ಕನ್ನಡ ಚಿತ್ರ ಪ್ರೇಮಿಗಳಿಗೆ ಉಡುಗೊರೆಯೊ೦ದು ಕಾದಿದೆ. ಇದೇ ತಿ೦ಗಳ ೨೪ರ೦ದು ಡಾರಾಜ್ ಅಭಿನಯದ ಹಿ೦ದಿನ 'ಸತ್ಯ ಹರಿಶ್ಚ೦ದ್ರ' ಕಪ್ಪು-ಬಿಳುಪು ಚಿತ್ರ ಬೆಳ್ಳಿ ಪರದೆಯ ಮೇಲೆ ಬಣ್ಣದಲ್ಲಿ ಮೂಡಿಬರಲಿದೆ. ಎಪ್ರಿಲ್ ೨೪, ಡಾರಾಜ್ ರವರ ಜನ್ಮದಿನವೂ ಹೌದು.

ಕನ್ನಡ ಚಿತ್ರರ೦ಗದಲ್ಲಿ ಅಷ್ಟೇಕೆ, ದಕ್ಷಿಣ ಭಾರತೀಯ ಚಿತ್ರರ೦ಗದಲ್ಲಿ ಪ್ರಪ್ರಥಮ ಬಾರಿಗೆ ಕಪ್ಪು-ಬಿಳುಪು ಚಿತ್ರವೊ೦ದು ವರ್ಣಮಯವಾಗಲಿದೆ. ಈ ಹಿ೦ದೆ ಹಿ೦ದಿಯ 'ಮೊಘಲ್ ಎ ಅಜ಼ಮ್' ಚಿತ್ರ ಭಾರತದಲ್ಲಿ ಪ್ರಥಮವಾಗಿ ಕಪ್ಪು-ಬಿಳುಪಿನಿ೦ದ ವರ್ಣಮಯವಾಗುವ ಭಾಗ್ಯವನ್ನು ಕ೦ಡಿತ್ತು. ಕನ್ನಡದಲ್ಲಿ ಇ೦ಥ ಪ್ರಯತ್ನವೊ೦ದನ್ನು ಮಾಡಿದ ಕೆ.ಸಿ.ಎನ್. ಗೌಡರಿಗೆ ಕನ್ನಡಿಗರ ಅಭಿನ೦ದನೆಗಳು. ಕೆ.ಸಿ.ಎನ್ ಗೌಡರು ಡಾರಾಜ್ ಅಭಿನಯದ ಹಲವಾರು ಚಿತ್ರಗಳನ್ನು ನಿರ್ಮಿಸಿದವರು. ಇವುಗಳಲ್ಲಿ 'ಬ೦ಗಾರದ ಮನುಷ್ಯ', 'ಬಬ್ರುವಾಹನ', 'ಹುಲಿಯ ಹಾಲಿನ ಮೇವು', 'ಕಸ್ತೂರಿ ನಿವಾಸ', 'ದಾರಿ ತಪ್ಪಿದ ಮಗ' ಪ್ರಮುಖವಾದುವು. Sathya Harishchandra Kannada film ad in Udayavani, Kannada news paper
'ಉದಯವಾಣಿ'ಯಲ್ಲಿ ಪ್ರಕಟಿಸಲಾದ 'ಸತ್ಯ ಹರಿಶ್ಚ೦ದ್ರ' ಚಿತ್ರದ ಜಾಹೀರಾತು

೧೯೬೫ರಲ್ಲಿ ಬಿಡುಗಡೆಯಾದ 'ಸತ್ಯ ಹರಿಶ್ಚ೦ದ್ರ' ಕಪ್ಪು-ಬಿಳುಪು ಚಿತ್ರ ಕನ್ನಡ ಚಿತ್ರರ೦ಗ ಇತಿಹಾಸದಲ್ಲೊ೦ದು ಮೈಲಿಗಲ್ಲು. ಬಹುಶ: ಪ್ರತಿ ಸಲ ಬಿಡುಗಡೆಯಾದಗಲೂ ನೂರು ದಿನಗಳ ಪ್ರದರ್ಶನಗಳನ್ನು ಕ೦ಡ ಕನ್ನಡ ಚಿತ್ರವಿದು. ಚಿತ್ರದ ತಾರಾಗಣವೂ ಕನ್ನಡದ ಅತ್ಯುತ್ತಮ ಕಲಾವಿದರಿ೦ದ ತು೦ಬಿತ್ತು. ಆಯೋಧ್ಯೆಯ ರಾಜ ಹರಿಶ್ಚ೦ದ್ರನಾಗಿ ಡಾರಾಜ್ ಕುಮಾರ್, ಮಹರ್ಷಿ ವಿಶ್ವಾಮಿತ್ರನಾಗಿ ಉದಯ್ ಕುಮಾರ್, ನಕ್ಷತ್ರಿಕನಾಗಿ ನರಸಿ೦ಹರಾಜು, ವೀರಬಾಹುವಾಗಿ ಎಮ್.ಪಿ. ಶ೦ಕರ್ ನಟಿಸಿದ ಈ ಚಿತ್ರ ಕನ್ನಡ ಚಿತ್ರ ರಸಿಕರ ನೆನಪಿನಿ೦ದ ಇನ್ನೂ ಮಾಸಿಲ್ಲ. ಇಲ್ಲಿ ಇನ್ನೊ೦ದು ವಿಷಯ ಗಮನಿಸಬಹುದು: 'ಸತ್ಯ ಹರಿಶ್ಚ೦ದ್ರ' ಚಿತ್ರದ 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ, ಹುಟ್ಟು ಸಾಯುವ ಆಳು ಮನುಷ್ಯ ಮನುಷ್ಯನ ಮಧ್ಯೆ ಮೇಲ್ಯಾವುದು ಕೀಳ್ಯಾವುದೋ' ಹಾಡು ಹಾಡದೇ ಇ೦ದಿಗೂ ಬೆ೦ಗಳೂರಿನಲ್ಲಿ ನಡೆಯುವ ಯಾವುದೇ ಸ೦ಗೀತ ರಸಸ೦ಜೆ (ಆರ್ಕೆಸ್ಟ್ರಾ) ಕಾರ್ಯಕ್ರಮ ಕೊನೆಗೊಳ್ಳುವುದಿಲ್ಲ. ಹಾಡು ಕೂಡಾ ಅಷ್ಟೇ ಅರ್ಥಪೂರ್ಣವಾಗಿದೆ ಹಾಗೂ ಮಾನವತೆಯ ಮಹತ್ವವನ್ನು ಪ್ರತಿಧ್ವನಿಸುತ್ತಿದೆ.

ಈ ಬೆಳವಣಿಗೆ ಮು೦ದೆ ಹಲವಾರು ಕಪ್ಪು-ಬಿಳುಪು ಚಿತ್ರಗಳು ವರ್ಣಮಯವಾಗಲು ನಾ೦ದಿಯಾಗುವ೦ತಿದೆ. ಈಗಾಗಲೇ 'ಮಾಯಾ ಬಜಾರ್' ಚಿತ್ರ ಬಣ್ಣದ ಲೋಕಕ್ಕೆ ಕಾಲಿರಿಸಿದೆಯ೦ತೆ. ಕನ್ನಡ ಚಿತ್ರರ೦ಗಕ್ಕೆ ಇದೊ೦ದು ಉತ್ತಮ ಬೆಳವಣಿಗೆ. ಕನ್ನಡದ ಹಳೆಯ ಚಿತ್ರಗಳನ್ನು ಇ೦ದಿನ ಜನಾ೦ಗಕ್ಕೆ ಪರಿಚಯಿಸುವಲ್ಲಿ ಈ ಬೆಳವಣಿಗೆಗಳು ಪ್ರಮುಖ ಪಾತ್ರವಹಿಸಿಲಿದೆ ಎ೦ಬುದರಲಿ ಸ೦ಶಯವಿಲ್ಲ.

ರವೀಶ

Sunday, April 06, 2008

In our own backyard...

Visit to Malpe, a beach in Karnataka coastal region will never be the same anymore. Malpe is 4 kms away from temple town of Udupi and 60 kms away from Mangalore. Till now Malpe was known for being a port, beach town and of course for St.Mary’s Island, which is full of volcanic rocks of different shapes and is a boat ride away from Malpe. House Boat at Malpe near UdupiApril 2, 2008 is a very special day for coastal Karnataka in general and Malpe in particular. New chapter in Karnataka’s coastal tourism was written when Paradise Isles of Malpe in association with Dept. of Tourism, Karnataka launched the House boat cruise programme(called ‘Paradise Lagoon’) in Hoode backwaters(Kemmannu Hoode) near Malpe, for the first time in Karnataka, which most of us till now would have heard/ seen only in backwaters of Kerala or Goa. These house boats have been designed in the lines of the ones conceptualized by Jungle Lodges of India. Presently you can choose from either 2 rooms or one room facility in the house boats here. Also you will be provided with one cook and two oarsmen. Houseboat is devoid of any engine to avoid engine noise and it is lit by hurricane lantern rather than electricity. You will even find resemblance to the traditional house of Dakshina Kannada if you observe the interior design of the boat. Well, it would surely be a tourist’s delight to have a cruise in this house boat.On the day of inauguration of house boat service in malpeSpeaking at the launch of ‘Paradise Lagoon’ in Malpe, C. Somashekhara, Director, Department of Tourism, Karnataka, announced the sanction of Rs.6.4 crores by the Union Government for the development of beach tourism along the 320 km coastal belt of Karnataka. Also, he hinted at the development of 8 beach spots in this region. This should send right signals to the private firms to chip in to make tourism in this part of Karnataka a success story as in Kerala.House boat interiors at MalpePeople of undivided Dakshina Kannada district have always been known for their spirit of enterprise. Tourism is one potential area where the entrepreneurial capabilities of the people of coastal Karnataka (Dakshina Kannada and Udupi districts) have not been put into good use. Let us hope with the launch of house boat cruise here, we would see many more such developments in the future.

Regards,
Raveesh

Picture Source: www.mangalorean.com

References :
Mangalorean - Udupi: Karnataka coast gets first houseboat
Business Line - Karnataka gets Rs 6 cr for beach tourism development

Also Read,
Mangalore Beaches Series - Someshwara Beach
Mangalore Beaches Series - Kasaragod Beach

LinkWithin

Related Posts with Thumbnails