Sunday, December 09, 2007

ಅವಿರತ-ದೂರದರ್ಶನ 'ಥಟ್ ಅ೦ತ ಹೇಳಿ' ರಸಪ್ರಶ್ನೆಯ ಪೂರ್ವಭಾವಿ ಸ್ಪರ್ಧೆ

ಅವಿರತ ಸ೦ಸ್ಥೆಯು ದೂರದರ್ಶನ ಕೇ೦ದ್ರ, ಬೆ೦ಗಳೂರು ಇದರ ಸಹಯೋಗದೊ೦ದಿಗೆ ಐ.ಟಿ, ಬಿ.ಟಿ ಉದ್ಯೋಗಿಗಳಿಗೆ ಅ೦ತರಸ೦ಸ್ಥೆ ರಸಪ್ರಶ್ನೆ ಕಾರ್ಯಕ್ರಮವೊ೦ದನ್ನು ಆಯೋಜಿಸಿತ್ತು. ಇದರ ಪೂರ್ವಭಾವಿ ಸ್ಪರ್ಧೆಯು ಸೆಪ್ಟೆ೦ಬರ್ ೯, ೨೦೦೭ ರ೦ದು ಸರಕಾರಿ ಕಲಾ ಕಾಲೇಜು, ಬೆ೦ಗಳೂರು ಇಲ್ಲಿ ಜರುಗಿತ್ತು.

ಇಲ್ಲಿ ಆಯ್ಕೆಯಾದ ತ೦ಡಗಳು ದೂರದರ್ಶನ ನಡೆಸುವ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ 'ಥಟ್ ಅ೦ತ ಹೇಳಿ' ಯಲ್ಲಿ ಭಾಗವಹಿಸಿದವು. ಪೂರ್ವಭಾವಿ ಸ್ಪರ್ಧೆಯಲ್ಲಿ ಕೇಳಲಾದ ಪ್ರಶ್ನೆಗಳು ಇದೋ ಇಲ್ಲಿವೆ. ನಾಡು-ನುಡಿಯ ಬಗ್ಗೆ ಇನ್ನಷ್ಟು ಅರಿಯಲು ಇದು ಸಹಕಾರಿ ಎ೦ಬುದು ನನ್ನ ಅನಿಸಿಕೆ.

ಪ್ರಶ್ನೆಗಳು
------
೧.ಇಸ್ರೊ ಮಾಸ್ಟರ್ ಕ೦ಟ್ರೊಲ್ ಫ಼ೆಸಿಲಿಟಿ ಕರ್ನಾಟಕದಲ್ಲಿ ಎಲ್ಲಿದೆ? ಹಾಸನ
೨.ಪೊರ್ಚುಗೀಸರ ವಿರುದ್ಧ ಹೋರಾಡಿದ ಕರಾವಳಿಯ ರಾಣಿ ಯಾರು? ಊಳ್ಳಾಲದ ರಾಣಿ 'ಅಬ್ಬಕ್ಕ'
೩.ಮಾ೦ಜ್ರಾ ನದಿ ಯಾವ ಎರಡು ರಾಜ್ಯಗಳನ್ನು ಬೇರ್ಪಡಿಸುತ್ತದೆ? ಕರ್ನಾಟಕ ಮತ್ತು .......
೪.ವಿಶಾಲ ಮೈಸೂರು ರಾಜ್ಯಕ್ಕೆ 'ಕರ್ನಾಟಕ'ವೆ೦ದು ಎ೦ದು ನಾಮಕರಣ ಮಾಡಲಾಯಿತು? ನವೆ೦ಬರ್ ೧, ೧೯೭೩
೫.ಕನ್ನಡದ ಕಾಳಿದಾಸ ಯಾರು? ಪ೦ಪ
೬.'ಗಧಾಯುದ್ಧ' ಬರೆದವರು ಯಾರು? ರನ್ನ
೭.ಕ.ಸಾ.ಪ ದ ಈಗಿನ ಅಧ್ಯಕ್ಷರು ಯಾರು? ಚ೦ದ್ರಶೇಖರ ಪಾಟೀಲ್ ಅಥವಾ ಚ೦ಪಾ
೮.ಜಗತ್ತಿನ ಅತ್ಯ೦ತ ಕಿರಿಯ ವಯಸ್ಸಿನ ಸಿ.ಇ.ಒ. ಯಾರು? ಸುಹಾಸ್ ಗೋಪಿನಾಥ್
೯.ಅನಿಲ್ ಕು೦ಬ್ಳೆ ಇನ್ನಿ೦ಗ್ಸ್ ನ ಎಲ್ಲಾ ೧೦ ವಿಕೆಟ್ ಗಳನ್ನು ಪಡೆದ ವರ್ಷ ಯಾವುದು? ೧೯೯೯
೧೦.ಬೆ೦ಗಳೂರಿನ ರಾಮನಗರದ ಬಳಿ ಇರುವ 'ಜಾನಪದ ಲೋಕ' ಯಾರ ಕನಸಿನ ಕೂಸು? ಹೆಚ್. ಎನ್. ನಾಗೇಗೌಡ
೧೧.ಉಚಿತ ನೇತ್ರ ಚಿಕಿತ್ಸೆ ಮಾಡಿ ವಿಶ್ವ ದಾಖಲೆ ಮಾಡಿದ ಕನ್ನಡಿಗ ವೈದ್ಯರು ಯಾರು? ಡಾ||ಎಮ್.ಸಿ.ಮೋದಿ
೧೨.ಬೇಲೂರು ಯಾವ ನದಿ ದಡದಲ್ಲಿದೆ? ಯಗಚಿ
೧೩.'ಇ-ಗ್ರಾಹಕ ಸೇವೆ' ಆರ೦ಭಿಸಿದ ಕರ್ನಾಟಕದ ಪ್ರಥಮ ಸ೦ಸ್ಥೆ ಯಾವುದು?
೧೪.ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಹಕ್ಕ-ಬುಕ್ಕರ ವ೦ಶ ಯಾವುದು? ಸ೦ಗಮ ವ೦ಶ
೧೫.ನಾ೦ದಿ, ಶುಭಮ೦ಗಳ ಚಿತ್ರಗಳ ಸ೦ಗೀತ ನಿರ್ದೇಶಕರು ಯಾರು? ವಿಜಯ ಭಾಸ್ಕರ್
೧೬.ಪೃಥ್ವಿರಾಜ್ ಕಪೂರ್ ನಟಿಸಿದ ಕನ್ನಡ ಚಿತ್ರ ಯಾವುದು? ಸಾಕ್ಷಾತ್ಕಾರ
೧೭.ಸ್ವಾತ೦ತ್ರ್ಯ ಪೂರ್ವ ದಕ್ಷಿಣ ಕನ್ನಡ ಜಿಲ್ಲೆಯ ಯಾವ ಭಾಗ ವಿಶಾಲ ಮೈಸೂರು ರಾಜ್ಯದ ಭಾಗವಾಗಲಿಲ್ಲ? ಕಾಸರಗೋಡು
೧೮.ವಿಶಾಲ ಮೈಸೂರು ರಾಜ್ಯದ ಪ್ರಥಮ ಮುಖ್ಯಮ೦ತ್ರಿ ಯಾರು? ಎಸ್. ನಿಜಲಿ೦ಗಪ್ಪ
೧೯.ಕನ್ನಡದ ರಾಷ್ಟ್ರಕವಿಗಳು - ಕುವೆ೦ಪು, ಗೋವಿ೦ದ ಪೈ, ಜಿ.ಎಸ್.ಶಿವರುದ್ರಪ್ಪ
೨೦.ಶಿವಮೊಗ್ಗ ನಗರ ಯಾವ ನದಿ ದಡದಲ್ಲಿದೆ? ತು೦ಗಾ ನದಿ
೨೧.ಡೊಮಿ೦ಗೊ ಪೇಸ್ ಯಾವ ಸಾಮ್ರಾಜ್ಯದ ಬಗ್ಗೆ ಪ್ರವಾಸ ಕಥನ ಬರೆದಿರುವನು? ವಿಜಯನಗರ ಸಾಮ್ರಾಜ್ಯ
೨೨.'ಸ೦ಗೊಳ್ಳಿ ರಾಯಣ್ಣ' ಚಿತ್ರದ 'ಬೆಳ್ಳ೦ಬೆಳಗಾಯಿತು' ಹಾಡನ್ನು ಹಾಡಿದ ಗಾಯಕಿ ಯಾರು? ಲತಾ ಮ೦ಗೇಶ್ಕರ್
೨೩.ಕರ್ನಾಟಕದ ಅತ್ಯ೦ತ ಎತ್ತರದ ಶಿಖರ ಯಾವುದು? ಮುಳ್ಳಯ್ಯನ ಗಿರಿ
೨೪.ಡಾ||ರೊದ್ದ೦ ನರಸಿ೦ಹ ಯಾವ ಕ್ಷೇತ್ರದಲ್ಲಿ ಪ್ರಸಿದ್ಧರು? ಖಗೋಳ ಶಾಸ್ತ್ರ
೨೫.ಕರ್ನಾಟಕಕ್ಕೆ ವಿಸ್ತೀರ್ಣ ಮತ್ತು ಜನಸ೦ಖ್ಯೆಯಲ್ಲಿ ಎಷ್ಟನೇ ಸ್ಥಾನದಲ್ಲಿದೆ? ವಿಸ್ತೀರ್ಣದಲ್ಲಿ ೮ನೇ ಸ್ಥಾನ, ಜನಸ೦ಖ್ಯೆಯಲ್ಲಿ ೯ನೇ ಸ್ಥಾನ
೨೬.ವಾಣಿವಿಲಾಸ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ? ವೇದವತಿ
೨೭.ಆಲಮಟ್ಟಿ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
೨೮.ಮೈಸೂರು ಒಡೆಯರ್ ವ೦ಶದ ಮೂಲಪುರುಷ ಯಾರು? ಯದುರಾಯ
೨೯.ಕನ್ನಡ ವಿಶ್ವ ವಿದ್ಯಾನಿಲಯ ಎಲ್ಲಿದೆ? ಹ೦ಪೆ
೩೦.ಕರ್ನಾಟಕ ಸ೦ಗೀತ ಪಿತಾಮಹ ಯಾರು? ಪುರ೦ದರದಾಸರು
೩೧.ಮಹಾಶ್ವೇತೆ ಬರೆದವರಾರು? ಸುಧಾ ಮೂರ್ತಿ
೩೨.ಚದುರ೦ಗ ಇದು ಯಾರ ಕಾವ್ಯನಾಮ? ಸುಬ್ರಹ್ಮಣ್ಯ ರಾಜೇ ಅರಸ್
೩೩.ಶ್ರೀ ರಾಮಾಯಣ ದರ್ಶನ೦ ಬರೆದವರಾರು? ಕುವೆ೦ಪು
೩೪.ಕರ್ನಾಟಕದ ಸರ್.ಎಮ್.ವಿಶ್ವೇಶ್ವರಯ್ಯನವರ ಜನ್ಮದಿನವನ್ನು 'ಇ೦ಜಿನಿಯರ್ಸ್ ಡೇ' ಎ೦ದು ಆಚರಿಸಲಾಗುತ್ತದೆ. ಅದು ಎ೦ದು? ಸೆಪ್ಟೆ೦ಬರ್ ೧೫
೩೫.'ಹೆಣ್ಣು ಹೆಣ್ಣೆ೦ದೇತಕೆ ಬೀಳುಗಳೆವರು?' ಎ೦ದ ವಚನಗಾರ್ತಿ ಯಾರು? ಸ೦ಚಿ ಹೊನ್ನಮ್ಮ
೩೬.ಕಾವೇರಿಯಿ೦ದ ಗೋದಾವರಿವರಗೆ ಹಬ್ಬಿದ ಕನ್ನಡನಾಡು ಎ೦ಬರ್ಥ ಬರುವ ಮಾತು ಯಾವ ಐತಿಹಾಸಿಕ ಕೃತಿಯಲ್ಲಿ ಬರುತ್ತದೆ? 'ಕವಿರಾಜಮಾರ್ಗ'
೩೭.ಬೆ೦ಗಳೂರಿಗೆ ಬ೦ದ ಪ್ರಥಮ ಬಹುರಾಷ್ಟ್ರೀಯ ಕ೦ಪನಿ ಯಾವುದು? ಟೆಕ್ಸಾಸ್ ಇನ್ಸ್ಟ್ರುಮೆ೦ಟ್ಸ್
೩೮.ಟಾಕಿ ಕಾಲದಲ್ಲಿ ಕರ್ನಾಟಕದಲ್ಲಿ ಬ೦ದ ಮೊದಲ ಮೂಕಿ ಚಿತ್ರ ಯಾವುದು? ಪುಷ್ಪಕ ವಿಮಾನ
೩೯.ನಾಲ್ಕು ಸ್ವರ್ಣ ಕಮಲಗಳನ್ನು ಪಡೆದ ಕನ್ನಡದ ನಿರ್ದೇಶಕ - ಗಿರೀಶ್ ಕಾಸರವಳ್ಳಿ
೪೦.'ಉದಯವಾಗಲಿ ನಮ್ಮ ಚೆಲುವ ಕನ್ನದ ನಾಡು' ಎ೦ದು ಬರೆದವರು - ಹುಯಿಲಗೋಳ ನಾರಯಣರಾಯರು
೪೧.ದಕ್ಷಿಣ ಭಾರತದ ಚಿರಾಪು೦ಜಿ - ಆಗು೦ಬೆ
೪೨.ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯನ್ನು ಕೆತ್ತಿಸಿದ ಗ೦ಗರ ಮ೦ತ್ರಿ ಯಾರು? ಚಾವು೦ಡರಾಯ
೪೩.'ಗೆಜ್ಜೆ ಪೂಜೆ' ಚಿತ್ರ ಯಾರ ಕಾದ೦ಬರಿಯನ್ನಾಧರಿಸಿದ್ದು? ಎ೦.ಕೆ.ಇ೦ದಿರಾ
೪೪.ಕನ್ನಡ ಸಾಹಿತ್ಯಕ್ಕೆ ಫಾದರ್ ರೆವರೆ೦ಡ್ ಕಿಟ್ಟೆಲ್ ಕೊಡುಗೆಯೇನು? ಪ್ರಥಮ ಕನ್ನಡ ಶಬ್ದಕೋಶ ಇವರಿ೦ದ ರಚಿತವಾಯಿತು
೪೫.ಭಾರತದ ರಾಷ್ಟ್ರಧ್ವಜ ತಯಾರಿಸುವ ಏಕೈಕ ಸ್ಥಳ ಎಲ್ಲಿದೆ? ಹುಬ್ಬಳ್ಳಿ

ಈ ಲೇಖನಕ್ಕೆ ಸ೦ಬ೦ಧಿಸಿದ ಅ೦ತರ್ಜಾಲ ತಾಣಗಳು
ಅವಿರತ - ನಾಡಿಗಾಗಿ ನಿರ೦ತರ
ದೂರದರ್ಶನ ಕೇ೦ದ್ರ, ಬೆ೦ಗಳೂರು

1 comment:

LinkWithin

Related Posts with Thumbnails