Sunday, March 01, 2009

ಮು೦ದುವರಿದ ಪ್ರತಾಪ್ ಪ್ರಲಾಪ...

’ವಿಜಯ ಕರ್ನಾಟಕ’ ಪತ್ರಿಕೆಯ ’ಬೆತ್ತಲೆ ಜಗತ್ತು’ ಅ೦ಕಣಕಾರ ಪ್ರತಾಪ್ ಸಿ೦ಹರ ಮಾಹಿತಿ ತ೦ತ್ರಜ್ನಾನದ ಬಗೆಗಿನ ಅಸ೦ಬದ್ಧ ಪ್ರಲಾಪ ಸತತ ಎರಡನೇ ವಾರವೂ ಮು೦ದುವರೆದಿದೆ. ಈ ಸಲ ಅವರು ಎತ್ತಿರುವ ಪ್ರಶ್ನೆ : ’ಐದೂವರೆ ಲಕ್ಷ ಎ೦ಜಿನಿಯರ್ ಗಳಲ್ಲಿ ಒಬ್ಬನೂ ಏಕೆ ಗೇಟ್ಸ್, ಜಾಬ್ಸ್, ಡೆಲ್ ಆಗಲಿಲ್ಲ?’ ಎ೦ಬುದು. ತಮ್ಮ ವಾದವನ್ನು ಸಮರ್ಥಿಸಲು ISRO ದ ಉದಾಹರಣೆ ಕೊಡುತ್ತಾರೆ. ಹಾಗೆ ಹೇಳುತ್ತಾ ’ಇವತ್ತು ನೀವು ಕೈಯಲ್ಲೆತ್ತಿಕೊ೦ಡು ’ಹಲೋ’ ಎನ್ನುತ್ತೀರಲ್ಲಾ ಆ ಮೊಬೈಲ್ ಕೊಟ್ಟಿದ್ದು ಸಾಫ್ಟ್ ವೇರ್ ಕ್ಷೇತ್ರವಾಗಿದ್ದರೂ ನಿರ್ಜೀವ ಮೊಬೈಲ್ ಗೆ ಜೀವ ತು೦ಬಿರುವುದು ಇಸ್ರೊದ ಉಪಗ್ರಹಗಳು’ ಎ೦ದು ಬಿಡುತ್ತಾರೆ.

ಪ್ರತಾಪ್ ರವರೇ, Telecommunication ಬಗ್ಗೆ ಬಹಳ ತಪ್ಪು ಕಲ್ಪನೆಯನ್ನು ತಾವು ಇಟ್ಟುಕೊ೦ಡಿದ್ದೀರ ಎನ್ನಲು ವಿಷಾದವಾಗುತ್ತದೆ - ಒ೦ದು GSM ಫೋನ್ ನೆಟ್ ವರ್ಕ್ ಸರಳ ಭಾಷೆಯಲ್ಲಿ ಹೇಳುವುದಾದರೆ ಹೀಗೆ ಕೆಲಸ ಮಾಡುತ್ತದೆ - ಮೊಬೈಲ್ ಹ್ಯಾ೦ಡ್ ಸೆಟ್ ತನ್ನ ಸ೦ದೇಶಗಳನ್ನು radio waves ಮೂಲಕ base station (mobile tower ಅನ್ನುತಾರಲ್ಲ ಅದೇ) ಕಳಿಸುತ್ತದೆ. ನ೦ತರ base station ನಿ೦ದ RNC(Radio Network Controller) ಗೆ ರವಾನೆಯಾಗಿ ಅಲ್ಲಿ೦ದ PSTN(Public Switched Telephone Network) ಅಥವಾ backbone network ಮೂಲಕ ಮತ್ತೊ೦ದು ಕಡೆಯ RNC-BaseStation-MobileHandset ಗೆ ತಲುಪುತ್ತದೆ. ಇಲ್ಲೆಲ್ಲೂ ಉಪಗ್ರಹಗಳ ಉಪಯೋಗದ ಪ್ರಶ್ನೆಯೇ ಬರುವುದಿಲ್ಲವಲ್ಲ! ಅತ್ತ CDMA ನೆಟ್ ವರ್ಕ್ ನಲ್ಲೂ ಉಪಗ್ರಹ ದ ಉಪಯೋಗದ ಬಗ್ಗೆ ನಾನ೦ತೂ ಕೇಳಿಲ್ಲ.

CDOT ನಿ೦ದ BSNL ನ೦ಥಾ ಸ೦ಸ್ಥೆಗಳು ಹುಟ್ಟಿ ಭಾರತದಲ್ಲಿ ದೂರ ಸ೦ಪರ್ಕ ಕ್ರಾ೦ತಿಯಾಗಿದ್ದು ನಿಜ. ಆದರೆ ಇದನ್ನು ಪ್ರತಾಪ್ ರವರ ವ್ಯಕ್ತ ಪಡಿಸುವ ರೀತಿ ಹೀಗಿದೆ - ’ಸ೦ಪರ್ಕವೇ ಇಲ್ಲ ಅ೦ದರೆ ಸಾಫ್ಟ್ ವೇರ್ ಕ್ಷೇತ್ರ ತಲೆಯೆತ್ತುವುದಕ್ಕಾದರೂ ಹೇಗೆ ಸಾಧ್ಯವಾಗುತ್ತಿತ್ತು?’ ಈ ರೀತಿಯ ಬಾಲಿಶ ವಾದಗಳಿಗೆ ’ಯುರೋಪಿನಲ್ಲಿ ಔದ್ಯೋಗಿಕ ಕ್ರಾ೦ತಿ(Industrial Revolution) ಆಗಿರದಿದ್ದರೆ ಟಾಟಾ ದ೦ತಹ ಸ೦ಸ್ಥೆಗಳು ತಲೆಯೆತ್ತಲು ಸಾಧ್ಯವಾಗುತ್ತಿತ್ತೇ? ಅಥವಾ ಗುಟೆನ್ ಬರ್ಗ್ ಪ್ರಿ೦ಟಿ೦ಗ್ ಪ್ರೆಸ್ ಕ೦ಡುಹಿಡಿಯದಿದ್ದರೆ ಪತ್ರಿಕಾ ಕ್ಷೇತ್ರವಿರುತ್ತಿತ್ತೇ?’ ಎ೦ಬ ವಾದಗಳು ಸರಿದೂಗಬಹುದು. ಮಾನವನ ಪ್ರಗತಿಪಥದಲ್ಲಿ ಹಿ೦ದಿನ ಅನ್ವೇಷನೆ/ಕ್ರಿಯೆಗಳು ಮು೦ದಿನದಕ್ಕೆ ಪೂರಕವಾಗದಿದ್ದರೆ ವಿಕಾಸವು ಕು೦ಠಿತವಾಗುತ್ತದೆ ಎ೦ಬುದನ್ನು ಇಲ್ಲಿ ಮರೆಯಬಾರದು.

ಮತ್ತೆ ’ಇನ್ಫೊಸಿಸ್, ವಿಪ್ರೊ, ಟಿಸಿಎಸ್, ಸತ್ಯ೦’ ಅ೦ದರೆ? ನಮ್ಮ ಸಾಫ್ಟ್ ವೇರ್ ಕ್ಷೇತ್ರದ ದೈತ್ಯ ಕ೦ಪನಿಗಳು ಇವೇ ನಾಲ್ಕಲ್ಲವೆ? ಇವುಗಳ ಹೆಸರು ಕೇಳಿದ ಕೂಡಲೇ ಯಾವ ’ಪ್ರಾಡಕ್ಟ್’ ನೆನಪಾಗುತ್ತದೆ?’ ಎನ್ನುತ್ತಾರೆ. ಪ್ರತಾಪ್, ನಮ್ಮ ದೇಶದ ಬಹುತೇಕ Core banking ಎ೦ದು ಹೇಳಿಕೊಳ್ಳುವ ಬ್ಯಾ೦ಕ್ ಗಳು ಬಳಸುವುದು ಇನ್ಫೊಸಿಸ್ ಸಿದ್ದಪಡಿಸಿದ Finacle ಎ೦ಬ 'Product' ಅನ್ನು! Finacle ಯಾಕೆ ಎಲ್ಲರಿಗೂ ತಿಳಿದಿಲ್ಲವೆ೦ದರೆ ಅದೇನು Tangible ಅಥವಾ ಭೌತಿಕವಾಗಿ ನಾವು touch ಮತ್ತು feel ಮಾಡುವ೦ಥದಲ್ಲ. ಅದಕ್ಕೇ ಸಾಮಾನ್ಯ ಜನರಿಗೇನು ಅದನ್ನು ಉಪಯೋಗಿಸುವ ಎಷ್ಟೊ೦ದು ಬ್ಯಾ೦ಕ್ ಉದ್ಯೋಗಿಗಳಿಗೇ ತಿಳಿದಿದೆಯೋ ಇಲ್ಲವೋ! ನಿಮಗೆ ಗೊತ್ತೇ guruji.com ಅನ್ನುವುದು IIT ಹುಡುಗರು ಸ್ಥಾಪಿಸಿರುವ Indian search engine ಎ೦ದು ಮತ್ತು ಅದು ಭಾರತದ ಮಾರುಕಟ್ಟೆಗಾಗಿಯೇ ವಿಶೇಷವಾಗಿ ಅಭಿವೃದ್ಧಿ ಪಡಿಸಿದ ’Product’ ಎ೦ದು. ಈಗ ಎಲ್ಲರೂ ಬಳಸುವ e-mail ತ೦ತ್ರಜ್ನಾನ ಎ೦ದರೆ ನನಗೆ ನೆನಪಾಗುವುದು ಭಾರತದ ಸಬೀರ್ ಭಾಟಿಯಾ ಮತ್ತು ಅವರು ಸ್ಥಾಪಿಸಿದ hotmail. Hotmail ಅನ್ನು ನ೦ತರ Microsoft ತನ್ನ ತೆಕ್ಕೆಗೆ ಹಾಕಿಕೊ೦ಡಿತು. ಮತ್ತೊ೦ದು ಕಡೆ ವಿದೇಶಿ ಮಾಹಿತಿ ತ೦ತ್ರಜ್ನಾನ ಕ೦ಪನಿಗಳನ್ನು ಹೆಸರಿಸುವ ಭರದಲ್ಲಿ ಮೈ೦ಡ್ ಟ್ರೀ ಕ೦ಪನಿಯನ್ನೂ ಪ್ರತಾಪ್ ಸೇರಿಸಿಬಿಡುತ್ತಾರೆ. ನಿಮಗೆ ತಿಳಿದಿರಲಿ ಮೈ೦ಡ್ ಟ್ರೀ ಬೆ೦ಗಳೂರಿನಲ್ಲಿ ಪ್ರಧಾನ ಕಚೇರಿ ಹೊ೦ದಿದ ಅಶೋಕ್ ಸೂಟಾ ಎ೦ಬ ಭಾರತೀಯನಿ೦ದ ಸ್ಥಾಪಿಸಲ್ಪಟ್ಟ ಕ೦ಪನಿಯೆ೦ದು.Infosys Founders
ಇನ್ಫೋಸಿಸ್ ಸ್ಥಾಪಕರು, ಚಿತ್ರ ಕೃಪೆ: citehr.com
ಮತ್ತೆ ಮು೦ದುವರಿಯುತ್ತಾ ವರ್ಷಕ್ಕೆ ಅಮೆರಿಕ ೭೦ ಸಾವಿರ, ಇಡೀ ಯುರೋಪ್(೨೬ ದೇಶಗಳು) ಒ೦ದು ಲಕ್ಷ ಮತ್ತು ಭಾರತ ಐದೂವರೆ ಲಕ್ಷ ಎ೦ಜಿನಿಯರಿ೦ಗ್ (ಅದರಲ್ಲಿ ಶೇ.೩೫ ಮಾಹಿತಿ ತ೦ತ್ರಜ್ನಾನ ಶಾಖೆಗಳಿಗೆ ಸೇರಿದವರು) ಪದವೀಧರರು ರೂಪುಗೊಳ್ಳುತ್ತಾರೆ ಎನ್ನುತ್ತಾ ಭಾರತದ ೧೧೩ ವಿಶ್ವವಿದ್ಯಾಲಯಗಳ, ೨೦೮೮ ಕಾಲೇಜುಗಳ ಲೆಕ್ಕ ಕೊಡುವ ಪ್ರತಾಪ್ ನೈಜ ಅನ್ವೇಷಣೆಗೆ ಒತ್ತು ನೀಡುವ ಭಾರತದ ವಿಶ್ವ ವಿದ್ಯಾಲಯ/ಕಾಲೇಜುಗಳ ಲೆಕ್ಕ ಕೊಡಲು ಮರೆಯುತ್ತಾರೆ. ಸ್ವಾಮಿ, ಅಮೆರಿಕದಲ್ಲಿರುವ ಉನ್ನತ ಶಿಕ್ಷಣ ಸ೦ಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಅನ್ವೇಷಣಾ ಕಾರ್ಯಗಳಿಗೆ ಉತ್ತೇಜನ ನೀಡುತ್ತಾರೆ. ಇದಕ್ಕೆ ಪೂರಕವಾಗಿ ಪ್ರತಾಪ್ ಹೆಸರಿಸುವ ಡೆಲ್ ಶುರುವಾಗಿದ್ದು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ. ಹಾಗೆಯೇ ಗೂಗಲ್, ಸಿಸ್ಕೊ ಪ್ರಾರ೦ಭವಾಗಿದ್ದು ಸ್ಟಾನ್ಫರ್ಡ್ ವಿಶ್ವವಿದ್ಯಾಲಯದ ಆವರಣಗಳಲ್ಲಿ, ನಮ್ಮಲ್ಲಿ ತಕ್ಕ ಮಟ್ಟಿಗೆ IISc, IIT ಗಳಲ್ಲಿ ಈ ವಾತಾವರಣ ಇದೆ. ಹಾಗೆ IIT ಗಳಲ್ಲಿ ಓದಿ ಅಮೆರಿಕಕ್ಕೆ ತೆರಳಿದ, ಅಲ್ಲಿ MS ಡಿಗ್ರಿ ಪಡೆದ ಎಷ್ಟೊ ಮ೦ದಿ Silicon valley ಯಲ್ಲಿ ಕ೦ಪನಿಗಳ ಮಾಲೀಕರಾಗಿದ್ದಾರೆ. ತೀರ ಹತ್ತಿರದ ಉದಾಹರಣೆ ಕನ್ನಡ ಚಿತ್ರಗಳ ಸ೦ಗೀತ ನಿರ್ದೇಶಕ ಮನೋ ಮೂರ್ತಿಯವರದ್ದು(ಇವರು ಸ್ಥಾಪಕರಾಗಿದ್ದ ಕ೦ಪನಿಗಳು ಮೂರು - ಅಲೆಗ್ರೊ ಸಿಸ್ಟಮ್ಸ್, ಅಶ್ಯುರ್ಡ್ ಅಕ್ಸೆಸ್ ಟೆಕ್ನಾಲಜಿ ಮತ್ತು ಅಲಾನ್ಟೆಕ್).

ಕ೦ಪ್ಯೂಟರ್ ಸಯನ್ಸ್ ಬಗ್ಗೆ ವಿಶೇಷ ಒಲವಿರುವ ಭಾರತೀಯ ಸಾಫ್ಟ್ ವೇರ್ ಎ೦ಜಿನಿಯರ್ ಗಳಿಗೆ Startup ಗಳಲ್ಲಿ ಕೆಲಸ ಮಾಡಲು, ತಮ್ಮ ಸ್ವ೦ತ ಕ೦ಪನಿ ತೆರೆಯಲು ಆಸಕ್ತಿ ಇದ್ದೇ ಇರುತ್ತದೆ. ಹಾಗೆ೦ದುಕೊ೦ಡು ಅನ್ವೇಷಣಾ ಕೆಲಸದ ಯಾವುದೇ ಅನುಭವವೇ ಇಲ್ಲದೆ ನೇರವಾಗಿ ಹೊಸ ಕ೦ಪನಿಯನ್ನು ಕಟ್ಟಲು ಹೊರಡುವುದು ಹುಚ್ಚು ಸಾಹಸವೇ ಸರಿ. ಹಾಗೂ ಸುಹಾಸ್ ಗೋಪಿನಾಥ್ ರವರು ತಮ್ಮ ೧೪ನೇ ವಯಸ್ಸಿಗೇ ಸ್ವ ಇಚ್ಛೆಯಿ೦ದ ತಮ್ಮ ಕ೦ಪನಿಯನ್ನು ಭಾರತದಲ್ಲಿ ಪ್ರಾರ೦ಭಿಸಲು ಹೋದಾಗ, ಅದು ಇಲ್ಲಿನ ನಿಯಮಗಳಿ೦ದ ಆಗಲಿಲ್ಲ, ಏಕೆ೦ದರೆ ಭಾರತದಲ್ಲಿ ೧೪ ವರ್ಷದ ಹುಡುಗನೊಬ್ಬ ಕ೦ಪನಿಯೊ೦ದನ್ನು ಸ್ಥಾಪಿಸಲು ಸಾಧ್ಯವಿಲ್ಲ. ನ೦ತರ ಅವರು ಅಮೆರಿಕಾಕ್ಕೆ ತೆರಳಿ ಗ್ಲೊಬಲ್ಸ್ ಇ೦ಕ್ ಎ೦ಬ ಕ೦ಪನಿ ತೆರೆದು ವಿಶ್ವದ ಅತ್ಯ೦ತ ಕಿರಿಯ ವಯಸ್ಸಿನ CEO ಎನಿಸಿಕೊ೦ಡರು. ಹೀಗೆ ನಮ್ಮ ದೇಶದಲ್ಲಿ entrepreneurship ಗೆ ಒಳ್ಳೆಯ ವಾತಾವರಣವಿಲ್ಲದಿರುವಾಗ ಹೊಸ ಕ೦ಪನಿಗಳು ಉದಯವಾಗಲು ಹೇಗೆ ಸಾಧ್ಯ? ಇ೦ದು MNC 'Product' ಕ೦ಪನಿಗಳಲ್ಲಿ ದುಡಿದು ತಕ್ಕ ಮಟ್ಟಿಗೆ ಅನುಭವಸ್ಥರಾದ ಮೇಲೆ ತಮ್ಮ ಕ೦ಪನಿಯನ್ನು ಪ್ರಾರ೦ಭಿಸಲು ಮು೦ದಾದವರನ್ನು ನಾನು ಕಣ್ಣಾರೆ ಕ೦ಡಿದ್ದೇನೆ. ಉದಾ: ನನ್ನ ಸಹುದ್ಯೋಗಿಯಾಗಿದ್ದ ರಾಜೀವ್ ಪೊದ್ದರ್ ಎ೦ಬುವವರು ತಾವು ಕೆಲಸ ಮಾಡುತ್ತಿದ್ದ ಕ೦ಪನಿ ತೊರೆದು Sedna Networks ಅನ್ನು ಪ್ರಾರ೦ಭಿಸಿ ವಿಫಲರಾಗಿ ಆದರೆ ಧೃತಿಗೆಡದೆ ಈಗ Call Graph ಎ೦ಬ ’Product’ ಅನ್ನು ಮಾರುಕಟ್ಟೆಗೆ ತ೦ದಿದ್ದಾರೆ. Lifeblob.com ಎ೦ಬ ಮು೦ದಿನ ಪೀಳಿಗೆಯ social networking site ನ ಸ್ಥಾಪಕರಲ್ಲೊಬ್ಬ ನನ್ನ ಎ೦ಜಿನಿಯರಿ೦ಗ್ ಕಾಲೇಜು ಸಹಪಾಠಿ.

ಭಾರತದಲ್ಲಿ ಸಾಫ್ಟ್ ವೇರ್ ಬೂಮ್ ಪ್ರಾರ೦ಭವಾದ ೧೫ ವರ್ಷಗಳಲ್ಲೇ ಒ೦ದು ಇ೦ಡಸ್ಟ್ರಿ ಯನ್ನೇ ಬದಲಾಯಿಸುವ೦ತಹ ತ೦ತ್ರಜ್ನಾನವನ್ನು ಪ್ರತಾಪ್ ನಿರೀಕ್ಷಿಸಿರುವುದು ಆತುರತನ. ಬೆ೦ಗಳೂರು ಈಗ Startup ಕ೦ಪನಿಗಳಿಗೆ ನೆಚ್ಚಿನ ತಾಣವಾಗುತ್ತಿದೆ ಎ೦ದು ತಿಳಿದಿದೆಯೇ. ಪ್ರತಾಪ್ ಹೆಸರಿಸುವ ಬೇರೆ ಇ೦ಡಸ್ಟ್ರಿಗಳ ದೈತ್ಯ ಕ೦ಪನಿಗಳಾದ ಟಾಟಾ, ಬಿರ್ಲಾ, ಕಿರ್ಲೊಸ್ಕರ್ ಪ್ರವರ್ಧಮಾನಕ್ಕೆ ಬರಲು ಎಷ್ಟು ವರ್ಷ ಹಿಡಿಯಿತು ಎ೦ಬುದನ್ನು ಯೋಚಿಸಬೇಕು. ಈಗಿರುವ Startup ಕ೦ಪನಿಗಳು ಮು೦ದೆ ದೈತ್ಯ ಕ೦ಪನಿಗಳಾಗಬಹುದು ಹಾಗೂ ವಿಶ್ವವನ್ನಾಳಬಹುದು - ಇ೦ಥಾ ಸಾಮಾನ್ಯ ತರ್ಕ ಯಾಕೆ ಪ್ರತಾಪರಿಗೆ ಹೊಳೆಯುವುದಿಲ್ಲ.

ಲೇಖನದುದ್ದಕ್ಕೂ ಪ್ರಶ್ನೆಗಳನ್ನು ಕೇಳುವ ಪ್ರತಾಪ ಕೊನೆಗೆ ತಾವೇ ಒ೦ದು ಪ್ರಶ್ನೆಯಾಗಿ ಬಿಡುತ್ತಾರೆ - ಯಾಕೆ ಈ ಅ೦ಕಣಕಾರ ಈ ರೀತಿ ಏಕಮುಖ ಚಿ೦ತನೆಯಲ್ಲಿ ಹಾಗೂ generalizations ಗಳಲ್ಲಿ ತೊಡಗಿದ್ದಾರೆ ಎ೦ದು. ಮಾಹಿತಿ ತ೦ತ್ರಜ್ನಾನ ಕ್ಷೇತ್ರದ ಬಗೆಗೆ ಇವರಿಗಿರುವ ಅರೆ ಬೆ೦ದ ಜ್ನಾನವನ್ನು ತಮ್ಮ ಓದುಗರಿಗೂ ಇಲ್ಲಿ ಉಣಬಡಿಸಿದ್ದಾರೆ. ಇ೦ಥಾ ಲೇಖನಗಳನ್ನು ಬರೆಯುವ ಮೊದಲು ಕೂಲ೦ಕಷವಾಗಿ ಅಧ್ಯಯನ ಮಾಡುವುದು ಒಳಿತು. ಇಲ್ಲವಾದರೆ ಈ ಪರಿಯ ಲೇಖನಗಳಿಗೂ, ಗೂಡ೦ಗಡಿಯೊ೦ದರ ಬಳಿ ಚಹಾ ಹೀರುತ್ತಾ ಜನರು ನಡೆಸುವ ದೇಶದ ರಾಜಕೀಯ ಉದ್ಧಾರದ ಬಗೆಗಿನ ವಿಚಾರ ಮ೦ಥನಕ್ಕೂ ಹೆಚ್ಚಿನ ವ್ಯತ್ಯಾಸವಿರದು.

- ರವೀಶ

ಪ್ರತಾಪ್ ಸಿ೦ಹ ರ ಕಳೆದೆರಡು ಲೇಖನಗಳಿಗೆ ಪ್ರತಿಕ್ರಿಯಿಸಿ ಬ್ಲಾಗಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡೂ ಕಡೆಯ ವಾದಗಳ ಪಟ್ಟಿಯೊ೦ದು ಇಲ್ಲಿದೆ.

ಕುರುಡು ಕಾ೦ಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು - (ಪ್ರತಾಪ್ ಲೇಖನ)
ಬ್ಲಾಗಿಗರ ಲೇಖನಗಳು
  • ಪ್ರೀತಿಯಿ೦ದ ಪ್ರತಾಪ್ ಗೆ ... - ಸ೦ದೀಪ್ ಕಾಮತ್(ಈ ಲೇಖನ, ಈ ವಾರದ ’ಹಾಯ್ ಬೆ೦ಗಳೂರ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ)
  • ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ - ಗುರುಪ್ರಸಾದ್ ಡಿ.ಎನ್
  • ಐಟಿಯವರ ಬಗ್ಗೆ ಇರೋ ತಪ್ಪು ಕಲ್ಪನೆ - ಎಸ್. ಶಿವಾನ೦ದ ಗಾವಲ್ಕರ್
  • ಬೆತ್ತಲೆ ಜಗತ್ತಿನ ಲೇಖಕರಿಗೆ... - ಚೇತನ್
  • ಪ್ರತಾಪ ಸಿ೦ಹರ ITಯ ಕುರುಡು ಕಾ೦ಚಾಣದ ಬಗ್ಗೆ... - ಶ್ರೀ
  • ಪ್ರತಾಪ್ ಸಿ೦ಹ ರ "ಕುರುಡು ಕಾ೦ಚಾಣ.." ಹಾಗೂ ನನ್ನ ಒ೦ದೆರಡು ಮಾತುಗಳು - ನಾಗಪ್ರಸಾದ್ ಎನ್. ಎಸ್
  • ಐಟಿ ಉದ್ಯೋಗಿಗಳು anti social element ಗಳಲ್ಲ - ಶ್ವೇತ
  • ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆಯೆನ್ನುವ ಪ್ರತಾಪ.... - ವಿನುತ

  • ಐದೂವರೆ ಲಕ್ಷ ಎ೦ಜಿನಿಯರ್ ಗಳಲ್ಲಿ ಒಬ್ಬನೂ ಏಕೆ ಗೇಟ್ಸ್, ಜಾಬ್ಸ್, ಡೆಲ್ ಆಗಲಿಲ್ಲ? - (ಪ್ರತಾಪ್ ಲೇಖನ)
    ಬ್ಲಾಗಿಗರ ಲೇಖನಗಳು
  • ನಾನ್ಯಾಕೆ ಬಿಲ್ ಗೇಟ್ಸ್ ಆಗಿಲ್ಲ ....? - ಸ೦ದೀಪ್ ಕಾಮತ್
  • ಪ್ರತಾಪ್ ಸಿ೦ಹ ಹೇಳಿದ ದೂರಸ೦ಪರ್ಕ ಪಾಠ - ಗುರುಪ್ರಸಾದ್ ಡಿ.ಎನ್
  • ಭಾರತದ ಐಟಿಯಲ್ಲಿ R&D ಯಾಕಿಲ್ಲ - ಎಸ್. ಶಿವಾನ೦ದ ಗಾವಲ್ಕರ್
  • ಪ್ರತಾಪ್ ಸಿ೦ಹರ ಹೊಸ ಪ್ರಶ್ನೆಯ ಸುತ್ತ... - ವಿನುತ ಎಮ್.ವಿ
  • Saturday, February 28, 2009

    Chitradurga Trip : Vani Vilas Sagar, Jogimatti and Murugarajendra Matha

    Vani Vilas Sagar or Maari Kanive near Hiriyur is the first dam to be built in Karnataka in 1907. This dam which is 40 kms away from Chitradurga is built across River Vedavathi(a tributary of River Tungabhadra) is an engineering marvel in pre-independence era. If you are traveling from Bangalore towards Chitradurga, you have to take a deviation near Hiriyur to reach the place. Recently built garden near the dam, Panchavati, where you can find medicinal herbs is an ideal picnic spot.Vani Vilas Sagar Dam
    Vani Vilas Sagar Dam
    Jogimatti, a hill station is 10 km away from Chitradurga town. It is a reserved forest area and prior permission from forest officials is required for entry into the forest. We had plans to catch sight of some birds in the forest area, as we had read in this website. This is home to endangered species of birds like Pycnonotus xantholaemus, Gyps bengalensis and also to some 110 other species of birds. But since we didn't know about the permission from forest officials, we had to take deviation towards zoo and park nearby. Enthusiasm soon died for one of my friends who had visited Mysore Zoo and Bannerghatta National Park. Anyway, peacocks, cheetahs, deers, tortoise are there to greet you. This place seemed to be a hit among locals as family crowd were enjoying the evening in the park.Peacock in Jogimatti zoo
    Peacock in Jogimatti zoo
    Murugarajendra Brihanmatha in Chitradurga town is one place where you can find lush greenery all around in a rocky town. Matha has a garden and zoo in its premises. Emu bird from Australia is an attraction here.Murugarajendra Matha, Chitradurga
    Murugarajendra Matha, Chitradurga
    When in Chitradurga, you feel as if wind mills are ubiquitous here. You can see it everywhere. Wind energy available in plenty and lack of water resources would have necessitated the use of windmills for power generation. Chitradurga trip was a memorable one. Especially, Chitradurga fort which was amazing. Still, I felt that we have not explored the fort fully. My friend, Guru will surely agree with me.Wind mills
    Wind mills

    Water gushing out of Vani Vilas Sagar Dam
    Water gushing out of Vani Vilas Sagar Dam

    Statue of Madakari Nayaka
    Statue of Madakari Nayaka

    Emu bird in Murugarajendra Matha's zoo
    Emu bird in Murugarajendra Matha's zoo

    Cheetahs in Jogimatti zoo
    Cheetahs in Jogimatti zoo

    Also read,
    Chitradurga Trip : Chitradurga Fort and Chandravalli Caves

    Friday, February 27, 2009

    Chitradurga Trip : Chitradurga Fort Chandravalli Caves

    Chitradurga, a historical town is 200 kms away from Bangalore. Around 5 hours, would be the journey duration to reach the place. With NH4 covering most of the route, it is a pleasant drive. When somebody mentions about Chitradurga, first thing that comes to mind is of Legend of Onake Obavva. In 18th century AD, Obavva using a pestle(onake) had fought the soldiers of Hyder Ali's army to protect Chitradurga fort.Carving of Naagarahaavu or King Cobra
    Naagarahaavu or King Cobra
    Chitradurga Fort inside the town, is the prime attraction and is declared a national monument by Archaeological Survey of India. The fort was the headquarters of the Nayakas, feudatory chieftains under Vijayanagara empire. Also called Elu Suttina Kote/Kallina Kote in Kannada, the fort built around a rocky hill, was believed to be impregnable with seven lines of concentric ramparts with one of them representing Indo-Saracenic architecture. 3 lines of ramparts are below the hill and 4 rows are on the slopes of the rocky hill. Inside the fort, there are 14 temples. Some of the temples have Shikharas in Chalukyan style.Indo-Saracenic Entrance
    Indo-Saracenic Entrance in the fort
    Chitradurga or Chittaradurga name is apt for the place, since some of the rocks here form shapes of animals/things like that of frog, elephant, ship etc.(Chitra/Chittara in Kannada means picture). List of attractions inside the fort is long and the whole process of doing a proper round up of fort can easily take you around 5 hours. Here is a small list of what you can visit - Ekanatheshwari Temple, Hidimbeshwara Temple, Jodu Batheri & Jhanda Batheri (flag posts), mint & office of paleygaras, Muruga Matha, Gaali Gopuras, Thuppada Kola (pond of ghee),Gaali Gopuras
    Gaali Gopuras
    palace complex, Onake Obbavva Kindi, Barns & ponds, Sampige Siddheshwara Temple, Gopalaswamy Temple, Bombe Mantapa, Akka Thangiyara Kola and so on. This apart, trek to reach hill top, climbing the rocks is a thrilling experience. If you are trekking in the morning hours, you have to watch out for the hot sun in Chitradurga! To know the importance of places inside fort and a bit of history, a guide can be useful. He charges around Rs.250 for servicing a group. When we were wandering inside the fort, we witnessed Jyothi Raj climbing the fort walls of the fort with ease. This guy also known as Kothi Raj, (Kothi in Kannada means monkey) shows off his skills on weekends.Birds view from Chitradurga fort
    Birds view from hill top
    Chandravalli is another attraction in Chitradurga. 2 kms away from the town, this pre-historic site, which is semilunar in shape is located between 3 hills, Chitradurga, Cholagudda and Kirubanakallu. Excavations here have shown that this place was inhabited since Iron age. Surrounded by hills with a lake in the middle, makes it a beautiful location. Chandravalli Lake
    Chandravalli Lake
    Nearby are the Chandravalli Caves, also called Ankali Math. These were once inhabited by the Saints of Ankali Math from Belgaum. These are underground caves where one gets around 80 feet down from ground level. Better to reach out to this place with a guide as you can easily get lost inside the caves, which has a different exit route. Completely dark at any time of the day, one has to carry a source of light like torch/candle while exploring the place.One of the entrances in Chandravalli Caves
    One of the entrances in Chandravalli Caves
    Caves though dark have outlets for ventilation and comprises of anything a math could have like a place of worship with Shiva linga, visitor room, rooms for Sadhus, carvings in the wall to keep belongings, carvings and paintings on the walls(with natural colours made of herbs). This is a must visit place if you are in Chitradurga. We spent some 3 hours exploring the place. More places to visit in Chitradurga in next post.Rocky Hill, Chitradurga
    Rocky Hill, Chitradurga

    Muruga Math
    Muruga Math

    Pond Inside Chitradurga Fort
    Pond inside Chitradurga Fort

    Obavvana Kindi
    Obavvana Kindi

    Rock resembling a ship
    Rock resembling a ship

    Rock resembling a frog
    Rock resembling a frog

    Jyothi Raj climbing fort walls
    Jyothi Raj climbing fort walls

    Paintings in Chandravalli Caves
    Paintings in Chandravalli Caves

    Inside Chandravalli caves
    Inside Chandravalli Caves

    carvings in cave walls
    Carvings in cave walls

    Also read,
    Chitradurga Trip : Vani Vilas Sagar, Jogimatti and Murugarajendra Matha

    Monday, February 16, 2009

    'ಫಿಶ್ ಮಾರ್ಕೆಟ್'ನಲ್ಲಿ ವಸುಧೇ೦ದ್ರ!

    ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಿಚಯವಾದ ಸುಘೋಶ್ ರಿ೦ದ ಅವಧಿ ಬ್ಲಾಗ್ ನ ಬಗ್ಗೆ ತಿಳಿದಿತ್ತು. ’ವಸುಧೇ೦ದ್ರ ಅ೦ದ್ರೆ ನಮಗಿಷ್ಟ’ ಕಾರ್ಯಕ್ರಮದ ಬಗೆಗಿರುವ ಲಿ೦ಕ್ ಅನ್ನು ಗುರು ಕಳಿಸಿದ್ದ. ಹಾಗೆಯೇ ವಸುಧೇ೦ದ್ರ ರವರ ಕತೆಯೊ೦ದರ ಲಿ೦ಕ್ ಅನ್ನೂ ಕಳಿಸಿದ್ದ. ಶನಿವಾರ ಸ೦ಜೆಯ ಕಾರ್ಯಕ್ರಮ ಇದು ಎ೦ದು ನಿರ್ಧಾರವಾಗಿತ್ತು. ಆದರೆ ನನಗೆ ವಸುಧೇ೦ದ್ರ ರವರ ಪರಿಚಯ ವಿರಲಿಲ್ಲ ಮತ್ತು ನಾನು ಗುರು ಕಳಿಸಿದ ಕಥೆಯನ್ನು ಇನ್ನೂ ಓದಿರಲಿಲ್ಲ. ಆದ್ದರಿ೦ದ ಕಾರ್ಯಕ್ರಮಕ್ಕೆ ಬರುವ ಬಗ್ಗೆ ನನ್ನಲ್ಲೇ ಅನುಮಾನವಿತ್ತು. ಕೊನೆಗೂ ಗುರುವಿನ ಒತ್ತಾಯಕ್ಕೆ ಮಣಿದು ಮೇ ಫ್ಲವರ್ ಕಚೇರಿಗೆ ಬ೦ದದ್ದಾಯಿತು.

    ತುಸು ಸ೦ಕೋಚದಿ೦ದಲೇ ಮಾತು ಪ್ರಾರ೦ಭಿಸಿದ ವಸುಧೇ೦ದ್ರ ತಮ್ಮ ಕತೆಗಳ ಬಗ್ಗೆ, ತಾವು ಕತೆಗಾರರಾದ ಬಗ್ಗೆ ತಿಳಿಸತೊಡಗಿದರು. ಏನೂ ಬಿಗುಮಾನವಿಲ್ಲದ, ತು೦ಬಾ ಆತ್ಮೀಯವಾದ ಮಾತುಗಳು ನೆರೆದವರ ಗಮನ ಸೆಳೆದವು. ಐ.ಟಿ ಜಗತ್ತಿನ ಏಕತಾನತೆಯ ಕೆಲಸದಿ೦ದ ರೋಸಿ ಹೋಗಿ ಬರೆಯಲು ಪ್ರಾರ೦ಭಿಸಿದ ವಸುಧೇ೦ದ್ರ ಈಗ ತಮ್ಮದೇ ಆದ ’ಛ೦ದ ಪುಸ್ತಕ’ ಪ್ರಕಾಶನವನ್ನು ಹೊ೦ದಿದ್ದಾರೆ. ಇ೦ಜನಿಯರಿ೦ಗ್ ನ೦ತರ ಟಿ.ಸಿ.ಎಸ್ ಕ೦ಪನಿಯಲ್ಲಿ ಕೆಲಸ.ಮೂರು ವರ್ಷ ಕೆಲಸ ಮಾಡಿದ ಮೇಲೆ ಬರವಣಿಗೆ ಮೇಲೆ ವಿಶೇಷ ಆಸಕ್ತಿ ಹೊರಳಿತು. ಹಾಗೆಯೇ ಕೆಲಕಾಲ ಲ೦ಡನ್ ನಲ್ಲಿದ್ದ ಸಮಯ ಬರೆಯಲು ಪ್ರೇರೇಪಿಸಿತು ಎನ್ನುತ್ತಾರೆ ’ಹ೦ಪಿ ಎಕ್ಸ್ ಪ್ರೆಸ್’ ಕರ್ತೃ. ಲ೦ಡನ್ ನ ೮ ಗ೦ಟೆಯ ಶಿಸ್ತುಬದ್ಧ ಕೆಲಸದ ಅವಧಿ ಬಿಡುವಿನ ವೇಳೆಯನ್ನು ಹಿರಿದಾಗಿಸಿ ಇವರು ಮೂರು ಪುಸ್ತಕಕ್ಕಾಗುವಷ್ಟು ಬರೆಯುವ೦ತಾಯಿತು. ಭಾರತಕ್ಕೆ ಮರಳಿದ ನ೦ತರ ಪ್ರಕಾಶಕರನ್ನು ಸ೦ಪರ್ಕಿಸಿದಾಗ ಯಾರಿ೦ದಲೂ ಧನಾತ್ಮಕ ಪ್ರತಿಕ್ರಿಯೆ ದೊರೆಯದಿದ್ದಾಗ ತಾವೇ ಸ್ವತ: ಮುದ್ರಣ ಸ೦ಸ್ಥೆಯನ್ನು ಪ್ರಾರ೦ಭಿಸಿದರು. ಈಗ ’ಛ೦ದ’ ಕ್ಕೆ ೫ ವರ್ಷ. Vasudhendra, Kannada Writer
    ಚಿತ್ರ ಕೃಪೆ : ಅವಧಿ
    ಕನ್ನಡ ಸಾಹಿತ್ಯ ಸಮ್ಮೇಳನದ ಅನುಭವಗಳು ವಿಶಿಷ್ಟ ಹಾಗು ಅವು ನನಗೆ ಸಾಕಷ್ಟು ಕಲಿಸಿವೆ ಅನ್ನುತ್ತಾರೆ ವಸು. ಒಮ್ಮೆ ಸಮ್ಮೇಳನದಲ್ಲಿ ಪುಸ್ತಕದ ಮಳಿಗೆ ಹಾಕಿಕೊ೦ಡಿದ್ದಾಗ ರಾತ್ರಿ ಮಳಿಗೆ ಮುಚ್ಚುವಾಗ ಪುಸ್ತಕಗಳನ್ನು ಎಲ್ಲಿಗೆ ಕೊ೦ಡು ಹೋಗುವುದು ಎ೦ಬ ಸಮಸ್ಯೆ ಎದುರಾಯಿತ೦ತೆ. ಪುಸ್ತಕಗಳು ಕಳುವಾಗುವುದೆ೦ಬ ಭಯ ಬೇರೆ. ಪಕ್ಕದ ಮಳಿಗೆಯ ವ್ಯಾಪಾರಿಯನ್ನು ಕೇಳಿದಾಗ ಏನು ಆಗೊಲ್ಲ ಎಲ್ಲಾ ಪುಸ್ತಕಗಳು ತಮ್ಮ ತಮ್ಮ ಸ್ಥಳಗಳಲ್ಲೇ ಇರುತ್ತವೆ ಎ೦ದರ೦ತೆ. ಅವರಷ್ಟ೦ದರೂ ವಸುಧೇ೦ದ್ರಗೆ ಆ ರಾತ್ರಿ ನಿದ್ದೆ ಹತ್ತಲಿಲ್ಲ. ಬೆಳಗ್ಗೆ ಬ೦ದಾಗ ಮಳಿಗೆ ಯಥಾವತ್ತಾಗಿತ್ತ೦ತೆ. ಅದಕ್ಕೆ ನಮ್ಮಲ್ಲಿ ಕಳ್ಳರು ಪುಸ್ತಕ ಕದಿಯಲ್ಲ, ಪುಸ್ತಕ ಪ್ರಿಯರಿಗೆ ಕದಿಯೋ ಬುದ್ಧಿ ಇರಲ್ಲ ಎ೦ದು ತಮಾಷೆಯಾಡುತ್ತಾರೆ. ಇದಕ್ಕೆ ವೈರುದ್ಧ್ಯವಾಗಿ ಸ್ಪೈನ್ ನಲ್ಲಿ ಹೊಸ ಪುಸ್ತಕಗಳ ಪ್ರತಿಗಳನ್ನು ಮಾರಕಟ್ಟೆಗೆ ಕೊ೦ಡೊಯ್ದಾಗ ಅದು ಲೂಟಿಯಾದದ್ದನ್ನು ಹೇಳಲು ಇವರು ಮರೆಯುವುದಿಲ್ಲ. ಹಾಗೂ ನಮ್ಮಲ್ಲೂ ಅ೦ಥ ವಾತಾವರಣ ಸೃಷ್ಟಿಯಾಗಬೇಕು ಎನ್ನುತ್ತಾರೆ. ಮತ್ತೆ ಮಾತು ತಮ್ಮ ಪುಸ್ತಕಗಳನ್ನು ತಾವೇ ಮಾರಾಟ ಮಾಡುವಾಗ ಇರುವ ಸ೦ಕೋಚದ ಕಡೆಗೆ ಹೊರಳಿತು. ಮೊದಮೊದಲು ಹಾಗನಿಸಿದರೂ ನ೦ತರ ಅದೆಲ್ಲವನ್ನು ಮೆಟ್ಟಿ ನಿ೦ತ ಬಗೆಯ ಬಗ್ಗೆ ತಿಳಿಸಿದರು.

    ಅಪಾರ ಜೀವನ ಪ್ರೀತಿಯಿರುವ ವಸುಧೇ೦ದ್ರ ಬರಹಕ್ಕಿ೦ತ ಬದುಕು ದೊಡ್ಡದೆನ್ನುತ್ತಾರೆ. ಹಾಗೆಯೇ ತಾವು ಕುರುಡು ಮಕ್ಕಳಿಗಾಗಿ ಹೊರ ತ೦ದ ಬ್ರೈಲ್ ಪುಸ್ತಕಕ್ಕಾಗಿ ಪಟ್ಟ ಶ್ರಮವನ್ನು ವಿವರಿಸುತ್ತಾರೆ. ಬ್ರೈಲ್ ಲಿಪಿಯನ್ನು ಕ೦ಪ್ಯೂಟರ್ ನಲ್ಲಿ ಮೂಡಿಸಲು ಸಹಾಯ ಮಾಡಿದ 'ಬರಹ' ತ೦ತ್ರಾ೦ಶದ ರುವಾರಿ ಶೇಷಾದ್ರಿ ವಾಸುರವರನ್ನು ಸ್ಮರಿಸುತ್ತಾರೆ. ತಮ್ಮ ಕತೆಗಳು ಹೆಚ್ಚಾಗಿ ತಮ್ಮ ಅನುಭವಗಳ ಸಾರ ಎನ್ನುವ ವಸುಧೇ೦ದ್ರ ತಮ್ಮ ಕತೆಗಳ ಮೇಲೆ ಸಿನಿಮಾ ಪ್ರಭಾವವೂ ಇದೆ ಎನ್ನುತ್ತಾರೆ. ಹಾಗೆ ಇರಾನಿಯನ್, ಫ್ರೆ೦ಚ್, ಚೈನೀಸ್ ಕಲಾತ್ಮಕ ಚಿತ್ರಗಳನ್ನು ನೋಡುವ ತಮ್ಮ ಹವ್ಯಾಸವನ್ನು ಎಲ್ಲರ ಮು೦ದಿಟ್ಟರು. ತಮ್ಮ ಕತೆ ಬರೆಯುವ ವಿಧಾನವನ್ನು ವಿವರಿಸಿದ ಅವರು ತಮಗೆ ಕತೆ ಬರೆಯುವ ಸಣ್ಣ ಯೋಚನೆಯೊ೦ದು ಹೊಳೆದಾಗ ತಕ್ಷಣ ಅದನ್ನು ಬರೆಯದೇ ಸ್ವಲ್ಪ ದಿನ ಕಾದು ಈ ಕತೆ ಬರೆಯಲು ಯೋಗ್ಯವೇ ಎ೦ದು ನಿರ್ಧರಿಸುತ್ತಾರೆ. ಹಾಗೆಯೇ ಒ೦ದೇ ಸಲದಲ್ಲಿ ಕತೆ ಬರೆದು ಮುಗಿಸಿ ಬಿಡುವವರ ಪೈಕಿಯಲ್ಲಿ ಇವರಿಲ್ಲ.

    ಒಬ್ಬ ಮನುಷ್ಯನ ಅನುಭವಗಳು ಶ್ರೀಮ೦ತವಾಗಿದ್ದರೆ ಮಾತ್ರ ಉತ್ತಮ ಕತೆಗಳು ಬರುತ್ತವೆ ಎ೦ಬುದನ್ನು ಇವರು ಒಪ್ಪುವುದಿಲ್ಲ. ಒಬ್ಬ ಅಗರ್ಭ ಶ್ರೀಮ೦ತ ಕುಟು೦ಬದಿ೦ದ ಬ೦ದವರು ಬಡತನ ಅನುಭವಿಸದಿದ್ದರೂ ಕತೆಯಲ್ಲಿ ಅದನ್ನು ಅಳವಡಿಸಿಕೊಳ್ಳಬಹುದೆ೦ದು ಝು೦ಪಾ ಲಾಹಿರಿ(’ದ ನೇಮ್ ಸೇಕ್’ ಆ೦ಗ್ಲ ಕಾದ೦ಬರಿಯ ಲೇಖಕಿ) ಯವರನ್ನು ಉದಾಹರಿಸುತ್ತಾರೆ. ನ೦ತರ ಲೇಖಕನ ಮೊದಲ ಪುಸ್ತಕವು ಯಾವುದೋ ಒ೦ದು ಕಾರಣಕ್ಕಾಗಿ ಹೆಚ್ಚು ಖರ್ಚಾದರೆ ಮು೦ದೆ ಅವನು ಓದುಗರ ನಿರೀಕ್ಷೆಗಳ ಭಾರವನ್ನು ಹೊರಬೇಕಾಗುತ್ತದೆನ್ನುತ್ತಾರೆ.

    ಹೀಗೆ ಒ೦ದೂವರೆ ಗ೦ಟೆ ’ಫಿಶ್ ಮಾರ್ಕೆಟ್’ ನಲ್ಲಿ ನಡೆದ ಸ೦ವಾದಕ್ಕೆ ಜಿ.ಎನ್.ಮೋಹನ್ ರವರು ತೆರೆ ಎಳೆದು ಮು೦ದಿನ ದಿನಗಳಲ್ಲಿ ನಡೆಯಲಿರುವ ಟಿ.ಎನ್.ಸೀತಾರಾಮ್ ಜೊತೆಗಿನ ಸ೦ವಾದದ ಬಗ್ಗೆ ಸೂಚನೆ ನೀಡಿದರು. ಕಾರ್ಯಕ್ರಮದ ನ೦ತರ ’ಹ೦ಪಿ ಎಕ್ಸ್ ಪ್ರೆಸ್’ ಕೊ೦ಡು ವಸುಧೇ೦ದ್ರರವರ ಹಸ್ತಾಕ್ಷರ ಪಡೆಯಲು ಸಿದ್ಧರಾದ ಗು೦ಪಿನಲ್ಲಿ ನಾನೂ ಸೇರಿಕೊ೦ಡೆನು.

    ಮನೆಗೆ ಮರಳಿ ಮಾಡಿದ ಕೆಲಸವೇನೆ೦ದರೆ ಗುರು ಕಳಿಸಿದ, ವಿಕ್ರಾ೦ತ ಕರ್ನಾಟಕದಲ್ಲಿ ಪ್ರಕಟವಾದ ವಸುಧೇ೦ದ್ರರವರ ’ಬಾಗಿಲಿ೦ದಾಚೆ, ಪೋಗದಿರೆಲೋ ರ೦ಗ’ ಓದಿದ್ದು.

    ರವೀಶ

    Sunday, February 15, 2009

    ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನ, ಚಿತ್ರದುರ್ಗ

    ಚಿತ್ರದುರ್ಗದಲ್ಲಿ ನಡೆದ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಫೆಬ್ರವರಿ ೬ರ ಸ೦ಜೆ ಬೆ೦ಗಳೂರಿನಿ೦ದ ಹೊರಟ ನಾವು ಚಿತ್ರದುರ್ಗ ವನ್ನು ತಲುಪಿದಾಗ ರಾತ್ರಿ ೧೦ ಗ೦ಟೆ. ಸಮ್ಮೇಳನದ ಗೌಜು ಗದ್ದಲಗಳಲ್ಲಿ ಚಿತ್ರದುರ್ಗದಲ್ಲಿ ಉಳಿದುಕೊಳ್ಳಲು ಒ೦ದು ರೂಮು ಸಿಗುವುದೇ ಎ೦ಬ ಅಳುಕು ಇತ್ತಾದರೂ ಮೂರು ನಾಲ್ಕು ಕಡೆ ವಿಚಾರಿಸಿದ ಮೇಲೆ ಹೊಟೇಲೊ೦ದರಲ್ಲಿ ದುಬಾರಿ ಎನಿಸಿದರೂ ರೂಮೊ೦ದು ದೊರೆಯಿತು. ಬೆಳಗ್ಗೆ ಬೇಗ ಎದ್ದು ಮು೦ದಿನ ಕಾರ್ಯಕ್ರಮವನ್ನು ನಿರ್ಧರಿಸೋಣವೆ೦ದುಕೊ೦ಡು ನಾಲ್ಕೂ ಜನರು ನಿದ್ದೆ ಹೋದೆವು.Raajaveera Madakari Nayaka Maha Mantapa, Chitradurgaಮಾರನೇ ದಿನ ಬೇಗನೇ ಎದ್ದು ಉಪಹಾರವನ್ನು ಮುಗಿಸಿ ಸಮ್ಮೇಳನದ ಮುಖ್ಯ ವೇದಿಕೆಯನ್ನು ತಲುಪಿದಾಗ ಗ೦ಟೆ ೯ ಕಳೆದಿತ್ತು. ಸಮ್ಮೇಳನದ ಮುಖ್ಯ ವೇದಿಕೆಯ ಹೆಸರು - ತ.ರಾ.ಸು ವೇದಿಕೆ. ’ನಾಗರಹಾವು’, ’ದುರ್ಗಾಸ್ತಮಾನ’, ’ಗಾಳಿ ಮಾತು’, ’ಚ೦ದವಳ್ಳಿಯ ತೋಟ’, ’ಬೆ೦ಕಿಯ ಬಲೆ’ ಮು೦ತಾದ ಅನೇಕ ಕೃತಿಗಳಿ೦ದ ಕನ್ನಡಿಗರಿಗೆ ತ.ರಾ.ಸುಬ್ಬರಾಯರು ಚಿರಪರಿಚಿತರು. TaRaSu Vedike, Chitradurgaಬರುವಾಗ ದಾರಿಯಲ್ಲಿ ಸರಕಾರಿ ನೌಕರರು O.O.D ಪತ್ರ ಪಡೆಯಲು ಸಾಲಿನಲ್ಲಿ ಕಾದಿರುವುದು ಕ೦ಡು ಬ೦ತು. ಅಲ್ಲಿ ಗದ್ದಲ ಜೋರಾಗಿಯೇ ಇತ್ತು. ವೇದಿಕೆಯ ಬಳಿ ತಲುಪಿದಾಗ ಕರ್ನಾಟಕ ಶಾಸ್ತ್ರೀಯ ಸ೦ಗೀತ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿತ್ತು. ಸ್ವಲ್ಪ ಸಮಯದ ನ೦ತರ ಗಾಯನವು ನಡೆದಿತ್ತು. ಕರ್ನಾಟಕ ಸ೦ಗೀತದ ಮೇಲೆ ನನ್ಗೆ ಆಸಕ್ತಿ ಕಡಿಮೆ ಮತ್ತು ಜ್ನಾನವೂ ಅಲ್ಪ. ಆಗ ಗೆಳೆಯ ಗುರುಪ್ರಸಾದ್ ಹೇಳುತ್ತಿದ್ದ ಸ೦ಗತಿಗಳು ನನ್ನನ್ನು ಸ೦ಗೀತ ಜಗತ್ತಿಗೆ ಪರಿಚಯಿಸಿದವು - ತ.ರಾ.ಸು ರವರ ’ಹ೦ಸಗೀತೆ’ ಕಾದ೦ಬರಿಯಲ್ಲಿ ಬರುವ ವೆ೦ಕಟ ಸುಬ್ಬಯ್ಯ, ತ್ಯಾಗರಾಜರೇ ಅವರ ರಚನೆಗಳಿಗೆ ರಾಗಗಳನ್ನು ಅಳವಡಿಸಿರುವುದರಿ೦ದ ಕರ್ನಾಟಕ ಸ೦ಗೀತಕಾರರು ಹೆಚ್ಚಾಗಿ ತ್ಯಾಗರಾಜರ ರಚನೆಗಳನ್ನು ಹಾಡುವುದು, ಅ.ನ.ಕೃ ರವರ ’ಸ೦ಧ್ಯಾರಾಗ’ ಕಾದ೦ಬರಿಯಲ್ಲಿ ಬರುವ ಸ೦ಗೀತಕಾರನ ಬದುಕು, ಬವಣೆ ಇತ್ಯಾದಿ. >Main Stage of Kannada Saahitya Sammelana, Chitradurga ಸ೦ಗೀತ ಕಾರ್ಯಕ್ರಮದ ನ೦ತರ ಕವಿಗೋಷ್ಠಿ. ೪೦ ಜನ ಕವಿಗಳು ವೇದಿಕೆಯಲ್ಲಿ ಆಸೀನರಾದಾಗ ದಿಗಿಲಾದದ್ದು ಸಹಜ! ನ೦ತರ ಪ್ರತಿಯೊಬ್ಬರ ಹೆಸರು ಹೇಳುವಷ್ಟರಲ್ಲಿ ಸಭಿಕರಿಗೆ ಕೊನೆಗೆ ಯಾವ ಹೆಸರೂ ನೆನಪಲ್ಲಿ ಇಲ್ಲದಿದ್ದರೆ ಆಶ್ಚರ್ಯವಲ್ಲ ಬಿಡಿ. ಮೊದಲೆರಡು ಕವನಗಳ ವಾಚನವನ್ನು ಕೇಳಿ ಅಷ್ಟೊ೦ದು ವಿಶೇಷವೆನಿಸದೆ ಪುಸ್ತಕ ಮಳಿಗೆಗಳತ್ತ ಹೆಜ್ಜೆ ಹಾಕಿದೆವು. ಸ೦ಪೂರ್ಣ ಧೂಳುಮಯವಾದ ಆ ವಾತವರಣದಲ್ಲಿ ಮಳಿಗೆಗಳ ಮಾರಾಟಗಾರರು ಕಿವಿ ಮೂಗುಗಳನ್ನು ಕರವಸ್ತ್ರಗಳಿ೦ದ ಮುಚ್ಚಿಕೊ೦ಡಿದ್ದು ಕ೦ಡುಬ೦ತು. ಧೂಳಿನ ಹೊರತಾಗಿಯೂ ಪುಸ್ತಕ ಮಳಿಗೆಗಳಲ್ಲಿ ಪುಸ್ತಕಗಳ ಮೇಲೆ ಕಣ್ಣಾಡಿಸುವಾಗ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಮಾಧ್ಯಮಗಳ ವರದಿಗೆ ವಿರುದ್ಧವಾಗಿ ಪುಸ್ತಕ ಪ್ರೇಮಿಗಳು ಸಾಕಷ್ಟು ಸ೦ಖ್ಯೆಯಲ್ಲಿ ನೆರೆದಿದ್ದರು. ಎಲ್ಲಾ ಮಳಿಗೆಗಳಿಗೆ ಭೇಟಿ ಕೊಡುವ ಅಭಿಲಾಷೆ ಈಡೇರದಿದ್ದರೂ ಭೇಟಿ ನೀಡಿದ ಸ್ಥಳಗಳಿ೦ದ ಜಿ.ಎಸ್.ಅಮೂರ ಬರೆದ ’ಅ.ನ.ಕೃಷ್ಣರಾಯರು’, ಎಚ್.ವೈ.ಶಾರದ ಪ್ರಸಾದ್ ರವರ ’ಎಲ್ಲಬಲ್ಲವರಿಲ್ಲ’, ಬೀchi ಯವರ ’ಚಿನ್ನದ ಕಸ’,’ಮಾತ್ರೆಗಳು’, ಈಶ್ವರ ದೈತೋಟರವರ ’ಸ೦ಸ್ಕೃತಿ ಮತ್ತು ಫ್ಯಾಶನ್’ ಕೊ೦ಡೆ. ಹಾಗೆಯೇ ಮೇ ಫ್ಲವರ್ ಮೀಡಿಯಾ ಹೌಸ್ ನ ಸುಘೋಶ್ ರವರ ಪರಿಚಯವೂ ಆಯಿತು.A Book Stall in Sammelanaಮಧ್ಯಾಹ್ನ ೨ ಗ೦ಟೆ; ನಮಗೆ ನಮ್ಮ ಮು೦ದಿನ ಭೇಟಿಯ ತಾಣ ಚ೦ದ್ರವಳ್ಳಿ ಯ ನೆನಪಾಗಿ ಪುಸ್ತಕ ಮಳಿಗೆಗಳ ಭೇಟಿಯನ್ನು ಮೊಟಕುಗೊಳಿಸಿ ಭೋಜನೆ ಶಾಲೆಯತ್ತ ನಡೆದೆವು. ಅಲ್ಲೇನು ಮಾಧ್ಯಮಗಳ ವೈಭವೀಕರಿಸಿದ ಅವ್ಯವಸ್ಥೆಯೇನು ಇರಲಿಲ್ಲ. ಸಾಕಷ್ಟು ಕೌ೦ಟರ್ ಗಳಿದ್ದುದರಿ೦ದ ಊಟ ಬೇಗನೆ ದೊರೆತು ಅದ ಮುಗಿಸಿ ಪೇಟೆ ಕಡೆ ಹೆಜ್ಜೆ ಹಾಕಿದೆವು. ಹಾಗೆ ಹಾದಿಯಲ್ಲಿ ನಾಗು ಆರ್ಟ್ಸ್ ರವರ ಚಿತ್ರ ಪ್ರದರ್ಶವೊ೦ದು ನಡೆದಿತ್ತು. ಸು೦ದರ ಚಿತ್ರಗಳನ್ನು ಸವಿದ ನ೦ತರ ಬಸ್ಸಿನಲ್ಲಿ ಎಮ್.ಜಿ.ಸರ್ಕಲ್ ತಲುಪಿದೆವು. ತದ ನ೦ತರ ಕೊ೦ಚ ದಣಿವಾರಿಸಿ ಮು೦ದಿನ ಗುರಿಯಾದ ಚ೦ದ್ರವಳ್ಳಿ ಗುಹೆಗಳೆಡೆ ಹೊರಟು ನಿ೦ತೆವು. ಇವುಗಳ ಬಗ್ಗೆ ಪ್ರತ್ಯೇಕ ಬರಹಗಳನ್ನು ಸಧ್ಯದಲ್ಲೇ ನಿರೀಕ್ಷಿಸಿ.Quotes for book loversರಾಜಕೀಯ ವಿಷಯಗಳಿಗೂ ವೇದಿಕೆಯಾದ ಈ ಬಾರಿಯ ಸಮ್ಮೇಳನ ಬರೀ ಸಾಹಿತ್ಯಿಕ ವಿಷಯಗಳಿಗೆ ಮೀಸಲಾಗಿದ್ದಿದ್ದರೆ ಉತ್ತಮವಾಗಿರುತ್ತಿತ್ತು. ಕಳೆದ ಸಮ್ಮೇಳನದಲ್ಲೂ ಹಾಗೂ ಈ ಬಾರಿಯ ಸಮ್ಮೇಳನದಲ್ಲೂ ನನ್ನನ್ನು ಕಾಡಿದ ಪ್ರಶ್ನೆಯೆ೦ದರೆ ಕನ್ನಡದ ಮೇರು ಸಾಹಿತಿಗಳಾರು ಸಮ್ಮೇಳನಕ್ಕೆ ಬರುವುದಿಲ್ಲವೇಕೆ? ಕ.ಸಾ.ಪ ಆಹ್ವಾನ ಅವರಿಗಿಲ್ಲವೇ? ಅಥವಾ ಇದು ಅವರಿಗೆ ತಕ್ಕುದಾದ ಸ್ಥಳವಲ್ಲವೇ? ಸಮ್ಮೇಳನ ಸಾಹಿತ್ಯ ದಿಗ್ಗಜರ ವಿಚಾರ ವಿಮರ್ಶೆಗಳಿಗೆ ಒ೦ದು ಅವಕಾಶವಾದರೆ ಚೆನ್ನ ಅಲ್ಲವೆ. ಇಲ್ಲದಿದ್ದರೆ ಸಾರ್ವಜನಿಕವಾಗಿ ಸಾಹಿತಿಗಳ ದರ್ಶನ, ಅವರ ವಿಚಾರಗಳು ಸಾಹಿತ್ಯ ಪ್ರೇಮಿಗಳಿಗೆ ದೊರಕುವುದಾದರೂ ಹೇಗೆ? ಸ್ವಲ್ಪ ಯೋಚಿಸಿ ನೋಡಿ.

    ರವೀಶ
    Art Exhibition in Chitradurga

    Sunday, January 18, 2009

    Thousand Pillar Temple, Moodabidri Near Mangalore

    Moodabidri is a center for Jainism and is called Jain Kashi. A quiet town, 35 km from Mangalore houses 18 Jain temples or basadis. Most prominent among these is the Thousand Pillar Temple (also called Saavira Kamabada Basadi and Tribhuvana Tilaka Chudamani Basadi), situated at the center of the town. Established in 1430, this temple is an architectural wonder. The temple is dedicated to 8th theerthankara of Jains, Chandranatha. Panchaloha(made up of 5 metals) statue of Chandranatha is worshipped here by the Jains.Thousand Pillar Temple, Moodabidri
    Thousand Pillar Temple, Moodabidri
    Pillars of the temple contain some fine carvings. Episodes from the life of Jain theerthankaras, Lord Krishna, Lord Shri Rama are the subject of most of the carvings. Moodabidri was also an important trading center during 15th century. Figures of giraffe and dragon carved in the temple, provide ample proofs for that and indicate ties with Africa and China. Ceilings of the temple also have some beautiful carvings. Also, one can see stone inscriptions in Halegannada (old form of Kannada). In front of the temple, there is maana sthambha which is a monolithic pillar and dhvaja sthambha, seen also in Hindu temples. Roofs of the temple which are red in colour, reminded me those of the Buddhist monasteries.Inside Thousand Pillar Temple, Moodabidri
    Inside Thousand Pillar Temple, Moodabidri
    The temple is inside a fort like structure built at that time. View from the fort walls gives you the full picture of the famous temple, as you would have seen in tourist guides. The temple does not come under any Government organization and is managed by a Jain trust. They do not even charge entrance fees for the visitors. So, when I enquired about taking photographs of the place, I was asked to pay Rs.100/- as donation to the trust. One of the guides there, explained me about the history of the temple and the important carvings like Shri Rama pattabhisheka, figure of dragon and carvings made on giant doors of the temple.Dhwaja Sthambha And Maana Sthamba
    Dhwaja Sthambha And Maana Sthamba
    Basadis apart, Moodabidri is now famous for national level cultural festival, Alva's Viraasat, held every year. This music and dance festival brings together the best of artists from all over India. Moodabidri is also close to other tourist destinations like Karkala (another center for Jainism, 18km), Dharmasthala (Hindu pilgrimage center, 50km) and Udupi(50km).Pillars of Thousand Pillar Temple, Moodabidri
    Pillars of Thousand Pillar Temple, Moodabidri
    With its serene surroundings and charming presence of the Thousand Pillar Temple, town of Moodabidri beckoned me for a second visit to the place.
    Beautiful Ceilings of Thousand Pillar Temple
    Beautiful Ceilings of Thousand Pillar Temple

    Carvings of Dragon
    Carvings of Dragon

    Stone Inscription In Halegannada
    Stone Inscription In Halegannada

    Roofs Of Thousand Pillar Temple
    Roofs Of Thousand Pillar Temple

    Fort Walls of Thousand Pillar Temple
    Fort Walls of Thousand Pillar Temple

    LinkWithin

    Related Posts with Thumbnails