Monday, January 22, 2007

ಪ್ರಾಥಮಿಕ ಶಿಕ್ಷಣವೂ, ಆಂಗ್ಲ ಭಾಷೆಯೂ

ಅಂತೂ ಇ೦ತೂ ಈ ವರ್ಷದಿ೦ದ ಕರ್ನಾಟಕದಲ್ಲಿ ಆಂಗ್ಲ ಭಾಷೆಯನ್ನು ಎಲ್ಲಾ ಶಾಲೆಗಳಲ್ಲೂ ಒ೦ದನೇ ತರಗತಿಯಿಂದಲೇ ಬೋಧಿಸಲು ಸರಕಾರ ಮು೦ದಾಗಿದೆ. ಹೀಗೆ ಮೇಲ್ನೋಟಕ್ಕೆ ಇದರ ಬಗ್ಗೆ ಇದ್ದ ವಿವಾದಗಳಿಗೆ ತೆರೆ ಬಿದ್ದಂತಾಗಿದೆ. ಈ ಹಿಂದಿನ ವಿವಾದಗಳಲ್ಲಿ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದವರೆಲ್ಲರೂ ಭಾಗಿಯಾಗಿದ್ದರು ಎ೦ದರೆ ಅತಿಶಯೋಕ್ತಿಯಾಗಲಾರದು. ಇದರ ಜೊತೆಗೆ ಇತರೆ ಭಾಷಾ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬೋಧಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ.

ಇಲ್ಲಿ ವಾದ-ಪ್ರತಿವಾದಗಳ ಮುಖ್ಯ ಅಂಶಗಳನ್ನು ಗಮನಿಸಬೇಕು. ಭಾಷೆ-ಸಂಸ್ಕೃತಿಯ ಬಗ್ಗೆ ಮುಂದಿನ ಪೀಳಿಗೆಯಲ್ಲಿ ಅರಿವು ಮೂಡಿಸಲು, ಗೌರವಿಸಲು ಪಾಠಶಾಲಾ ಕಲಿಕೆ ಮೊದಲ ಹೆಜ್ಜೆ. ನಾಡು-ನುಡಿವಿನ ಬಗ್ಗೆ ಅರಿವು, ಆದರ ಹೀಗೆ ಬಾಲ್ಯದಲ್ಲಿ ಆರಂಭವಾಗುತ್ತದೆ. ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಆ೦ಗ್ಲಮಾಧ್ಯಮದಲ್ಲಿ ಓದಿಸಲು ಮು೦ದಾಗುತ್ತಾರೆ. ಇದು ಇ೦ದಿನ ಅಗತ್ಯ ಕೂಡ. ಆಂಗ್ಲ ಭಾಷೆ ಇ೦ದಿನ ಜಾಗತೀಕರಣದ ಯುಗದಲ್ಲಿ ಯಶಸ್ಸಿನ ಹಲವು ಸೂತ್ರಗಳಲ್ಲಿ ಒ೦ದಾಗಿರುವುದು ಇದಕ್ಕೆ ಕಾರಣವಿರಬಹುದು. ಇದಕ್ಕೇ ಇರಬೇಕು ಆರ್ಥಿಕವಾಗಿ ದುರ್ಬಲರೂ ಕೂಡ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಕಲಿಸಲು ಮು೦ದಾಗಿರುವುದು.

ಸಾಮನ್ಯವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲಿ ಕಾಲೇಜು ಸೇರುವಾಗ ಅಥವಾ ನ೦ತರ ಕೆಲಸ ಹುಡುಕುವಾಗ ಆಂಗ್ಲ ಮಾಧ್ಯಮದಲ್ಲಿ ಓದಿದವರಿಗಿಂತ ತಾವು ಕಡಿಮೆಯೇನೋ ಎ೦ದೆನಿಸಿ ಕೀಳರಿಮೆ, ಆತ್ಮವಿಶ್ವಾಸದ ಕೊರತೆ ಕಂಡುಬರುತ್ತದೆ. ಅದಕ್ಕೆ ಸರಕಾರದ ಈ ಕ್ರಮ ಪರಿಹಾರವಾಗಬಹುದೇನೋ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಕಂಡುಬರುವ ತಾರತಮ್ಯ ಹೀಗೆ ಕಡಿಮೆಯಾದರೆ ಸಂತೋಷ. ಹಾಗೇಯೇ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಮಾಧ್ಯಮವಾಗಿರಲಿ. ನಮ್ಮ ಹಲವಾರು ಹೆಸರಾಂತ ವಿಜ್ನಾನಿಗಳು, ಸಾಧಕರು ಆಂಗ್ಲ ಮಾಧ್ಯಮ ದಲ್ಲಿ ಓದಿದವರಲ್ಲ. ಸಾಧನೆಗೆ ಜ್ನಾನ ಮುಖ್ಯವೇ ಹೊರತು ಭಾಷೆಯಲ್ಲ. ಭಾಷೆಯು ಅಭಿವ್ಯಕ್ತಪಡಿಸುವ ಮಾಧ್ಯಮವಷ್ಟೆ.

ಕೊನೆಯಲ್ಲೊಂದು ಮಾತು. ಭಾರತದ ಇಂದಿನ ಶಿಕ್ಷಣ ಪದ್ಧತಿಯ ಹರಿಕಾರ, ಮೆಕಾಲೆ ಬ್ರಿಟಿಷ್ ಸಂಸತ್ತಿಗೆ ನೀಡಿದ ವಿವರಣೆಯಲ್ಲಿ ಹೀಗೆ ಹೇಳಿದ್ದಾನೆ : "ಭಾರತದಂತಹ ಸಂಪತ್ಭರಿತ, ಉನ್ನತ ಮೌಲ್ಯಗಳುಲ್ಲ ಜನರಿರುವ ದೇಶವನ್ನು ನಾವು ಜಯಿಸುವುದು ಅಸಾಧ್ಯವೆನಿಸುತ್ತಿದೆ. ನಾವಿಲ್ಲಿ ನಮ್ಮ ಪ್ರಭುತ್ವ ಸಾಧಿಸಬೇಕಾದರೆ ಈ ದೇಶದ ಸನಾತನ ಶಿಕ್ಷಣ ಪದ್ಧತಿಯನ್ನು ಬದಲಾಯಿಸಬೇಕು. ಎಂದು ಭಾರತೀಯರು ತಮ್ಮ ಭಾಷೆ, ಸಂಸ್ಕೃತಿಗಿಂತ ಆಂಗ್ಲ ಭಾಷೆ, ಪಾಶ್ಚ್ಯಾತ್ಯ ಸಂಸ್ಕೃತಿ ಶ್ರ್‍ಏಷ್ಠವೆಂದು ಭಾವಿಸುವರೋ ಅಂದು ಅವರು ತಮ್ಮ ಸಂಸ್ಕೃತಿ, ಸ್ವಾಭಿಮಾನವನ್ನು ಮರೆತು ನಮ್ಮ ಗುಲಾಮರಾಗುವರು." ಪಾಶ್ಚ್ಯಾತ್ಯದ್ದೆಲ್ಲವೂ ಶ್ರ್‍ಏಷ್ಠವೆಂದು ಭಾವಿಸುವವರಿಗೆ ಈ ಸತ್ಯ ಕಣ್ತೆರೆಸಬೇಕು. ಮೆಕಾಲೆಯು ತನ್ನ ಈ ಪ್ರಯತ್ನದಲ್ಲಿ ಗುಮಾಸ್ತರ ದೇಶವೊಂದನ್ನು ಸೃಷ್ಟಿಸಿದ ಎಂಬ ಮಾತಿದೆ. ಈಗಿನ ಹೊರ ಗುತ್ತಿಗೆ ಉದ್ಯಮವೂ ಇದಕ್ಕೆ ಅಪವಾದವಾಗಲಾರದು. ಬ್ರಿಟಿಷರಿಂದ ಸ್ವತಂತ್ರರಾಗಿ ೬೦ ವರ್ಷಗಳಾದರೂ ಅವರ ಭಾಷೆಗೆ, ಪ್ರಾರಂಭಿಸಿದ ವ್ಯವಸ್ಥೆಗೆ ಜೋತು ಬಿದ್ದಿರುವುದು ಕಂಡುಬರುತ್ತದೆ. ಇನ್ನಾದರು ನಮ್ಮಲ್ಲಿ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಬೇಕು. ಹಾಗೆಯೇ ಕಾಲಕ್ಕನುಗುಣವಾಗಿ ನಮ್ಮ ವೃತ್ತಿ ಕೌಶಲವನ್ನು ಹೆಚ್ಚಿಸಕೊಳ್ಳಬೇಕು. ಆದರೆ ಇದೆಲ್ಲವೂ ನಮ್ಮ ಭಾಷೆ, ಸಂಸ್ಕೃತಿಯನ್ನು ತ್ಯಜಿಸಿಯಲ್ಲ.

3 comments:

  1. Agreed. All govt moves are oftem politically motivated for short term gain. Governments should operate with long term vision, though it doesn't gain immediate political mileage. Unfortunately most of the govts dont dare to do that

    ReplyDelete
  2. This article analyses the situation in both perspectives of mother tongue as a medium of instruction in primary classes and not necessarily govt. moves

    ReplyDelete
  3. ಹೌದು. ಮೊದಲನೆಯದಾಗಿ, ಸರ್ಕಾರ ಕನ್ನಡವನ್ನು ಕಾಪಾಡುವುದೇ ಆದರೆ,IT ಅಲ್ಲಿ ಅದನ್ನು ಹೊಂದಿಸಬೇಕು.
    It is best to have it as the medium of education. I regret not having kannada as a medium of education myself. Now, I find it so hard to write letters( e-mails) to my grandmother in Kannada.

    Till recently I never did think I could type in Kannada with all that painful capitalization etc etc. However, luckily, they brought about this new technology called http://quillpad.in/kannada/ through which I can peacefully type in kannada with out all these obstacles of software etc..

    I am glad that IT has come to save Kannada from devastation. and I believe education in Kannada is a must.

    ReplyDelete

LinkWithin

Related Posts with Thumbnails