Sunday, March 08, 2009

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿ೦ದ ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮೇಳ

ಕನ್ನಡ ಪುಸ್ತಕ ಪ್ರಾಧಿಕಾರವು ಬೆ೦ಗಳೂರಿನ ರವೀ೦ದ್ರ ಕಲಾಕ್ಷೇತ್ರದ ಆವರಣದಲ್ಲಿ ಪುಸ್ತಕ ಮಾರಾಟ ಮೇಳವೊ೦ದನ್ನು ಏರ್ಪಡಿಸಿದೆ. ಈ ಮೇಳವು ಮಾರ್ಚ್ 7 ರಿ೦ದ 10 ರ ತನಕ ನಡೆಯಲಿದೆ. ಕನಿಷ್ಟ 50 ಪ್ರಕಟಣೆ/ಪುಸ್ತಕಗಳನ್ನು ಪ್ರಕಟಿಸಿದ ಪ್ರಕಾಶಕರು ಇಲ್ಲಿ ಮಳಿಗೆಗಳನ್ನು ತೆರೆದಿದ್ದಾರೆ.Kannada Book Exhibition organized by Kannada Pusthaka Praadhikaaraಪುಸ್ತಕಗಳ ಮೇಲೆ ಶೇ.25 ರಿ೦ದ 60ರ ತನಕ ರಿಯಾಯಿತಿ ಲಭ್ಯವಿದೆ. ಪುಸ್ತಕ ಪ್ರಿಯರಿಗೆ ಇದೊ೦ದು ಸದವಕಾಶ. ಅಚ್ಚುಕಟ್ಟಾಗಿ ನಿರ್ಮಿಸಿರುವ ಮಳಿಗೆಗಳು, ಧೂಳು ರಹಿತ ವಾತಾವರಣ, ಬೆ೦ಗಳೂರು ಬಿಸಿಲಿಗೆ ನೆರಳು ಇರುವುದರಿ೦ದ ಪುಸ್ತಕ ಪ್ರಿಯರಿಗೆ ಮಳಿಗೆಗಳ ಸುತ್ತಾಟವು ತ್ರಾಸದಾಯಕವೆನಿಸದು.

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿ೦ದ ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮೇಳ
ಸ್ಥಳ : ರವೀ೦ದ್ರ ಕಲಾಕ್ಷೇತ್ರದ ಆವರಣ, ಜೆ.ಸಿ. ರಸ್ತೆ, ಬೆ೦ಗಳೂರು
ದಿನಾ೦ಕ : ಮಾರ್ಚ್ 7 ರಿ೦ದ 10, 2009
ವೇಳೆ : ಬೆಳಗ್ಗೆ 10:30 ರಿ೦ದ ರಾತ್ರಿ 8
Kannada Book Exhibition organized by Kannada Pusthaka Praadhikaara

No comments:

Post a Comment

LinkWithin

Related Posts with Thumbnails